
ದೇಶಾದ್ಯಂತ ಟೋಲ್ ಸುಂಕ ದುಬಾರಿ
ಸಾಸ್ತಾನ ಗುಂಡ್ಮಿ, ಬ್ರಹ್ಮರಕೂಟ್ಲು , ಹೆಜಮಾಡಿ, ತಲಪಾಡಿಗಳಲ್ಲೂ ದರ ಏರಿಕೆ
Team Udayavani, Apr 1, 2023, 7:05 AM IST

ಹೊಸದಿಲ್ಲಿ /ಮಂಗಳೂರು/ಉಡುಪಿ: ದೇಶದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್ ಪ್ರಸ್ ವೇಗಳ ಟೋಲ್ ದರ ಎ.1ರಿಂದ ಜಾರಿಗೆ ಬರುವಂತೆ ಶೇ. 5ರಿಂದ 10ರಷ್ಟು ಏರಿಸಲಾಗಿದೆ.
ಹೊಸ ವಿತ್ತೀಯ ವರ್ಷ ಆರಂಭವಾಗು ತ್ತಿರುವ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರ (ಎನ್ಎಚ್ಎಐ) ವರ್ಷಂ ಪ್ರತಿ ದರ ಪರಿಷ್ಕರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ದರ ಏರಿಕೆಯಾಗಿದೆ.
ಇತ್ತೀಚೆಗೆ ಉದ್ಘಾಟನೆಗೊಂಡಿರುವ ಬೆಂಗಳೂರು ಮತ್ತು ಮೈಸೂರು ನಡುವಿನ ಟೋಲ್ ದರ 17 ದಿನಗಳ ಅವಧಿಯಲ್ಲಿ ಪರಿಷ್ಕರಣೆ ಯಾಗಿದೆ. ಈ ಎಕ್ಸ್ಪ್ರೆಸ್ ವೇಯ ಟೋಲ್ ಶುಲ್ಕ ಶೇ.22ರಷ್ಟು ಏರಿದ್ದು, ಇದು ದೇಶದಲ್ಲೇ ಅತ್ಯಧಿಕ ಎಂದು ಹೇಳಲಾಗುತ್ತಿದೆ.
ರಾ.ಹೆ. 73ರ ಬ್ರಹ್ಮರಕೂಟ್ಲು, ರಾ.ಹೆ. 66ರ ಗುಂಡ್ಮಿ, ಹೆಜಮಾಡಿ ಹಾಗೂ ತಲಪಾಡಿ ಟೋಲ್ ಬೂತ್ಗಳಲ್ಲಿ ಪರಿಷ್ಕೃತ ಟೋಲ್ ಪ್ರಕಟಿಸಲಾಗಿದೆ.
ಬ್ರಹ್ಮರಕೂಟ್ಲು ಟೋಲ್ ಸಂಬಂಧಿಸಿ, ಎನ್ಎಚ್ಎಐ ಪ್ರಕಾರ ಯೋಜನೆಯ ಬಂಡವಾಳ ವೆಚ್ಚವು 363 ಕೋ.ರೂ. ಆಗಿದ್ದು, ಕಳೆದ ವರ್ಷದವರೆಗೆ ಅದರಲ್ಲಿ 253.14 ಕೋ.ರೂ. ಮರಳಿ ಪಡೆಯಲಾಗಿದೆ ಎಂದು ತಿಳಿಸ ಲಾಗಿತ್ತು. ಈ ಬಾರಿ ಮರಳಿ ಪಡೆದ ಮೊತ್ತವನ್ನು ತಿಳಿಸದೆ ಬಂಡವಾಳ ವೆಚ್ಚ ಪೂರ್ತಿ ಸಂಗ್ರಹವಾದರೆ ಬಳಕೆದಾರರ ಶುಲ್ಕವನ್ನು ಶೇ. 40ಕ್ಕೆ ಇಳಿಸಲಾಗುತ್ತದೆ ಎಂಬುದನ್ನು ಮಾತ್ರ ತಿಳಿಸಲಾಗಿದೆ. ಬ್ರಹ್ಮರಕೂಟ್ಲು ಟೋಲ್ನಲ್ಲಿ ವಾಹನಗಳ ಸರತಿಯನ್ನು ತಪ್ಪಿಸುವ ದೃಷ್ಟಿಯಿಂದ ಮೂರನೇ ಟೋಲ್ ಬೂತ್ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಅದಕ್ಕಾಗಿ 2 ವರ್ಷ ಹಿಂದೆಯೇ ಹೆದ್ದಾರಿ ವಿಸ್ತರಣೆ ಕಾಮಗಾರಿ ಆರಂಭಗೊಂಡು, ಕಳೆದ ವರ್ಷ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಇನ್ನೂ 3ನೇ ಬೂತ್ ಆರಂಭಗೊಂಡಿಲ್ಲ ಎಂಬ ಆರೋಪ ಜನರದ್ದಾಗಿದೆ.
ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಿಂದ 20 ಕಿ.ಮೀ.ಯೊಳಗೆ ವಾಸಿಸುವವರ ಎಲ್ಲ ವಾಣಿಜ್ಯೇತರ ವಾಹನ ಗಳಿಗೆ 330 (315) ತಿಂಗಳ ಪಾಸ್ ಲಭ್ಯ ವಿದೆ. ಜತೆಗೆ ಜಿಲ್ಲೆಯೊಳಗಿನ ವಾಣಿಜ್ಯ ಉದ್ದೇ ಶದ ಕಾರು, ಜೀಪ್ 15 ರೂ., ವಾಣಿಜ್ಯ ಲಘು ವಾಹನ 25 ರೂ., ಘನ ವಾಣಿಜ್ಯ ವಾಹನ 55 (50) ರೂ., ಭಾರೀ ಗಾತ್ರದ ವಾಣಿಜ್ಯ ವಾಹನ ಗಳಿಗೆ 80 ರೂ., ಮಿತಿ ಮೀರಿದ ವಾಣಿಜ್ಯ ವಾಹನ ಗಳಿಗೆ 100 (95) ರೂ. ಶುಲ್ಕ ನಿಗದಿ ಮಾಡಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Balasore Train Tragedy ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ಹತ್ತು ಅಂಶಗಳ ನೆರವು

VIDEO: ಅಂತರ್ಜಾತಿ ವಿವಾಹವಾದ ಸಹೋದರಿಯನ್ನು ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು

Gujarat: ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿ, ಹಲ್ಲೆ

Indore: ಚಾಕ್ಲೇಟ್,ಆಟಿಕೆ ಕೇಳಿದ್ದಕ್ಕೆ 8 ವರ್ಷದ ಮಗಳನ್ನು ಭೀಕರವಾಗಿ ಹತ್ಯೆಗೈದ ಪಾಪಿ ತಂದೆ

Odisha train tragedy: ನಿದ್ದೆ ಇಲ್ಲದ ಆ ಮೂರು ರಾತ್ರಿಗಳು!
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹೊಸ ಸೇರ್ಪಡೆ

Balasore Train Tragedy ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ಹತ್ತು ಅಂಶಗಳ ನೆರವು

Kalaburagi: ತಲ್ವಾರ್ ನಿಂದ ಕೊಚ್ಚಿ ಯುವಕನ ಕೊಲೆ

WTC Final 2023: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

VIDEO: ಅಂತರ್ಜಾತಿ ವಿವಾಹವಾದ ಸಹೋದರಿಯನ್ನು ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು

Gujarat: ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿ, ಹಲ್ಲೆ