ಪ. ಮಹಾರಾಷ್ಟ್ರ : ಕಾಂಗ್ರೆಸ್-ಎನ್ಸಿಪಿ ಭದ್ರಕೋಟೆ; ಬಿಜೆಪಿ-ಶಿವಸೇನೆ ರಣತಂತ್ರ
Team Udayavani, Apr 15, 2019, 12:09 PM IST
ಮುಂಬಯಿ : ಕಾಂಗ್ರೆಸ್ – ಎನ್ಸಿಪಿ ಭದ್ರಕೋಟೆಯಾಗಿರುವ ಪಶ್ಚಿಮ ಮಹಾರಾಷ್ಟ್ರದ 9 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆಯಿಂದ ಅತ್ಯಂತ ಕತ್ತುಕತ್ತಿನ, ಜಿದ್ದಾಜಿದ್ದಿಯ ಸ್ಪರ್ಧೆ ಈ ಬಾರಿ ಕಂಡು ಬರುತ್ತಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಅತ್ಯಂತ ಬಲಿಷ್ಠವಾಗಿದ್ದ ಸಂದರ್ಭದಲ್ಲಿಯೂ ಇಲ್ಲಿನ ಒಂಬತ್ತು ಲೋಕಸಭಾ ಕ್ಷೇತ್ರಗಳ ಪೈಕಿ ಎನ್ಸಿಪಿ ಗೆ ನಾಲ್ಕು ಸ್ಥಾನ, ಸ್ವಾಭಿಮಾನಿ ಶೇತ್ಕರಿ ಸಂಘಟನೆ (ಎಸ್ಎಸ್ಎಸ್) ಗೆ ಒಂದು ಸ್ಥಾನ, ಬಿಜೆಪಿಗೆ ಎರಡು ಮತ್ತು ಶಿವ ಸೇನೆಗೆ ಎರಡು ಸ್ಥಾನಗಳು ದಕ್ಕಿದ್ದವು.
ಪಶ್ಚಿಮ ಮಹಾರಾಷ್ಟ್ರದ 9 ಲೋಕಸಭಾ ಸ್ಥಾನಗಳಾಗಿರುವ ಬಾರಾಮತಿ, ಮಾಢಾ, ಸಾಂಗ್ಲಿ, ಸಾತಾರಾ, ಕೊಲ್ಹಾಪುರ, ಹಾತ್ಕನಂಗಾಲೆ (ಇಲ್ಲಿ ಎ.23ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ), ಮಾವಾಲ್ ಮತ್ತು ಶಿರೂರ್ (ಇಲ್ಲಿ ಎ.29ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ) ಎನ್ಸಿಪಿಯ ಭದ್ರಕೋಟೆ ಎನಿಸಿಕೊಂಡಿವೆ.
ಸಿರಿವಂತ ಮತ್ತು ಸಮೃದ್ಧ ಪಶ್ಚಿಮ ಮಹಾರಾಷ್ಟ್ರದ ಎನ್ಸಿಪಿಯ ಭದ್ರಕೋಟೆಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭೇದಿಸುವ ಸಂಕಲ್ಪ ತಳೆದಿರುವ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಶಿವ ಸೇನೆ, ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ರಣತಂತ್ರವನ್ನು ರೂಪಿಸಿವೆ.
ಅದೇ ರೀತಿ ತಮ್ಮ ಈ ಭದ್ರ ಕೋಟೆಯನ್ನು ಉಳಿಸಿಕೊಳ್ಳಲು ಪವಾರ್, ಮೋಹಿತೆ ಪಾಟೀಲ್ ಮತ್ತು ದಿವಂಗತ ವಸಂತರಾವ್ ದಾದಾ ಪಾಟೀಲ್ ಕುಟುಂಬಗಳು ಕೂಡ ಟೊಂಕ ಕಟ್ಟಿ ನಿಂತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು