ಅಟ್ಟಾಡಿಸಿಕೊಂಡು ಬಂದ ಕಾಡಾನೆ… 8 ಕೀ.ಮಿ ರಿವರ್ಸ್ ಗೇರ್ ನಲ್ಲಿ ಬಸ್ ಚಲಾಯಿಸಿದ ಚಾಲಕ!
ಬಸ್ಸಿನ ಮುಂದೆ ಅಟ್ಟಾಡಿಸಿಕೊಂಡು ಬರುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
Team Udayavani, Nov 16, 2022, 5:47 PM IST
ಕೇರಳ: ಪ್ರಯಾಣಿಕರನ್ನು ಒಳಗೊಂಡ ಖಾಸಗಿ ಬಸ್ಸಿನ ಎದುರುಗಡೆ ಕಾಡಾನೆಯೊಂದು ಪ್ರತ್ಯಕ್ಷವಾಗಿ ಭೀತಿ ಹುಟ್ಟಿಸಿರುವ ವಿಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
40 ಜನ ಪ್ರಯಾಣಿಕರನ್ನು ಒಳಗೊಂಡ ಖಾಸಗಿ ಬಸ್ ಚಾಲಕುಡಿಯ ವಾಲ್ಪಾರೈ ಮಾರ್ಗದಲ್ಲಿ ಹೋಗುತ್ತಿರುವಾಗ ಕಾಡಾನೆಯೊಂದು ಎದುರುಗಡೆ ಬಂದಿದೆ. ಏಕಾಏಕಿ ಕಾಡಾನೆ ಬಸ್ಸಿನ ಮುಂದೆಯೇ ಬರುತ್ತಿರುವುದನ್ನು ಕಂಡ ಪ್ರಯಾಣಿಕರು ಭೀತಿಯಿಂದ ಕಿರುಚಲು ಆರಂಭಿಸಿದ್ದಾರೆ. ಇನ್ನೇನು ಕಾಡಾನೆ ಬಸ್ಸಿನ ಮುಂದೆ ಬಂದು, ಬಸ್ಸನ್ನು ಹಾನಿ ಮಾಡುತ್ತದೆ ಎನ್ನುವಾಗಲೇ ಬಸ್ಸಿನ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾನೆ.
ಚಾಲಕ ಅಂಬುಜಾಕ್ಷನ್ ಬಸ್ಸನ್ನು ರಿವರ್ಸ್ ಗೇರ್ ಗೆ ಹಾಕಿ, ಅನಕ್ಕಯಂದಿಂದ ಅಂಬಲಪರದವರೆಗೆ ಸುಮಾರು 8 ಕಿ.ಮೀವರೆಗೆ ರಿವರ್ಸ್ ನಲ್ಲಿ ಚಲಾಯಿಸಿಕೊಂಡೇ ಹೋಗಿದ್ದಾನೆ. ಆನೆ ಎಲ್ಲಿಯವರೆಗೆ ತನ್ನ ಅಬ್ಬರವನ್ನು ನಿಲ್ಲಿಸಿ ಕಾಡಿಗೆ ಸೇರುತ್ತದೋ ಅಲ್ಲಿಯವರೆಗೆ ಬಸ್ ರಿವರ್ಸ್ ಆಗಿ ಚಲಿಸಿದೆ.
ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರು ಆನೆ ಬಸ್ಸಿನ ಮುಂದೆ ಅಟ್ಟಾಡಿಸಿಕೊಂಡು ಬರುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ʼಕಬಾಲಿʼ ಎನ್ನುವ ಆನೆ ಕಳೆದ ಕೆಲ ದಿನಗಳಿಂದ ಪ್ರಯಾಣಿಕರಿಗೆ, ವಾಹನ ಸವಾರರಿಗೆ ತೊಂದರೆ ಕೊಡುತ್ತಿದೆ ಎಂದು ಪಿಟಿಐ ವರದಿ ತಿಳಿಸಿದೆ.ವರದಿಯ ಪ್ರಕಾರ ಮಂಗಳವಾರ (ನ.15 ರಂದು) ಈ ಘಟನೆ ನಡೆದಿದೆ ಎನ್ನಲಾಗಿದೆ.
#Kerala: A video of a bus being chased by a wild #elephant has gone #viral. The driver of the bus took to reverse the vehicle for about 8km to take control of the situation. WATCH ?https://t.co/DKzvsZ4vnZ#News #Wild #India #WildAnimal pic.twitter.com/HtiTIc9O18
— Free Press Journal (@fpjindia) November 16, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ