ಮೋದಿಯವರ ನವಭಾರತ ಸಂಕಲ್ಪಕ್ಕೆ ಯುವ ಜನತೆಯ ಸಹಕಾರ ಅಗತ್ಯ: ಸಾವಂತ್
7 ನೇ ಭಾರತೀಯ ವಿಜ್ಞಾನ ಚಲನಚಿತ್ರೋತ್ಸವ
Team Udayavani, Apr 27, 2022, 5:09 PM IST
ಪಣಜಿ: ಪ್ರಧಾನಿ ನರೇಂದ್ರ ಮೋದಿಯವರು ನವಭಾರತ ನಿರ್ಮಾಣದ ಸಂಕಲ್ಪ ಮಾಡಿದ್ದು, ಇದಕ್ಕೆ ಯುವ ಜನತೆಯ ಸಹಕಾರ ಅಗತ್ಯ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಪಣಜಿಯಲ್ಲಿ 7 ನೇ ಭಾರತೀಯ ವಿಜ್ಞಾನ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಭಾರತವು ವಿಶ್ವಗುರುವಾಗಲು ಮುನ್ನುಗ್ಗುತ್ತಿದೆ. ಇದಕ್ಕೆ ಮೂಲ ಶಕ್ತಿಯೆಂದರೆ ಅದೇ ಯುವ ಶಕ್ತಿ. ಈ ವಿಜ್ಞಾನ ಮಹೋತ್ಸವವು ಯುವ ಜನತೆಯನ್ನು ವಿದ್ಯಾರ್ಥಿಗಳನ್ನು ಈ ನಿಟ್ಟಿನಲ್ಲಿ ಪ್ರೇರೇಪಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ. ಇಲ್ಲಿ ನೆರೆದಿರುವ ವಿದ್ಯಾರ್ಥಿಗಳು ಅದೃಷ್ ವಂತರು. ಏಕೆಂದರೆ ನೀವೆಲ್ಲರು ವಿಜ್ಞಾನ ಚಲನಚಿತ್ರೋತ್ಸವವನ್ನು ವೀಕ್ಷಿಸುತ್ತಿದ್ದೀರಿ. ದೇಶದ ಹಲವು ವಿದ್ಯಾರ್ಥಿಗಳು ವಿಜ್ಞಾನ ಸಿನೆಮಾಗಳನ್ನು ವೀಕ್ಷಿಸಲು ಉತ್ಸುಕರಾಗಿದ್ದಾರೆ. ಗೋವಾ ರಾಜ್ಯದ ನಾವು 2015 ರಿಂದ ರಾಜ್ಯದಲ್ಲಿ ವಿಜ್ಞಾನ ಚಲನಚಿತ್ರೋತ್ಸವ ಆಯೋಜಿಸುವ ಮೂಲಕ ಇಂತಹ ಉತ್ತಮ ಚಲನಚಿತ್ರಗಳನ್ನು ವೀಕ್ಷಿಸುವ ಭಾಗ್ಯ ನಮ್ಮದಾಗಿದೆ ಎಂದರು.
ಈ ಸಂದರ್ಭದಲ್ಲಿ ಇಸ್ರೋದ ಡಾ.ಟಿ.ಪಿ ದಾಸ್, ಜಯಂತ ಸಹಸ್ರಬುದ್ಧೆ, ಗೋವಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಹರಿಲಾಲ್ ಮೆನನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.