ಶ್ರೀನಗರ: ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ಪತ್ರ
Team Udayavani, Dec 19, 2022, 6:20 AM IST
ಶ್ರೀನಗರ: ಕಾಶ್ಮೀರಿ ಪಂಡಿತರಿಗೆ ಮತ್ತೆ ಲಷ್ಕರ್ ಪ್ರೇರಿತ ಉಗ್ರವಾದಿ ಸಂಘಟನೆ “ದಿ ರೆಸಿಸ್ಟೆನ್ಸ್ ಫ್ರಂಟ್'(ಟಿಆರ್ಎಫ್) ಬೆದರಿಕೆ ಹಾಕಿದೆ. ಅಷ್ಟೇ ಅಲ್ಲ, ಜಮ್ಮು ಮತ್ತು ಕಾಶ್ಮೀರದ 6 ಮಂದಿ ಅಧಿಕಾರಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದು, “ಈ ಪಟ್ಟಿ ನಿಮ್ಮೆಲ್ಲರ ಕಣ್ಣು ತೆರೆಸಲಿ’ ಎಂದು ಬರೆಯಲಾಗಿದೆ.
“ಕಾಶ್ಮೀರಿ ಪಂಡಿತ ಸಮುದಾಯವು ಯಾವಾಗ ನೋಡಿದರೂ ತಾವೇ ಬಲಿಪಶು ಗಳು ಎಂಬಂತೆ ತೋರಿಸಿಕೊಳ್ಳುತ್ತದೆ. ವಲಸಿಗ ಪಂಡಿತರ “ಪಿಎಂ ಪ್ಯಾಕೇಜ್ ವಿದೂಷಕ’ರಂತೆ ವರ್ತಿಸುವವರು ಮತ್ತು ಪಂಡಿತರ ಪರ ಮೃದು ಧೋರಣೆ ಹೊಂದಿರುವ ಎಲ್ಲರಿಗೂ ಇದು ಕಣ್ಣು ತೆರೆಸುವಂಥ ಪಟ್ಟಿಯಾಗಿದೆ. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಈ 6 ಅಧಿಕಾರಿಗಳು 1990ರ ದಶಕದಲ್ಲಿ ಗುಪ್ತಚರ ಬ್ಯೂರೋದ ದಾಳವಾಗಿದ್ದರು. ಈಗ ಸಂ ಅಜೆಂಡಾಗೆ ತಕ್ಕಂತೆ ನಡೆಯುತ್ತಿ ದ್ದಾರೆ’ ಎಂದೂ ಬೆದರಿಕೆ ಪತ್ರದಲ್ಲಿ ಬರೆಯ ಲಾಗಿದೆ.ಕೇವಲ ಶಿಕ್ಷಣ ಇಲಾಖೆ ಮಾತ್ರವಲ್ಲ, ಎಲ್ಲ ಇಲಾಖೆಗಳಲ್ಲೂ ಈ ದಿಲ್ಲಿ ಪ್ರಾಯೋ ಜಿತ ಏಜೆಂಟ್ಗಳು ಕೆಲಸ ಮಾಡುತ್ತಿದ್ದಾರೆ.
ಈ ಪಟ್ಟಿ ಇಲ್ಲಿಗೇ ಮುಗಿಯುವುದಿಲ್ಲ. ಸದ್ಯದಲ್ಲೇ ಇವರೆಲ್ಲರ ರಕ್ತ ಹರಿಯಲಿದೆ ಎಂದೂ ಟಿಆರ್ಎಫ್ ಎಚ್ಚರಿಸಿದೆ. ಜತೆಗೆ, “ನಾವು ಒಂದು ವಿಚಾರ ಸ್ಪಷ್ಟಪಡಿಸುತ್ತೇವೆ- 1990ರ ದಶಕದಲ್ಲಿ ವಲಸೆ ಹೋಗದೇ, ಕಾಶ್ಮೀರದಲ್ಲೇ ಉಳಿದಿದ್ದಂತಹ ಪಂಡಿತರು ಯಾವುದೇ ಕಾರಣಕ್ಕೂ ಚಿಂತೆ ಪಡಬೇಕಾಗಿಲ್ಲ’ ಎಂದೂ ಪತ್ರದಲ್ಲಿ ಬರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ