ಕೈವಲ್ಯ ಮಠಾಧೀಶರ ದೀಕ್ಷಾ ಸ್ವೀಕಾರದ ರಜತೋತ್ಸವ ಸಂಭ್ರಮ
Team Udayavani, May 29, 2019, 4:32 PM IST
ಮುಂಬಯಿ: ಗೋವಾದ ಪೋಂಡಾದಲ್ಲಿಯ ಗೌಡ ಪಾದಾಚಾರ್ಯ ಕೈವಲ್ಯ ಮಠದ ಗುರು ಪರಂಪರೆಯ 77ನೇ ಗುರುವರ್ಯರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರ ದೀಕ್ಷಾ ಸ್ವೀಕಾರ ಕಾರ್ಯಕ್ರಮದ ರಜತೋತ್ಸವ ಸಂಭ್ರಮವು ಮೇ 26ರಂದು ಸಂಜೆ ಕವಳೆ ಮಠ ಮುಂಬಯಿ ಶಾಖೆಯ ಶಾಂತಾದುರ್ಗಾ ದೇವಾಲಯ ಸ್ಥಳೀಯ ಸಮಿತಿಯ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ದಾದರ್ ಪೂರ್ವದ ಬಿ. ಎನ್. ವೈದ್ಯ ಸಭಾಗೃಹದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು, ಮಾನವ ಜೀವನ ದುರ್ಲಭ. ಅಂತೆಯೇ ಗಣನೀಯವಾದುದು. ಮನುಷ್ಯನು ಸಂಸ್ಕಾರಪ್ರಿಯನಾಗಿ, ಸ್ವಾರ್ಥವನ್ನು ತ್ಯಜಿಸಿ ಕರ್ತವ್ಯ ನಿಷ್ಠೆಯಿಂದ ಜೀವನ ಸಾರ್ಥಕಗೊಳಿಸಬೇಕು. ಅಂತೆಯೇ ಭಗವಂತನ ಕೃಪಾನುಗ್ರಹಕ್ಕೆ ಪಾತ್ರ ನಾಗಬೇಕು. ಸುವಿಚಾರಗಳ ಸಂಚಾರ
ದಿಂದ ಮನುಷ್ಯನಿಗೆ ಸಮಾಧಾನ ಲಭಿಸುತ್ತದೆ. ಲೌಖೀಕ ಆನಂದಕ್ಕಿಂತ ಪಾರಮಾರ್ಥಿಕ ಸುಖ ಪ್ರಧಾನ ವಾದುದು ಎಂದು ನುಡಿದರು.
ಪ್ರಾರಂಭದಲ್ಲಿ ವಾಲ್ಕೇಶ್ವರದಿಂದ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಜಯಘೋಷಗಳ ಮೂಲಕ ಸ್ವಾಗತಿಸ ಲಾಯಿತು. ವೈದಿಕ ವೃಂದದವರಿಂದ ವೇದಘೋಷದ ಬಳಿಕ ಪ್ರಾರ್ಥನೆ ನಡೆಯಿತು. ವಾಲ್ಕೇಶ್ವರ ಮಠದ ಕಾರ್ಯಾಧ್ಯಕ್ಷ ಭೂಷಣ್ ಜೇಕ್ ಅವರು ಶ್ರೀಗಳನ್ನು ಹಾಗೂ ನೆರೆದ ಭಕ್ತರನ್ನು ಸ್ವಾಗತಿಸಿದರು. ಪದಾಧಿಕಾರಿಗಳು ಶ್ರೀಗಳ ಪಾದಪೂಜೆಗೈದರು. ಸಭಾ ಕಾರ್ಯಕ್ರಮದಲ್ಲಿ ಸಾರಸ್ವತ ಬ್ಯಾಂಕಿನ ಅಧ್ಯಕ್ಷ ಗೌತಮ್ ಠಾಕೂರ್ ಮಾತನಾಡಿ, ಧರ್ಮದ ನಡೆಯಿಂದ ಯಶಸ್ಸು ಲಭಿಸುತ್ತದೆ. ಧರ್ಮದಿಂದ ಶಕ್ತಿ ಪ್ರಾಪ್ತಿಯಾಗುತ್ತದೆ. ಈ ಕಾರಣ
ದಿಂದ ಜೀವನ ಸರಳ ಮನೋಹರವಾಗಿ ತೋರುತ್ತದೆ. ಕೈವಲ್ಯ ಮಠಾಧೀಶರಂತಹ ಗುರುಗಳ ಆಶೀರ್ವಾದ ಮಾರ್ಗದರ್ಶನದ ಮೇರೆಗೆ ಜೀವನ ಪಾವನವಾಗುತ್ತದೆ ಎಂದರು.ವೇದಿಕೆಯಲ್ಲಿ ಸಾರಸ್ವತ ಬ್ಯಾಂಕಿನ ನಿರ್ದೇಶಕ ಕಿಶೋರ್ ರಂಗನ್ಕರ್, ಎನ್ಕೆಜಿಎಸ್ಬಿ ಬ್ಯಾಂಕಿನ ಅಧ್ಯಕ್ಷ ಕಿಶೋರ್ ಕುಲಕರ್ಣಿ, ಸಮಾಜ ಸೇವಕ ಉದ್ಯಮಿ ಸತೀಶ್ ನಾಯಕ್, ಲೋಟಿÉಕರ್, ಡಾ| ಪ್ರೇಮಾನಂದ, ಚಾತುರ್ಮಾಸ್ಯ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ವಾಲ್ಗೆ, ಕವಳೆಮಠದ ಪೋಂಡಾದ ಕಾರ್ಯಾಧ್ಯಕ್ಷ ಹೆಡೆ, ಕವಳೆಮಠ ವಾಲ್ಕೇಶ್ವರದ ಕಾರ್ಯದರ್ಶಿ ಪ್ರಮೋದ್ ಗಾಯೊ¤ಂಡೆ ಉಪಸ್ಥಿತರಿದ್ದರು.ಗುರುಗಳ ರಜತೋತ್ಸವ ದೀಕ್ಷಾ ಸಮಾರಂಭದ ಸವಿನೆನಪಿಗಾಗಿ ಸುಂದರ ಸ್ಮರಣಿಕೆಯನ್ನು ಪರಮ ಪೂಜ್ಯರು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು. ಸುಭಾಷ್ಸರಾಫ್ ಕಾರ್ಯಕ್ರಮ ನಿರ್ವಹಿಸಿದರು. ವ್ಯಾಸಪೀಠದಲ್ಲಿ ವಿವಿಧ ಕಾರ್ಯಕ್ರಮ ಗಳು ನಡೆದವು. ಗಣ್ಯರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ವಾಗಿ ಸಂಗೀತ ರಸಮಂಜರಿ ನಡೆಯಿತು. ಮಠದ ವಕ್ತಾರ ಕಮಲಾಕ್ಷ ಸರಾಫ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಪರಮಪೂಜ್ಯರು ಮೇ 22 ರಂದು ವಾಲ್ಕೇಶ್ವರದ ಸ್ವಮಠದ ಶ್ರೀ ಶಾಂತಾದುರ್ಗಾ ದೇವಾಲಯಕ್ಕೆ ಆಗಮಿಸಿ ರಜತ ಮಹೋತ್ಸವ ಸಮಾರಂಭದ ಜತೆಗೆ ಮಠದ ಶಾಂತಾದುರ್ಗಾ ದೇವಿಯ 57ನೇ
ಪ್ರತಿಷ್ಠಾ ಉತ್ಸವದಲ್ಲಿ ಪಾಲ್ಗೊಂಡಿ ದ್ದರು. ಭಕ್ತಾದಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್