ಅಂತ್ಯ ಸಂಸ್ಕಾರದ ವೇಳೆ ಕಣ್ಣು ತೆರೆದ ಮಹಿಳೆ… ಮನೆಗೆ ಬಂದು ಚಹಾ ಕುಡಿದಾಕೆ ಮರುದಿನ ನಿಧನ.!
ಎಲ್ಲರಿಗೂ ಅಚ್ಚರಿಯಾಗುವಂತೆ ಹರಿಭೇಜಿ ಕಣ್ಣು ತೆರೆಯುತ್ತಾರೆ.
Team Udayavani, Jan 10, 2023, 10:37 AM IST
ಲಕ್ನೋ: ವೈದ್ಯರು ಮೃತಪಟ್ಟಿದ್ದಾರೆ ಎಂದು ಹೇಳಿದ ಬಳಿಕ ಅಂತಿಮ ವಿಧಿ ವಿಧಾನಕ್ಕೆ ಮೃತದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವ ವೇಳೆ ಅಚ್ಚರಿಯೊಂದು ನಡೆದಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಇತ್ತೀಚೆಗೆ ನಡೆದಿದೆ.
ಉತ್ತರ ಪ್ರದೇಶದ ಜಸ್ರಾನ ಪಟ್ಟಣದ ಬಿಲಾಸ್ಪುರ್ ಗ್ರಾಮದ ಹರಿಭೇಜಿ (81) ಅನಾರೋಗ್ಯದ ಕಾರಣ ಡಿಸೆಂಬರ್ 23 ರಂದು ಫಿರೋಜಾಬಾದ್ ಟ್ರಾಮಾ ಸೆಂಟರ್ಗೆ ದಾಖಲಾಗಿದ್ದರು. ಕೆಲ ದಿನಗಳ ಬಳಿಕ ಹರಿಭೇಜಿ ಅವರ ಮೆದುಳು ಮತ್ತು ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದ ಕಾರಣ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದರು.
ತಾಯಿ ಕೊನೆಯುಸಿರೆಳೆದಿದ್ದಾರೆ ಎಂದು ಮಗ ಸುಗ್ರೀವ್ ಸಿಂಗ್ ಅಂತಿಮ ವಿಧಿ ವಿಧಾನಕ್ಕೆ ಗ್ರಾಮಕ್ಕೆ ಬಂದು, ಅಂತ್ಯ ಸಂಸ್ಕಾರಕ್ಕೆ ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಇನ್ನೇನು ಸ್ಮಶಾನಕ್ಕೆ ಕರೆದುಕೊಂಡು ಹೋದ ಬಳಿಕ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನಡೆಯುತ್ತಿರುವಾಗಲೇ ಎಲ್ಲರಿಗೂ ಅಚ್ಚರಿಯಾಗುವಂತೆ ಹರಿಭೇಜಿ ಕಣ್ಣು ತೆರೆಯುತ್ತಾರೆ. ವೈದ್ಯರು ಮೃತಪಟ್ಟಿದ್ದಾರೆ ಎಂದು ಹೇಳಿದ ಬಳಿಕ ಈ ರೀತಿ ಆಗಿರುವುದು ಎಲ್ಲರೂ ಒಮ್ಮೆ ಶಾಕ್ ಆಗುವಂತೆ ಮಾಡುತ್ತದೆ.
ತಾಯಿಯನ್ನು ಮತ್ತೆ ಮನೆಗೆ ಕರೆ ತರುತ್ತಾರೆ. ಮನೆಗೆ ಬಂದು ಮತ್ತೆ ಬದುಕಿ ಬಂದದಕ್ಕಾಗಿ ಹರಿಭೇಜಿ ಕೆಲ ದನಗಳನ್ನು ದಾನ ಮಾಡುತ್ತಾರೆ. ಚಹಾ ಕುಡಿಯುತ್ತಾರೆ. ಆದರೆ ಮೊದಲಿನ ಹರಿಭೇಜಿ ಸ್ಥಿತಿ ಇರುವುದಿಲ್ಲ. ಬದುಕಿ ಬಂದ ರಾತ್ರಿ ಮಲಗಿದವರು ಮರುದಿನ ಮುಂಜಾನೆ ಮೃತಪಟ್ಟಿದ್ದಾರೆ. ಆ ಬಳಿಕ ಮತ್ತೆ ಸ್ಮಶಾನಕ್ಕೆ ಹೋಗಿ ತಾಯಿ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರು ಮಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…