ಅಮೇಥಿ: ರಾಜಕೀಯ ದ್ವೇಷದಲ್ಲಿ ಬಿಜೆಪಿ ಬೆಂಬಲಿಗನ ಹತ್ಯೆ; ಮೂವರ ಬಂಧನ
Team Udayavani, May 27, 2019, 3:58 PM IST
ಸುರೇಂದ್ರ ಸಿಂಗ್ ಜತೆ ಇರಾನಿ
ಅಮೇಥಿ : ಅಮೇಥಿಯಲ್ಲಿನ ಬಿಜೆಪಿ ಬೆಂಬಲಿಗ ಸುರೇಂದ್ರ ಸಿಂಗ್ ಹತ್ಯೆಯು ರಾಜಕೀಯ ದ್ವೇಷದ ಫಲವಾಗಿದೆ ಎಂದು ಇಂದು ಸೋಮವಾರ ಮಹತ್ವದ ಬೆಳವಣಿಗೆಯಲ್ಲಿ ಇಲ್ಲಿನ ಮೂಲಗಳು ಹೇಳಿವೆ.
ಸುರೇಂದ್ರ ಸಿಂಗ್ ಅವರು ಈ ಹಿಂದೆ ಗ್ರಾಮ ಪ್ರಧಾನರಾಗಿದ್ದ ಕೆಲವೊಂದು ವಿವಾದಗಳಿದ್ದು ಆತನ ಹತ್ಯೆಗೆ ಇದುವೇ ನಿಜವಾದ ಕಾರಣ ಇದ್ದಿರಬಹುದು ಎಂದು ಶಂಕಿಸಲಾಗಿದೆ.
ಸುರೇಂದ್ರ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಮಚಂದ್ರ, ಧರ್ಮನಾಥ ಗುಪ್ತಾ ಮತ್ತು ನಸೀಂ ಎಂಬ ಮೂವರನ್ನು ಬಂಧಿಸಲಾಗಿದೆ. ಇದೇ ವೇಳೆ ಕ್ರೈಮ್ ಬ್ರ್ಯಾಂಚ್ ನವರು ಇಬ್ಬರು ಶೂಟರ್ಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಬಂಧಿತ ಆರೋಪಿ ರಾಮಚಂದ್ರ ಈ ಹಿಂದೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ.
ಪೊಲೀಸರು ಹೇಳಿರುವ ಪ್ರಕಾರ ಹತ ಸುರೇಂದ್ರ ಸಿಂಗ್ ಗೆ ಕೆಲವು ಗ್ರಾಮಸ್ಥರೊಂದಿಗೆ ಭೂವಿವಾದವಿತ್ತು. ಗ್ರಾಮ ಪಂಚಾಯತ್ ಮತ್ತು ಲೋಕಸಭಾ ಚುನಾವಣೆಯ ವೇಳೆ ಜಾಗವೊಂದರ ಬಗ್ಗೆ ಸುರೇಂದ್ರ ಸಿಂಗ್ ಮತ್ತು ಕೆಲವರ ನಡುವೆ ಜಗಳವೂ ನಡೆದಿತ್ತು.
ಈ ಕುರಿತ ವಿವರವನ್ನು ಎಫ್ಐಆರ್ ನಲ್ಲೂ ನಮೂದಿಸಲಾಗಿದೆ. ಪೊಲೀಸರು ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ