ಇಂದು ‘ವಿಶ್ವ ಗಜ ದಿನ’- ಇದು ಜಂಬೋ ಲೋಕ; ಇವುಗಳನ್ನು ನೋಡಿದರೆ ನಿಮಗೆ ನಗೆಯುಕ್ಕುವುದು ಪಕ್ಕಾ!


Team Udayavani, Aug 12, 2020, 6:12 PM IST

Elephant-New

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ನಮ್ಮಲ್ಲಿ ಎಲ್ಲದಕ್ಕೂ ಒಂದೊಂದು ದಿನ ಎಂದು ನಿಗದಿಯಾಗಿರುತ್ತದೆ.

ಹಾಗೆಯೇ ಇಂದು ವಿಶ್ವ ಆನೆಗಳ ದಿನ, ಅಥವಾ ಇದನ್ನು ನಾವು ವಿಶ್ವ ಗಜ ದಿನವೆಂದೂ ಸಹ ಕರೆಯಬಹುದು.

ಆನೆಗಳು ಪ್ರಕೃತಿಯಲ್ಲಿ ವಾಸವಾಗಿರುವ ಅತೀದೊಡ್ಡ ಜೀವಿಗಳಲ್ಲಿ ಒಂದೆಂಬ ಸ್ಥಾನವನ್ನು ಪಡೆದುಕೊಂಡಿವೆ.

ನಮ್ಮ ದೇಶದಲ್ಲಿ ಆನೆಗಳಿಗೆ ವಿಶೇಷವಾದ ಸ್ಥಾನವಿದೆ. ಪ್ರಥಮ ಪೂಜಿತ ಗಣೇಶನೂ ಆನೆ ಮುಖದ ದೇವರೇ ಹಾಗಾಗಿ ಗಣೇಶನನ್ನು ನಾವೆಲ್ಲಾ ಗಜಮುಖ ಎಂದೇ ಕರೆಯುವುದು.

ಇನ್ನು ದಕ್ಷಿಣ ಭಾರತದ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ಒಂದಾದರೂ ಆನೆ ಇದ್ದೇ ಇರುತ್ತದೆ. ಹಾಗಾಗಿ ನಮಗೂ ಆನೆಗಳಿಗೂ ಬಾಲ್ಯದಿಂದಲೇ ಒಂದು ನಂಟು ಬೆಳೆದುಬಿಟ್ಟಿರುತ್ತದೆ.

ಇನ್ನು ನಮ್ಮಲ್ಲಿ ಕಾಡುಗಳ್ಳರ ಹಾವಳಿಗೆ ಅತೀ ಹೆಚ್ಚು ತುತ್ತಾಗುತ್ತಿರುವುದೂ ಸಹ ಆನೆಗಳೇ. ಆನೆ ದಂತಕ್ಕೆ ಅಪಾರವಾದ ಬೇಡಿಕೆ ಮತ್ತು ಬೆಲೆ ಇರುವುದರಿಂದ ಗಂಡಾನೆಗಳು ಕಾಡುಗಳ್ಳರ ಕ್ರೂರದೃಷ್ಟಿಗೆ ತುತ್ತಾಗುತ್ತಲೇ ಇವೆ. ನಮ್ಮ ದೇಶ ಕಂಡ ಅತ್ಯಂತ ಕ್ರೂರಿ ಕಾಡುಗಳ್ಳ ವೀರಪ್ಪನ್ ಸಹ ‘ದಂತ ಚೋರ’ನೆಂದೇ ಕುಖ್ಯಾತಿಯನ್ನು ಹೊಂದಿದ್ದವ.

ಏಷ್ಯಾ ಸಹಿತ ನಮ್ಮ ದೇಶದಲ್ಲಿ ಕಾಣಸಿಗುವ ಆನೆಗಳು ಆಫ್ರಿಕಾದ ಆನೆಗಳಿಗಿಂತ ಗಾತ್ರ ಮತ್ತು ಆಕಾರದಲ್ಲಿ ಸಂಪೂರ್ಣ ಭಿನ್ನವಾಗಿವೆ. ದೊಡ್ಡ ಆನೆಗಳು ಗಾಂಭಿರ್ಯಕ್ಕೆ ಹೆಸರುವಾಸಿಯಾದರೆ ಮರಿಯಾನೆಗಳು ತಮ್ಮ ತುಂಟಾಟಗಳಿಗೆ ಪ್ರಸಿದ್ಧಿಯನ್ನು ಪಡೆದಿವೆ.

ಅವುಗಳು ತಮ್ಮ ಪುಟ್ಟ ಸೊಂಡಿಲಿನಿಂದ ಕೂಡಿದ ದೇಹದ ಮೂಲಕ ನಡೆಸುವ ತುಂಟಾಟದ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ.

ಜಗತ್ತಿನಲ್ಲಿರುವ ಒಟ್ಟು ಆನೆಗಳ ಸಂತತಿಯಲ್ಲಿ ಸರಿಸುಮಾರು 60% ಆನೆಗಳು ಭಾರತ ದೇಶದಲ್ಲಿಯೇ ಇರುವುದು ವಿಶೇಷ. ನಮ್ಮ ದೇಶದ 14 ರಾಜ್ಯಗಳಲ್ಲಿ ಇರುವ 30 ಆನೆ ಸಂರಕ್ಷಿತ ಪ್ರದೇಶಗಳಲ್ಲಿ ಈ ಗಜ ಸಂತತಿ ಹರಡಿದೆ. ಅದರಲ್ಲಿ ನಮ್ಮ ರಾಜ್ಯದ ದುಬಾರೆ ಮತ್ತು ಸಕ್ರೆಬೈಲೂ ಸಹ ಸೇರಿದೆ. ಭಾರತದಲ್ಲಿ ಸರಿಸುಮಾರು 65 ಸಾವಿರ ಚದರ ಕಿಲೋ ಮೀಟರ್ ಪ್ರದೇಶಗಳಲ್ಲಿ ಗಜ ಸಂತತಿ ವಾಸಿಸುತ್ತಿರುವುದರಿಂದ ಅವುಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವೂ ಆಗಿದೆ.

ನಮ್ಮ ಪಶ್ಚಿಮ ಘಟ್ಟ ಭಾಗಗಳಲ್ಲೂ ಆನೆಗಳ ಸಂತತಿ ಬಹಳಷ್ಟಿದೆ. ಆನೆಗಳನ್ನು ಪಳಗಿಸಿ ಅವುಗಳನ್ನು ಧಾರ್ಮಿಕ ಚಟುವಟಿಕೆಗಳಿಗೆ ಮತ್ತು ಇನ್ನಿತರ ಕೆಲಸಗಳಿಗೆ ಬಳಸಿಕೊಳ್ಳುವ ವಿಚಾರದಲ್ಲಿ ಕೇರಳ ರಾಜ್ಯ ಅಗ್ರಣಿಯಾಗಿದೆ.

ಇಂದು ವಿಶ್ವ ಗಜ ದಿನದ ಈ ಸಂದರ್ಭದಲ್ಲಿ ನಾವು ನಿಮಗೆ ಆನೆ ಮರಿಗಳ ತುಂಟಾಟಗಳ ಇಂತಹ ಕೆಲವು ವಿಡಿಯೋ ಟ್ವೀಟ್ ಗಳನ್ನು ಇಲ್ಲಿ ನೀಡುತ್ತಿದ್ದೇವೆ ನೋಡಿ ಆನಂದಿಸಿ.

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.