ಇನ್ನೊಂದೇ ರಫೇಲ್ ಬಾಕಿ; 3 ಹೊಸ ವಿಮಾನ ಆಗಮನ
ಈವರೆಗೆ ಒಟ್ಟು 35 ಸೇರ್ಪಡೆ
Team Udayavani, Feb 24, 2022, 7:55 AM IST
ಹೊಸದಿಲ್ಲಿ: ಭಾರತ-ಫ್ರಾನ್ಸ್ ನಡುವಿನ ರಫೇಲ್ ಯುದ್ಧ ವಿಮಾನ ಒಪ್ಪಂದದಡಿ ಭಾರತಕ್ಕೆ ಬರಬೇಕಿದ್ದ ಯುದ್ಧ ವಿಮಾನಗಳ ಪೈಕಿ, ಮೂರು ಹೊಸ ರಫೇಲ್ ಯುದ್ಧ ವಿಮಾನಗಳು ಬುಧವಾರ ಭಾರತಕ್ಕೆ ಆಗಮಿಸಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ, 2016ರಲ್ಲಿ ಎರಡೂ ದೇಶಗಳ ನಡುವೆ ಮಾಡಿಕೊಂಡಿದ್ದ 59 ಸಾವಿರ ಕೋಟಿ ರೂ. ಮೌಲ್ಯದ ಒಪ್ಪಂದದ ಪ್ರಕಾರ ಭಾರತಕ್ಕೆ ಫ್ರಾನ್ಸ್ನಿಂದ 36 ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳು ಬರಬೇ ಕಿತ್ತು. ಬುಧವಾರ ಆಗಮಿಸಿರುವ ಮೂರು ವಿಮಾನಗಳು ಸೇರಿದಂತೆ ಈವರೆಗೆ 35 ಯುದ್ಧ ವಿಮಾನಗಳು ಭಾರತೀಯ ವಾಯು ಪಡೆಯನ್ನು ಸೇರ್ಪಡೆಗೊಂಡಿವೆ. ಇನ್ನೊಂದು ವಿಮಾನ ಸೇರ್ಪಡೆ ಬಾಕಿ ಯಿದ್ದು, ಮಾರ್ಚ್ ಅಥವಾ ಎಪ್ರಿಲ್ ಕೊನೆಯ ಭಾಗದಲ್ಲಿ ಹಸ್ತಾಂತರಗೊಳ್ಳುವ ನಿರೀಕ್ಷೆಯಿದೆ” ಎಂದು ತಿಳಿಸಿದೆ.
ಸಚಿವ ಜೈಶಂಕರ್ ಹರ್ಷ: ಒಪ್ಪಂದ ಪೂರ್ಣಗೊಳ್ಳುವ ಹಂತಕ್ಕೆ ಬಂದಿರುವುದಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ, ರಷ್ಯಾ-ಉಕ್ರೇನ್ ಯುದ್ಧ ಭೀತಿ ಸೇರಿದಂತೆ ಅನೇಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಪ್ರಪಂಚ ಮುನ್ನಡೆಯುತ್ತಿದೆ. ಭಾರತ ಕೂಡ ಕಳೆದೆ ರಡು ದಶಕಗಳಲ್ಲಿ ಇಂಥದ್ದೇ ಪ್ರಯತ್ನಗಳನ್ನು ಮಾಡಿದ್ದು, ಅದರ ಭಾಗವೇ ಭಾರತ-ಫ್ರಾನ್ಸ್ ನಡುವೆ ರಫೇಲ್ ಯುದ್ಧ ವಿಮಾನಗಳ ಒಪ್ಪಂದವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಸಮಯ ಬದಲಾವಣೆ
ಭಾರತ- ಫ್ರಾನ್ಸ್ ಹೊಸ ಒಪ್ಪಂದ?
36 ರಫೇಲ್ ಯುದ್ಧ ವಿಮಾನಗಳ ಹಸ್ತಾಂತರಿಸುವ ಒಪ್ಪಂದ ಅಂತ್ಯಗೊಳ್ಳುತ್ತಿರುವ ಹೊತ್ತಿಗೆ ಭಾರತದೊಂದಿಗೆ ಹೊಸತೊಂದು ಒಪ್ಪಂದ ಮಾಡಿಕೊಳ್ಳಲು ಫ್ರಾನ್ಸ್ ಚಿಂತನೆ ನಡೆಸಿದೆ. ಭಾರತೀಯ ವಾಯುಪಡೆಗೆ 36 ಮಲ್ಟಿರೋಲ್ ಫೈಟರ್ ಜೆಟ್ಗಳನ್ನು (ಎಂಆರ್ಎಫ್ಎ) ಒದಗಿಸುವ ನಿಟ್ಟಿನಲ್ಲಿ ಮಾತುಕತೆಗಳು ಸಾಗಿವೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ವಾಯುಪಡೆಗೆ ಯುದ್ಧ ವಿಮಾನಗಳ 42 ಸ್ಕ್ವಾಡ್ರನ್ಗಳನ್ನು ನಿರ್ವಹಿಸಲು ಅವಕಾಶವಿದೆ. ಆದರೆ ವಾಯುಪಡೆ 32 ಸ್ಕ್ವಾಡ್ರನ್ಗಳನ್ನು ಮಾತ್ರ ಮುನ್ನಡೆಸುತ್ತಿದೆ. ಹಾಗಾಗಿ ಹೊಸ ಯುದ್ಧ ವಿಮಾನಗಳ ಸೇರ್ಪಡೆ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿದ್ದು, ಎಂಆರ್ಎಫ್ಎಗಳನ್ನು ಒದಗಿಸುವ ಹೊಸ ಒಪ್ಪಂದ ಮಾಡಿಕೊಳ್ಳಲು ಫ್ರಾನ್ಸ್-ಭಾರತ ಚಿಂತನೆ ನಡೆಸಿವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು