ಅಮ್ಚಿ ಗ್ರೂಪ್ ವಾಟ್ಸಪ್ ಬಳಗ: ಗುರುವಂದನೆ, ರಜತ ಮಿಲನ
Team Udayavani, May 13, 2018, 12:46 PM IST
ಮುಂಬಯಿ: ಬದುಕಿನಲ್ಲಿ ಮಾನವೀಯತೆ, ಪ್ರೀತಿ ಮಾತ್ರ ಉಳಿಯುತ್ತದೆ. ಉಳಿದುದೆಲ್ಲವೂ ಕ್ಷಣಿಕ ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ. ವಿವಿಧ ಊರುಗಳಿಂದ ಆಗಮಿಸಿ ಬಂದು ಗೌರವಿಸಿದ ನಿಮ್ಮ ಪ್ರೀತಿಯನ್ನು ಊಹಿಸಲಿಕ್ಕೂ ನನಗೆ ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಹೆಚ್ಚು ಸಮಯ ನೀಡಿ, ಅವರೊಂದಿಗೆ ಹೆಚ್ಚುಕಾಲ ಕಳೆಯಿರಿ. ನಿಮ್ಮೆಲ್ಲರ ಬದುಕಿ ಹಸನಾಗಲಿ ಎಂದು ಇತ್ತೀಚೆಗೆ ನಿವೃತ್ತ ರಾದ ಐಕಳ ಪಾಂಪೈ ಕಾಲೇಜಿನ ಪ್ರಾಧ್ಯಾಪಕ, ಪ್ರಾಂಶುಪಾಲ ಡಾ| ಜೆ. ಕ್ಲಾರೆನ್ಸ್ ಮಿರಾಂದ ಅವರು ಶುಭಹಾರೈಸಿದರು.
ಕಿನ್ನಿಗೋಳಿ ಪಾಂಪೈ ಕಾಲೇಜಿನ 1992-1993 ರ ಶೈಕ್ಷಣಿಕ ವರ್ಷದ ಹಳೆ ವಿದ್ಯಾರ್ಥಿಗಳ ಅಮಿc ಗ್ರೂಪ್ ವಾಟ್ಸಪ್ ಬಳಗದ ಸದಸ್ಯರು ಮೇ 11 ರಂದು ನಡೆಸಿದ ರಜತ ಮಿಲನ‰ ಗುರುವಂದನೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು, 25 ವರ್ಷಗಳ ಬಳಿಕ ಒಂದಾಗಿ ಬಂದು ತನ್ನನ್ನು ಗೌರವಿಸಿದ ತನ್ನ ಹಳೆ ಶಿಷ್ಯರ ಬಳಗ ಈ ಕಾರ್ಯ ಸದಾ ಮುಂದುವರಿಯಲಿ ಎಂದು ಹಾರೈಸಿದರು.
ಪುಸ್ತಕ ಪ್ರಕಟಣೆ, ಕ್ಯಾನ್ಸರ್ ಪೀಡಿತರಿಗೆ ಆರ್ಥಿಕ ನೆರವು ಇನ್ನಿತರ ಸಾಮಾಜಿಕ ಕಾರ್ಯವನ್ನೂ ಮಾಡುತ್ತಿರುವ ಬಳಗ ಈಗ ತಮ್ಮ ಇಡೀ ಗುರುವೃಂದಕ್ಕೆ ಸಂದಾಯವಾಗುವಂತೆ ಸಾಂಕೇತಿಕವಾಗಿ ಗುರುವಂದನೆಯನ್ನು ಈ ಮೂಲಕ ಸಲ್ಲಿಸಿತು. ಶಾಲು, ಹಾರ, ಪುಷ್ಪಗುಚ್ಚ, ನೆನಪಿನ ಕಾಣಿಕೆ, ಫಲಪುಷ್ಪ, ಬೆಳ್ಳಿಬಟ್ಟಲು ನೀಡಿ ಗುರುಗಳನ್ನು ಗೌರವಿಸಲಾಯಿತು.
ಬೆಂಗಳೂರು, ಪುಣೆ, ಮುಂಬಯಿ, ಮಂಗಳೂರು ಹಾಗೂ ಊರಿನಲ್ಲಿದ್ದ ಬಳಗದ ಸದಸ್ಯರು ಹಾಜರಿದ್ದರು. ಮುಂಬಯಿ ಯ ಪತ್ರಕರ್ತ ಏಳಿಂಜೆ ನಾಗೇಶ್ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.
ಹೀರಾ ಶೆಟ್ಟಿ, ಬ್ಲೇಸಿಯಸ್ ಡಿಸೋಜ, ಲೊಲಿಟಾ, ಸಂತೋಷ್ ಆಚಾರ್ಯ, ಪುಷ್ಪನಾಥ್ ಸುವರ್ಣ, ಏಳಿಂಜೆ ನಾಗೇಶ್, ವಾಯ್ಲೆಟ್ ಡೇಸಾ, ಗಿರೀಶ್ ಕೊಂಚಾಡಿ, ವೇಣುಗೋಪಾಲ್ ಶೆಟ್ಟಿ, ವಿದ್ಯಾಲತಾ ಶೆಟ್ಟಿ, ಸುನೀತಾ ದೇವಾಡಿಗ, ಶಕುಂತಲಾ ಆಚಾರ್ಯ, ವಾಸುದೇವ ಭಟ್, ಶಾಲಿನಿ, ವಿಜಯಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಭಾವುಕರಾದ ಗುರು‰ಗಳನ್ನು ನಗಿಸಿದ ಶಿಷ್ಯರು
25 ವರ್ಷಗಳ ಬಳಿಕವೂ ತಮ್ಮ ಗುರುವನ್ನು ಮರೆಯದೆ ಬಂದು ಗೌರವ ಸಲ್ಲಿಸಿದ ಶಿಷ್ಯ ವೃಂದದ ಪ್ರೀತಿಯನ್ನು ಕಂಡು ಭಾವುಕರಾದ ಡಾ| ಮಿರಾಂದ ಅವರು ಅಳು ತಡೆಯಲಾರದೆ ಕಣ್ಣೀರು ಹಾಕಿ ಗದ್ಗದಿತರಾಗಿ ಸಾವರಿಸಿಕೊಳ್ಳಲಾಗದೆ ತಡವರಿಸುವುದನ್ನು ಕಂಡ ಶಿಷ್ಯರು ಸಾರ್, ಪ್ರತಿ ಬಾರಿ ಊರಿಗೆ ಬಂದಾಗಲೂ ನಿಮ್ಮನ್ನು ಭೇಟಿಯಾಗಿ ಹೋಗುತ್ತೇವೆ. ಆದರೆ ಸಮ್ಮಾನ ಮಾಡಲಾಗದು ಎಂದು ಹಾಸ್ಯ ಚಟಾಕಿ ಹಾರಿಸಿದಾಗ ನಗು ತಡೆಯಲಾಗದೆ ದು:ಖವನ್ನು ಮರೆತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ