ರೈತನಿಗೆ ಬಿಹಾರ ಸಿಎಂ ನಿತೀಶ್ ಭಾಷಾ ಪಾಠ
Team Udayavani, Feb 23, 2023, 5:10 AM IST
ಪಟ್ನಾ: ಕೃಷಿ ಬಗ್ಗೆ ಇಂಗ್ಲಿಷ್ನಲ್ಲಿಯೇ ಮಾತನಾಡುತ್ತಿದ್ದ ರೈತೋದ್ಯಮಿಯೊಬ್ಬರಿಗೆ ಬಿಹಾರ ಸಿಎಂ ನಿತೀಶ್ ಕುಮಾರ್, ಸ್ಥಳೀಯ ಭಾಷೆ ನೆನಪಿಸಿ ಕೊಟ್ಟಿದ್ದಾರೆ.
ಇಂಗ್ಲಿಷ್ನಲ್ಲಿ ಮಾತನಾಡಲು ಇದೇನು ಇಂಗ್ಲೆಂಡ್ ರಾಷ್ಟ್ರವೇ ಎಂದು ಪ್ರಶ್ನಿಸಿದ್ದಾರೆ. ರೈತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತ ಅಮಿತ್ ಕುಮಾರ್, ತನ್ನ ಊರಿನಲ್ಲಿಯೇ ಕೃಷಿ ಮಾಡಬೇಕೆಂಬ ಕನಸಿತ್ತು.
ಸರಕಾರದ ಯೋಜನೆಗಳಿಂದ ಲಾಭವಾಗಿದೆ ಎಂದು ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದರು. ಅದನ್ನು ತಡೆದ ಸಿಎಂ ನಿತೀಶ್ ಮತ್ತೂಬ್ಬರಿಗೆ ಸಹಾಯವಾಗಲಿ ಎಂದು ನಿಮ್ಮನ್ನು ಕರೆಸಿದ್ದೇವೆ. ನೀವು ಇಂಗ್ಲಿಷ್ನಲ್ಲಿ ಹೇಳಿದರೆ ಸಾಮಾನ್ಯ ರೈತನೊಬ್ಬನಿಗೆ ಅರ್ಥವಾಗುವುದು ಹೇಗೆ? ಇಂಗ್ಲಿಷ್ನಲ್ಲಿಯೇ ಮಾತನಾಡಲು ನಾವು ಇಂಗ್ಲೆಂಡ್ನಲ್ಲಿದ್ದೇವೆಯೇ? ಸ್ಥಳೀಯ ಭಾಷೆಯಲ್ಲೇ ಮಾತಾಡಿ ಎಂದರು.