ತಿರುಮಲದಲ್ಲಿ 21, 22ರಂದು ವಿಐಪಿ ದರ್ಶನ ಇಲ್ಲ: ಟಿಟಿಡಿ ಟ್ರಸ್ಟ್ ಹೇಳಿಕೆ
Team Udayavani, Mar 13, 2023, 7:55 AM IST
ತಿರುಪತಿ: ಆಂಧ್ರ ಪ್ರದೇಶದ ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ದೇಗುಲದಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಾ.21 ಮತ್ತು 22ರಂದು ವಿಐಪಿ ದರ್ಶನ ಇರುವುದಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಗಳು(ಟಿಟಿಡಿ) ಟ್ರಸ್ಟ್ ತಿಳಿಸಿದೆ.
ಶೋಭಕೃತ ನಾಮ ಸಂವತ್ಸರ ಚೈತ್ರ ಶುದ್ಧ ಪಾಡ್ಯಮಿ ದಿನವಾದ ಮಾ.22ರಂದು ಶ್ರೀ ವೆಂಕಟೇಶ್ವರ ದೇಗುಲದಲ್ಲಿ ಟಿಟಿಡಿ ವತಿಯಿಂದ ಯುಗಾದಿ ಅಷ್ಟನಾಮ ಏರ್ಪಡಿಸಲಾಗಿದೆ.
ಸಾಂಪ್ರದಾಯಿಕ ಆಚರಣೆಯ ಪ್ರಕಾರ, ಹಿಂದಿನ ದಿನವಾದ ಮಾ.21ರಂದು ದೇವಸ್ಥಾನದ ಆವರಣದಲ್ಲಿರುವ ಕೋಯಿಲ್ ಆಳ್ವಾರ್ ತಿರುಮಂಜನಂ ದೇಗುಲವನ್ನು ಸ್ವತ್ಛಗೊಳಿಸಲಾಗುತ್ತದೆ. ಮಾ.22ರಂದು ದೇಗುಲದಲ್ಲಿ ಏಕಾಂತದಲ್ಲಿ ಆರ್ಜಿತ ಸೇವೆಗಳನ್ನು ಸಲ್ಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಎರಡು ದಿನಗಳಂದು ತಾತ್ಕಲಿಕವಾಗಿ ವಿಐಪಿ ದರ್ಶನವನ್ನು ರದ್ದುಪಡಿಸಲಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ