ಸಿನೆಮಾ ನಟಿ TMC ಅಭ್ಯರ್ಥಿ ಕೈಗೆ ಗ್ಲೌಸ್ ಧರಿಸಿ shake hand; ಮತದಾರರಿಗೆ ಅವಮಾನ: BJP
Team Udayavani, Apr 12, 2019, 11:36 AM IST
ಜಾದವಪುರ : ಪಶ್ಚಿಮ ಬಂಗಾಲದ ಜಾದವಪುರದ ಟಿಎಂಸಿ ಅಭ್ಯರ್ಥಿಯಾಗಿರುವ, ರಾಜಕಾರಣಿಯಾಗಿ ಪರಿವರ್ತಿತ ನಟಿ ಮಿಮಿ ಚಕ್ರವರ್ತಿ ಅವರು ನಿನ್ನೆ ಗುರುವಾರ ಚುನಾವಣಾ ಪ್ರಚಾರದ ವೇಳೆ ಕೈಗೆ ಗ್ಲೌಸ್ ತೊಟ್ಟುಕೊಂಡು ಜನರ ಕೈಕುಲುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ಮತದಾರನ್ನು ಅವಮಾನಿಸುವ ಟಿಎಂಸಿ ವೈಖರಿ ಎಂದು ಬಿಜೆಪಿ ಟೀಕಿಸಿದೆ.
ಮಿಮಿ ಚಕ್ರವರ್ತಿ ಕೈಗೆ ಗ್ಲೌಸ್ ತೊಟ್ಟುಕೊಂಡು ಮತದಾರರ ಕೈಕುಲುತ್ತಿರುವ ಫೋಟೋವನ್ನು ಈಚೆಗೆ ಬಿಜೆಪಿಗೆ ಸೇರಿರುವ ಮೇಜರ್ ಸುರೇಂದ್ರ ಪೂಣಿಯಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರಲ್ಲದೆ ಅದರ ಜತೆಗೆ “ನೋವು ಮತ್ತು ಜುಗುಪ್ಸೆ ಉಂಟಾಗಿದೆ. ಈ ರೀತಿಯ ಜನರು ಸಂಸತ್ತಿನಲ್ಲಿರುವುದಕ್ಕೆ ಭಾರತೀಯ ಪ್ರಜಾಸತ್ತೆ ಅರ್ಹವಲ್ಲ’ ಎಂಬ ಬರಹವನ್ನು ಕೂಡ ಸೇರಿಸಿದ್ದಾರೆ.
ಆದರೆ 30ರ ಹರೆಯದ ಟಿಎಂಸಿ ಅಭ್ಯರ್ಥಿ ಮಿಮಿ ಅವರನ್ನು ಸಮರ್ಥಿಸಿಕೊಂಡು ಮಿಮಿ ಅವರ ತಂಡ ಕೊಟ್ಟಿರುವ ಉತ್ತರ ಹೀಗಿದೆ : ಕೆಲ ದಿನಗಳ ಹಿಂದೆ ಚುನಾವಣಾ ಪ್ರಚಾರಾಭಿಯಾನದ ವೇಳೆ ಬೆರಳಿಗೆ, ಉಗುರಿಗೆ ಗಾಯಮಾಡಿಕೊಂಡಿದ್ದ ಮಿಮಿ ಅವರು ಯಾರಿಗೂ ಮುಜುಗರವಾಗಬಾರದೆಂಬ ಕಾರಣಕ್ಕೆ ಕೈಗೆ ಗ್ಲೌಸ್ ತೊಟ್ಟಿಕೊಂಡಿದ್ದಾರೆ’ ಎಂದು ಹೇಳಿದೆ.
ಅಂದ ಹಾಗೆ ಪಶ್ಚಿಮ ಬಂಗಾಲ ಲೋಕಸಭಾ ಚುನಾವಣೆಯ ಎಲ್ಲ 7 ಹಂತಗಳಲ್ಲಿ ಮತದಾನ ಮಾಡಲಿದ್ದು ನಿನ್ನೆ ಗುರುವಾರ ನಡೆದಿದ್ದ ಮೊದಲ ಹಂತದಲ್ಲಿ ನಡೆದಿದ್ದ ಎರಡು ಕ್ಷೇತ್ರಗಳ ಚುನಾವಣೆಯಲ್ಲಿ 18 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ
ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು
ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ
ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು
ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್
ಹೊಸ ಸೇರ್ಪಡೆ
ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು
ತರಗತಿ, ಲೈಬ್ರೆರಿಗೆ ಹಿಜಾಬ್ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ
ಶಿಶಿಲ: ದೇವರ ಮೀನುಗಳಿಗೆ ನೀರುನಾಯಿ ಕಾಟ; ಭಕ್ತರಿಗೆ ಆತಂಕ; ಅರಣ್ಯ ಇಲಾಖೆಗೆ ಉಭಯ ಸಂಕಟ !
ಉದಯವಾಣಿ-ಎಂಐಟಿ ಮಳೆ ನೀರು ಕೊಯ್ಲು ಕಾರ್ಯಾಗಾರ: ಸಮಸ್ಯೆಗೆ ಮೊದಲೇ ಪರಿಹಾರ: ಡಾ| ರಾಣ ಕರೆ
ಮದುವೆ ಹಾಲ್ನಲ್ಲಿ ಕಣ್ಮರೆಯಾದ ಚಿನ್ನದ ಸರ ದೈವ ಸನ್ನಿಧಿಯಲ್ಲಿ ಪತ್ತೆ!