ಮೇ 8ರಿಂದ ಡೊಂಬಿವಲಿಯಲ್ಲಿ ಜಗದ್ಗುರು ಆದಿಶಂಕರಾಚಾರ್ಯ ಜಯಂತ್ಯುತ್ಸವ
Team Udayavani, May 8, 2019, 2:22 PM IST
ಮುಂಬಯಿ: ಅದ್ವೈತ ಸಿದ್ಧಾಂತದ ಮಹಾನ್ ಸಾಧಕ ಜಗದ್ಗುರು ಶ್ರೀ ಆದಿಶಂಕರಾಚಾರ್ಯ ಜಯಂತ್ಯುತ್ಸವವು ಮೇ 8ರಿಂದ ಮೇ 10ರವರೆಗೆ ಡೊಂಬಿವಲಿ ಪೂರ್ವದ ಮಾನಾ³ಡಾ ರಸ್ತೆಯಲ್ಲಿಯ ಅಗರ್ವಾಲ್ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮೇ 8ರಿಂದ ಸಂಜೆ 6.30ರಿಂದ ಶ್ರೀಗಳ ಉತ್ಸವ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಅನಂತರ ಪ್ರತಿಷ್ಠಾಪನೆ ಜರಗಲಿದೆ. ಮೇ 9ರಂದು ಶ್ರೀ ಕೂಡ್ಲಿ ಶೃಂಗೇರಿಯ ಜಗದ್ಗುರು ಶಂಕರಾಚಾರ್ಯ ಶ್ರೀ ವಿದ್ಯಾಭಿನವ ಶಂಕರ ಭಾರತಿ ಸ್ವಾಮಿಗಳ ಉಪಸ್ಥಿತಿಯಲ್ಲಿ ರುದ್ರಾಭಿಷೇಕ, ಸಾಮೂಹಿಕ ಉಪನಯನ, ಆಶೀರ್ವಚನ, ಮಹಾಪ್ರಸಾದ ವಿತರಣೆಯನ್ನು ಆಯೋಜಿಸಲಾಗಿದೆ. ಸಂಜೆ ಶ್ರೀಮದ್ ಭಗವದ್ಗೀತಾ ಪಠಣ, ಶ್ರೀ ಶಂಕರ ಪುರೋಹಿತ ಇವರಿಂದ ಸಂಗೀತ ಕಾರ್ಯಕ್ರಮ ನೆರವೇರಲಿದೆ.
ಮೇ 10ರಂದು ಬೆಳಗ್ಗೆಯಿಂದ ಕಾಕಡಾರತಿ, ರುದ್ರಾಸ್ವಾಹಕಾರ ಯಜ್ಞ ಹಾಗೂ ಸ್ವಾಮೀಜಿಗಳಿಂದ ಪೂರ್ಣಾಹುತಿ ಹಾಗೂ ಆಶೀರ್ವಚನ ನಡೆಯಲಿದ್ದು, ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಆದಿ ಶಂಕರಾಚಾರ್ಯ ಸೇವಾ ಸಮಿತಿ ಡೊಂಬಿವಲಿಯ ಪ್ರಮುಖರಾದ ಅಜಿತ್ ಉಮಾರಾಣಿ, ಶ್ರೀಕಾಂತ್ ಹಾಗೂ ಮಹಿಳಾ ವಿಭಾಗದ ಎ. ಎ. ಉಮಾರಾಣಿ, ವಿ. ವಿ. ಕುಲಕರ್ಣಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು