ದೇವಸ್ಥಾನದ ಆವರಣದೊಳಗೆ ದನದ ತಲೆ: ಅಲಹಾಬಾದ್ ಉದ್ವಿಗ್ನ
Team Udayavani, Apr 17, 2017, 11:09 AM IST
ಅಲಹಾಬಾದ್ : ಉತ್ತರ ಪ್ರದೇಶದ ಅಲಹಾಬಾದ್ನ ಶಿವಕುಟಿ ಪ್ರದೇಶದಲ್ಲಿರುವ ಅಖೀಲೇಶ್ವರ ಮಹಾದೇವ ದೇವಸ್ಥಾನದಲ್ಲಿ ಕಳೆದ ಶನಿವಾರ ಹತ್ಯೆಗೈಯಲ್ಪಟ್ಟ ದನದ ತಲೆಯೊಂದು ಕಾಣಿಸಿಕೊಂಡ ಘಟನೆಯನ್ನು ಅನುಸರಿಸಿ ತೀವ್ರ ಉದ್ವಿಗ್ನತೆ ತಲೆದೋರಿದೆ.
ದೇವಸ್ಥಾನದ ಆವರಣದೊಳಗೆ ದನದ ಕರುವಿನ ಕಡಿಯಲ್ಪಟ್ಟ ತಲೆ ಭಾಗವು ಕಂಡು ಬಂದುದನ್ನು ಅನುಸರಿಸಿ ದೇವಳದ ಅರ್ಚಕ ಅಖೀಲೇಶ್ ಪಾಂಡೆ ಅವರು ಒಡನೆಯೇ ಪೊಲೀಸರಿಗೆ ಮಾಹಿತಿ ನೀಡಿದರು.
ದೇವಸ್ಥಾನದ ಆವರಣದೊಳಗೆ ಕರುವಿನ ಕಡಿದ ತಲೆ ಕಂಡು ಬಂತೆನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬತೊಡಗಿದಾಗ ಹಿಂದೂ ಸಂಘಟನೆಗಳ ಕಾರ್ಯಕರ್ತರು ದೇವಸ್ಥಾನದ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಕೂಡಲೇ ಸೆರೆ ಹಿಡಿಯುವಂತೆ ಅವರು ಸರಕಾರವನ್ನು, ಪೊಲೀಸರನ್ನು ಆಗ್ರಹಿಸಿದರು.
ನಾಲ್ಕು ಪೊಲೀಸ್ ಠಾಣೆಗಳಿಂದ ಭರಪೂರ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಪರಿಸ್ಥಿತಿ ಹದಗೆಡದಂತೆ ಎಚ್ಚರಿಕೆ ವಹಿಸಿ, ಘಟನೆಗೆ ಸಂಬಂಧಿಸಿದ ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚಿ ಸೆರೆ ಹಿಡಿಯಲಾಗುವುದೆಂಬ ಭರವಸೆ ನೀಡಿದರು.
ಮುನ್ನೆಚ್ಚರಿಕೆಯ ಕ್ರಮವಾಗಿ ದೇವಳಕ್ಕೆ ಸಮೀಪವೇ ಇರುವ ಶಾಲೆಯನ್ನು ಇಂದು ಸೋಮವಾರ ಮುಚ್ಚಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ