ದೆಹಲಿ: ಮನೆಯೊಡೆಯನನ್ನು ಕೊಂದು ಸೆಲ್ಫಿ ಕ್ಲಿಕ್ಕಿಸಿಕೊಂಡು ಪರಾರಿ
Team Udayavani, Aug 20, 2022, 6:58 PM IST
ನವದೆಹಲಿ: ತೀವ್ರ ವಾಗ್ವಾದದ ಬಳಿಕ ಬಾಡಿಗೆದಾರನೊಬ್ಬ ತನ್ನ ಮನೆಯೊಡೆಯನನ್ನು ಕೊಂದು, ಮೃತದೇಹದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಮೃತನ ಸಾಮಾನುಗಳೊಂದಿಗೆ ಪರಾರಿಯಾಗಿರುವ ಘಟನೆ ವಾಯುವ್ಯ ದೆಹಲಿಯ ಮಂಗೋಲ್ಪುರಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪಂಕಜ್ ಕುಮಾರ್ (25) ಸಾಹ್ನಿ ಬಿಹಾರದ ಸಮಸ್ತಿಪುರ್ ಜಿಲ್ಲೆಯವನು. ಸಾಹ್ನಿ ಮೆಟ್ರೋದಲ್ಲಿ ಪ್ರಯಾಣಿಸಿ, ಬಂಧನಕ್ಕೊಳಗಾಗುವುದನ್ನು ತಪ್ಪಿಸಲು ನವದೆಹಲಿಯಿಂದ ಹರಿಯಾಣದ ರೋಹ್ಟಕ್ಗೆ ರೈಲು ಹತ್ತಿದ್ದ ಆದರೆ ಆತನನ್ನು ಮಂಗೋಲ್ಪುರಿ ಕೈಗಾರಿಕಾ ಪ್ರದೇಶದಲ್ಲಿ ಪತ್ತೆಹಚ್ಚಲಾಯಿತು ಮತ್ತು ಸುಮಾರು 250 ಕಿಲೋಮೀಟರ್ಗಳವರೆಗೆ ಹಿಂಬಾಲಿಸಿ ನಂತರ ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಗದೀಶ್ ಅವರು ತಂದೆ ಸುರೇಶ್ ಅವರ ಹತ್ಯೆ ನಡೆದಿದೆ ಎಂದು ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಜಗದೀಶ್ ಪ್ರಕಾರ, ನಾಲ್ಕು ದಿನಗಳ ಹಿಂದೆ ಸಾಹ್ನಿ ಅವರ ತಂದೆ ಬಂದು ಅವನನ್ನು ಅನಾಥ ಎಂದು ಪರಿಚಯಿಸಿದರು ಮತ್ತು ಎರಡನೇ ಮಹಡಿಯನ್ನು ತನಗೆ ಬಾಡಿಗೆಗೆ ನೀಡಬೇಕೆಂದು ಕೇಳಿದ್ದರು. ಅವರು ಸಾಹ್ನಿಗೆ ತಮ್ಮ ಮನೆಯಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 9 ರ ಸಂಜೆ, ಸಾಹ್ನಿ ಕುಡಿದ ಮತ್ತಿನಲ್ಲಿ ಮನೆಗೆ ಮರಳಿದ್ದು, ಸುರೇಶ್ ಮತ್ತು ಅವನ ನಡುವೆ ವಾಗ್ವಾದವೂ ನಡೆಯಿತು. ನಂತರ ಸಾಹ್ನಿ ಸುರೇಶ್ ಮತ್ತು ಜಗದೀಶ್ ಅವರಲ್ಲಿ ಕ್ಷಮೆಯಾಚಿಸಿದಾಗ ವಿಷಯ ಶಾಂತವಾಗಿತ್ತು. ಆಗಸ್ಟ್ 10 ರಂದು ಮುಂಜಾನೆ ಜಗದೀಶ್ಗೆ ಕರೆ ಮಾಡಿದ ಸಾಹ್ನಿ, ಸುರೇಶ್ ತನ್ನ ವಿರುದ್ಧ ಅಸಭ್ಯ ಪದಗಳನ್ನು ಬಳಸಿದ್ದರಿಂದ ಅವನು ರಾತ್ರಿ 11 ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ಹೋಗಿರುವುದಾಗಿ ತಿಳಿಸಿದನು. ಅಸಹಜ ಮತ್ತು ಅನುಮಾನಾಸ್ಪದ ಸಂಗತಿಯನ್ನು ಗ್ರಹಿಸಿದ ಜಗದೀಶ್ ಮೊದಲ ಮಹಡಿಗೆ ಧಾವಿಸಿ ನೋಡಿದಾಗ ತನ್ನ ತಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಮತ್ತು ತಲೆಗೆ ಗಾಯವಾಗಿ ರಕ್ತಸ್ರಾವವಾಗುವುದನ್ನು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಬೆಳಗ್ಗೆ 6.41 ಕ್ಕೆ ಕೊಲೆಯ ಬಗ್ಗೆ ಪೊಲೀಸರಿಗೆ ಕರೆ ಬಂದಿತು ಮತ್ತು ಸ್ಥಳಕ್ಕೆ ಬಂದರು. ಸುರೇಶ್ ತಲೆಯಿಂದ ರಕ್ತಸ್ರಾವ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಅವರು ಕಂಡುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ