
500 ರೂ. 20 ಆಗಿ ಬದಲು..!
ಪ್ರಯಾಣಿಕನ ನೋಟನ್ನೇ ಅದಲು ಬದಲು ಮಾಡಿದ ರೈಲ್ವೇ ಸಿಬಂದಿ
Team Udayavani, Nov 28, 2022, 10:50 AM IST

ಹೊಸದಿಲ್ಲಿ: ಟಿಕೆಟ್ ಖರೀದಿ ವೇಳೆ ರೈಲ್ವೇ ಅಧಿಕಾರಿಯೊಬ್ಬರು ಪ್ರಯಾಣಿಕರಿಗೆ ವಂಚಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ದಿಲ್ಲಿಯ ಹಜರತ್ ನಿಜಾ ಮುದ್ದೀನ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, “ರೈಲ್ವೇ ಉದ್ಯೋಗಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಉತ್ತರ ರೈಲ್ವೇಯ ಸೇವಾ ಮತ್ತು ದಿಲ್ಲಿ ವಿಭಾಗ ಹೇಳಿದೆ.
ಸೂಪರ್ಫಾಸ್ಟ್ ಗ್ವಾಲಿಯರ್ ರೈಲಿನಲ್ಲಿ ಸಂಚರಿಸಬೇಕಾಗಿದ್ದ ಪ್ರಯಾಣಿಕ 125 ರೂ.ಗಳ ಟಿಕೆಟ್ ಖರೀದಿಸಬೇಕಿತ್ತು. ಅದರಂತೆ, ಅವನು 500 ರೂ.ಗಳ ನೋಟನ್ನು ಟಿಕೆಟ್ ಕೌಂಟರ್ನಲ್ಲಿ ಕುಳಿತಿದ್ದ ವ್ಯಕ್ತಿಗೆ ನೀಡುತ್ತಾನೆ. ಆದರೆ ಕ್ಷಣಮಾತ್ರದಲ್ಲಿ ಆ 500 ರೂ. ನೋಟನ್ನು ಮತ್ತೂಂದು ಕೈಗೆ ಬದಲಾಯಿಸುವ ರೈಲ್ವೇ ಉದ್ಯೋಗಿ, 500ರೂ. ಇದ್ದ ಜಾಗದಲ್ಲಿ 20 ರೂ. ನೋಟನ್ನು ಇಡುತ್ತಾನೆ. ಅನಂತರ “ಇದೇನಿದು? 20 ರೂ. ಕೊಟ್ಟಿದ್ದಿ. ಟಿಕೆಟ್ಗೆ 125 ರೂ. ಆಗುತ್ತೆ. ಉಳಿದ 105 ರೂ. ಕೊಡು’ ಎಂದು ಕೇಳುತ್ತಾನೆ. ಆದರೆ ರೈಲ್ವೇ ಸಿಬಂದಿಯ ಈ “ಕಣ್ಣಾಮುಚ್ಚಾಲೆ ಆಟ’ ಪ್ರಯಾಣಿಕನ ಮೊಬೈಲ್ನಲ್ಲಿ ಸೆರೆಯಾಗಿರುತ್ತದೆ.
ಇದರ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ತಮಗೂ ಇಂಥದ್ದೇ ಅನುಭವ ಹಲವು ಬಾರಿ ಆಗಿರುವುದಾಗಿ ಅಳಲು ತೋಡಿ ಕೊಂಡಿದ್ದಾರೆ. ರೈಲ್ವೇ ಅಧಿಕಾರಿಗಳು ಆ ವ್ಯಕ್ತಿಯ ವಿರುದ್ಧ ಶಿಸ್ತುಕ್ರಮದ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ 25 ಸಾವಿರಕ್ಕೂ ಅಧಿಕ ಭಕ್ತರ ದಂಡು

ಸಮಾಜದಲ್ಲಿ ತುಳಿತಕ್ಕೆ ಒಳಗಾದ ಪ್ರತಿ ವರ್ಗದ ಅಭಿವೃದ್ಧಿಗೆ ಬದ್ಧ: ಮೋದಿ

ಬಸ್ ಚಾಲಕನ ವೇಗಕ್ಕೆ ಕಳಚಿ ಹೋದ ಚಕ್ರ: ಅಪಾಯದಿಂದ ಪಾರಾದ ಪ್ರಯಾಣಿಕರು

ಕುಂದಾಪುರ: ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ

ಅಂಬೇಡ್ಕರ್ ಪ್ರತಿಮೆ ಭಗ್ನ: ಪೊಲೀಸರಿಂದ ವ್ಯಕ್ತಿ ಬಂಧನ