ಪ್ರಧಾನಿ ಮೋದಿ ಮುಖದ ಹೊಳಪಿನ ಗುಟ್ಟೇನು? ಮಕ್ಕಳೊಂದಿಗೆ ಗುಟ್ಟು ಬಿಟ್ಟುಕೊಟ್ಟ ನಮೋ!
Team Udayavani, Jan 24, 2020, 9:55 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮುಖದಲ್ಲಿರುವ ಬಿಳಿಗಡ್ಡ ಅವರ ವ್ಯಕ್ತಿತ್ವಕ್ಕೊಂದು ವಿಶೇಷವಾಗಿರುವ ಘನತೆಯನ್ನು ತಂದುಕೊಟ್ಟಿದೆ. ಇದಕ್ಕೆ ಹೊರತಾಗಿ ಮೋದಿ ಅವರ ಮುಖವನ್ನು ಆಸ್ಥೆಯಿಂದ ಗಮನಿಸಿರುವವರಿಗೆ ಅವರ ಮುಖದಲ್ಲೊಂದು ಹೊಳಪಿರುವುದು ಕಾಣಿಸುತ್ತದೆ. ಈ ಪ್ರಶ್ನೆ ಕೆಲವು ಚಿಣ್ಣರನ್ನೂ ಸಹ ಕಾಡಿದೆ ಮತ್ತು ಅವರು ತಮ್ಮ ಮನಸ್ಸಿನಲ್ಲಿ ಕೊರೆಯುತ್ತಿದ್ದ ಈ ಪ್ರಶ್ನೆಗೆ ಉತ್ತರವನ್ನು ಸ್ವತಃ ಪ್ರಧಾನಿಯವರಲ್ಲೇ ಕೇಳಿದ್ದಾರೆ.
ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತ ಮಕ್ಕಳೊಂದಿಗೆ ಇಂದು ಪ್ರಧಾನಿಯವರು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಈ ವಿಚಾರ ಪ್ರಸ್ತಾಪಗೊಂಡಿದೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಪ್ರಧಾನಿ ಮೋದಿ ಅವರು ತಮ್ಮ ಮುಖದಲ್ಲಿನ ಹೊಳಪಿನ ಕುರಿತಾಗಿ ಮಕ್ಕಳಿಗೆ ಉತ್ತರಿಸಿದ್ದು ಹೀಗೆ,
‘ನಿಮ್ಮ ಹೊಳೆಯುವ ಮುಖದ ರಹಸ್ಯ ಏನು ಎಂಬುದಾಗಿ ಹಲವು ವರ್ಷಗಳ ಹಿಂದೆ ನನ್ನನ್ನು ಒಬ್ಬರು ಕೇಳಿದ್ದರು. ಅವರಿಗೆ ನಾನು ಕೊಟ್ಟ ಉತ್ತರ ತುಂಬಾ ಸರಳವಾಗಿತ್ತು, ನಾನು ತುಂಬಾ ಶ್ರಮಪಟ್ಟು ಕೆಲಸ ಮಾಡುತ್ತೇನೆ ಮತ್ತು ಈ ರೀತಿ ಶ್ರಮಪಟ್ಟು ಕೆಲಸ ಮಾಡುವ ಸಂದರ್ಭದಲ್ಲಿ ನನ್ನ ಮುಖದಲ್ಲಿ ಕಾಣಿಸಿಕೊಳ್ಳುವ ಬೆವರಿನ ಹನಿಗಳನ್ನು ನಾನು ಒರೆಸಿಕೊಳ್ಳುತ್ತಿರುತ್ತೇನೆ, ಈ ರೀತಿ ನನ್ನ ಮುಖದಲ್ಲಿ ಮೂಡುವ ಬೆವರ ಹನಿಗಳಿಂದಲೇ ನನ್ನ ಮುಖಕ್ಕೆ ವಿಶೇಷವಾಗಿರುವ ಕಾಂತಿ ಬಂದಿದೆ ಎಂದು ನಾನು ಅವರಿಗೆ ಉತ್ತರಿಸಿದೆ’ ಎಂದು ಪ್ರಧಾನಿ ಮೋದಿ ಅವರು ತಮ್ಮ ಹೊಳೆಯುವ ಮುಖದ ರಹಸ್ಯವನ್ನು ಬಾಲ ಪುರಸ್ಕಾರ ವಿಜೇತ ಮಕ್ಕಳ ಮುಂದೆ ಹೇಳಿಕೊಂಡಿರುವುದನ್ನು ಎನ್.ಡಿ.ಟಿ.ವಿ. ವರದಿ ಮಾಡಿದೆ.
ನೀವು ಮಾಡುವ ಕೆಲಸದಲ್ಲಿ ಕಠಿಣ ಪರಿಶ್ರಮ ಪಡಿ ಮತ್ತು ಚೆನ್ನಾಗಿ ಬೆವರು ಹರಿಸಿ ಎಂಬ ಸಲಹೆಯನ್ನೂ ಸಹ ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಮಕ್ಕಳಿಗೆ ನೀಡಿದ್ದಾರೆ. ದಿನದಲ್ಲಿ ಕನಿಷ್ಟ ನಾಲ್ಕು ಸಲವಾದರೂ ನಮ್ಮ ಮೈ ಬೆವರಬೆಕು ಎಂಬ ಸಲಹೆಯನ್ನೂ ಸಹ ಪ್ರಧಾನಿಯವರು ಚಿಣ್ಣರಿಗೆ ನೀಡಿದ್ದಾರೆ.
The colours of India!
Delighted to interact with young friends from all over the nation. They would be taking part in the Republic Day programme.
Spoke to them on a wide range of subjects.
Here are some glimpses from the programme. pic.twitter.com/itmNgrbd3B
— Narendra Modi (@narendramodi) January 24, 2020
ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪುರಸ್ಕಾರವನ್ನು ಪಡೆದುಕೊಂಡಿರುವ ಮಕ್ಕಳ ಸಾಧನೆಯನ್ನು ಇದೇ ಸಂದರ್ಭದಲ್ಲಿ ಪ್ರಧಾನಿಯವರು ಪ್ರಶಂಸಿದ್ದಾರೆ. ಮತ್ತು ಇಂತಹ ಸಾಧಕ ಮಕ್ಕಳಿಂದಲೇ ನಾನು ಸ್ಪೂರ್ತಿ ಹಾಗೂ ಶಕ್ತಿಯನ್ನು ಪಡೆದುಕೊಳ್ಳುತ್ತೇನೆ ಎಂಬ ವಿಚಾರವನ್ನೂ ಸಹ ನಮೋ ಹೇಳಿಕೊಂಡಿದ್ದಾರೆ.
‘ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ ಮಕ್ಕಳೊಂದಿಗೆ ಸಂವಾದ ನಡೆಸಿರುವುದು ನನಗೆ ತುಂಬಾ ಖುಷಿ ನೀಡಿದೆ. ವಿವಿಧ ವಿಷಯಗಳ ಕುರಿತಾಗಿ ಅವರೊಂದಿಗೆ ಚರ್ಚಿಸಿದೆ ಮತ್ತು ಇವರೆಲ್ಲರೂ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.’ ಎಂದು ಪ್ರಧಾನಿ ಮೋದಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
MUST WATCH
ಹೊಸ ಸೇರ್ಪಡೆ
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್