ಬಡ ಯುವತಿಯ ಮದುವೆಗೆ ನೆರವಾದ ಮಂಗಳಮುಖಿಯರು
Team Udayavani, Mar 22, 2022, 12:37 PM IST
ಸಾಂದರ್ಭಿಕ ಚಿತ್ರ
ಲಾತೂರ್: ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ಯುವತಿಯ ಮದುವೆಯನ್ನು ಲಾತೂರ್ ಜಿಲ್ಲೆಯ ಮಂಗಳಮುಖಿಯರು ತಮ್ಮ ಮುಂದಾಳತ್ವದಲ್ಲಿ ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕೆಲವು ಮಂಗಳಮುಖಿಯರು ಸೇರಿ ಮದುವೆ ಮತ್ತು ಕನ್ಯಾದಾನ ಮಾಡಿದ್ದಾರೆ. ಮದುವೆಯ ಎಲ್ಲ ಖರ್ಚು-ವೆಚ್ಚಗಳನ್ನು ಭರಿಸಿಕೊಂಡು ಅತ್ಯಂತ ಅದ್ದೂರಿಯಾಗಿ ಮದುವೆ ಸಮಾರಂಭ ಮಾಡಿದ್ದಾರೆ.
ಕವಾಲೆ ಕುಟುಂಬವು ಲಾತೂರ್ ಮಾತಾಜಿ ನಗರ ಪ್ರದೇಶದಲ್ಲಿ ವಾಸಿಸುತ್ತಿದೆ. ಅವರ ಪುತ್ರಿ ಪೂಜಾಗೆ ವಿವಾಹ ನಿರ್ಧರಿಸಲಾಯಿತು. ತಾಯಿ ಅಡುಗೆ ಕೆಲಸಕ್ಕೆ ಹೋಗುತ್ತಾರೆ ಮತ್ತು ತಂದೆ ದಿನಕೂಲಿ ಕೆಲಸಗಳನ್ನು ಮಾಡುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟಕರವಾಗಿತ್ತು. ಈ ವಿಷಯ ಇದೇ ಪರಿಸರದ ಮಂಗಳಮುಖಿ ಪ್ರಿಯಾ ಲಾತೂರ್ಕರ್ ಅವರಿಗೆ ತಿಳಿದು ತಮ್ಮ ಸಹವರ್ತಿಗಳಿಗೆ ಈ ವಿಷಯವನ್ನು ಹೇಳಿದರು.
ಅದರಂತೆ ಎಲ್ಲ ಮಂಗಳಮುಖಿಯರು ಒಟ್ಟಾಗಿ ಸೇರಿ ಮದುವೆಯನ್ನು ಅದ್ದೂರಿಯಾಗಿ ಮಾಡಲು ನಿರ್ಧರಿಸಲಾಯಿತು. ಮದುವೆಗೆ ಬೇಕಾದ ವಿವಿಧ ಸಾಮಗ್ರಿಗಳ ಸಹಿತ ಸೀರೆ, ಚಿನ್ನವನ್ನು ಖರೀದಿಸಿದ ಮಂಗಳಮುಖೀಯರು ಯುವತಿಯ ಮದುವೆಯನ್ನು ಅದ್ದೂರಿಯಾಗಿ ನೇರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ