ಮೇ 4: ಕನ್ನಡ ವಿಭಾಗ ಮುಂಬಯಿ ವಿವಿಯಲ್ಲಿ ಎರಡು ಕೃತಿಗಳ ಬಿಡುಗಡೆ


Team Udayavani, May 1, 2019, 2:58 PM IST

Udayavani Kannada Newspaper

ಮುಂಬಯಿ: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮೇ 4ರ ಅಪರಾಹ್ನ 2.30 ರಿಂದ ಕಲಿನಾ ಕ್ಯಾಂಪಸ್‌ನಲ್ಲಿ ದಿನಕರ ನಂದಿ ಚಂದನ್‌ ಅವರ “ಆದರ್ಶ ಶಿಕ್ಷಕಿ ಮೇರಿ ಪಿಂಟೊ’ ಹಾಗೂ ಎಚ್‌. ಆರ್‌. ಚಲವಾದಿ ಅವರ “ಆರದ ಕೆಂಡಗಳು’ ಈ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮ ನೆರವೇರಲಿದೆ.

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ| ವ್ಯಾಸರಾವ್‌ ನಿಂಜೂರು ಹಾಗೂ ರಾಯಚೂರಿನ ಸಾಹಿತಿ, ಕಲಾವಿದ ವೀರ ಹನುಮಾನ್‌ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕೃತಿಗಳ ಕುರಿತು ಸಂಘಟಕ, ಕವಿ ಮಲ್ಲಿನಾಥ ಜಲದೆ ಹಾಗೂ ಅಣುಶಕ್ತಿ ನಗರ ಕನ್ನಡ ಕಲಿಕಾ ಕೇಂದ್ರದ ಶಿಕ್ಷಕಿ ಗೀತಾ ಮಂಜುನಾಥ್‌ ಅವರು ಮಾತನಾಡಲಿದ್ದಾರೆ.

ಕಾರ್ಯಕ್ರಮದ ಸಂಯೋಜನೆಯನ್ನು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾ ಪಕರಾದ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಅವರು ಮಾಡಲಿದ್ದಾರೆ. ಹಿರಿಯ ಶಿಕ್ಷಕಿ ಮೇರಿ ಪಿಂಟೊ ಅವರು ಉಪಸ್ಥಿತರಿರುವರು. ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕನ್ನಡ ವಿಭಾಗದ ಪ್ರಕಟಣೆ ತಿಳಿಸಿದೆ.

ಎಚ್‌. ಆರ್‌. ಚಲವಾದಿ
ಥಾಣೆ ಜಿಲ್ಲೆಯ ಅಂಬರ್‌ನಾಥ್‌ನ ಚಿರಪರಿಚಿತ ಕನ್ನಡಿಗರಾಗಿರುವ ಎಚ್‌. ಆರ್‌. ಚಲವಾದಿ ಅವರು ಅಂಬರನಾಥ ನಗರ ಪರಿಷತ್ತಿನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದಾರೆ. ಕನ್ನಡ ಭಾಷಾ ಪಠ್ಯ ಪುಸ್ತಕಗಳ ಅನೇಕ ಸಮೀûಾ ಸತ್ರಗಳಲ್ಲಿ ಭಾಗವಹಿಸಿದ್ದಾರೆ. ಅವರು ಶಿಕ್ಷಕರ ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಲವಾದಿ ಅವರು ಚಲವಾದಿ ಸಮಾಜ ಸಂಸ್ಥೆಯ ಅಧ್ಯಕ್ಷರಾಗಿ, ಶಿವಾಜಿ, ಪುಣೆ, ಶಾಹೂ, ಅಂಬೇಡ್ಕರ್‌ ಅವರ ಸಾಮಾಜಿಕ ಸಂಘಟನೆಯ ಸಲಹೆಗಾರರಾಗಿ ತಮ್ಮನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯಾ ಸಕ್ತರಾಗಿರುವ ಅವರು ಕೆಲವು ಕವನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ “ಆರದ ಕೆಂಡಗಳು’ ಕವನ ಸಂಕಲನ ಸದ್ಯ ಪ್ರಕಟವಾಗುತ್ತಿದೆ.

Ad

ಟಾಪ್ ನ್ಯೂಸ್

7-dudhsagar

Dudhsagar Falls: ದೂಧ್‌ಸಾಗರಕ್ಕೊಂದು ಸಾಹಸಮಯ ರೈಲು ಯಾತ್ರೆ!

ಹೊಂದಾಣಿಕೆ ಸಮಸ್ಯೆ: 22 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ಘೋಷಿಸಿದ ಖ್ಯಾತ ಕಿರುತೆರೆ ನಟಿ

ಹೊಂದಾಣಿಕೆ ಸಮಸ್ಯೆ: 22 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ಘೋಷಿಸಿದ ಖ್ಯಾತ ಕಿರುತೆರೆ ನಟಿ

Belagavi: ವಿಷಯುಕ್ತ ನೀರು ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Belagavi: ವಿಷಯುಕ್ತ ನೀರು ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Charmadi: ನೀವ್ ಹೇಳೋದ್ ಹೇಳ್ತಾನೆ ಇರಿ, ನಾವ್ ಮಾಡೋದ್ ಮಾಡ್ತಾನೆ ಇರ್ತೀವಿ

Charmadi: ನೀವ್ ಹೇಳೋದ್ ಹೇಳ್ತಾನೆ ಇರಿ, ನಾವ್ ಮಾಡೋದ್ ಮಾಡ್ತಾನೆ ಇರ್ತೀವಿ…

6-thirthahalli-1

ಆರಗ ಅವರು ಅಧಿಕಾರಿಗಳೊಂದಿಗೆ ಏಕವಚನದಲ್ಲಿ ವಿವೇಚನೆ ಇಲ್ಲದೆ ಮಾತನಾಡುತ್ತಾರೆ: ಕಿಮ್ಮನೆ

ಪೊಲೀಸರ ಭರ್ಜರಿ ಬೇಟೆ: ಗಾಂಜಾ ಖರೀದಿಸುತ್ತಿದ್ದ ವಿದ್ಯಾರ್ಥಿ, ದಂಪತಿ ಸೇರಿ 14 ಮಂದಿಯ ಬಂಧನ

ಹೈದರಾಬಾದ್ ಗಾಂಜಾ ಪ್ರಕರಣ: ಐಟಿ ಉದ್ಯೋಗಿಗಳು, ವಿದ್ಯಾರ್ಥಿ ಸೇರಿದಂತೆ 14 ಜನರ ಬಂಧನ

Kerala Nurse ನರ್ಸ್‌ ಪ್ರಿಯಾ ಗಲ್ಲುಶಿಕ್ಷೆ ಕೇಸ್-‌ ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ 

Kerala Nurse ನರ್ಸ್‌ ಪ್ರಿಯಾ ಗಲ್ಲುಶಿಕ್ಷೆ ಕೇಸ್-‌ ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madame Tussauds: ಮೇಡಮ್‌ ಟುಸ್ಸಾಡ್‌: ಮಾನವ ಪ್ರತಿಕೃತಿಯ ಮೇಣದ ಗೊಂಬೆಗಳ ಲೋಕ

Madame Tussauds: ಮೇಡಮ್‌ ಟುಸ್ಸಾಡ್‌: ಮಾನವ ಪ್ರತಿಕೃತಿಯ ಮೇಣದ ಗೊಂಬೆಗಳ ಲೋಕ

ಕನ್ನಡ ಸಂಘ ಬಹ್ರೈನ್‌: 2025-27ರ ನೂತನ ಆಡಳಿತ ಮಂಡಳಿ ಆಯ್ಕೆ

ಕನ್ನಡ ಸಂಘ ಬಹ್ರೈನ್‌: 2025-27ರ ನೂತನ ಆಡಳಿತ ಮಂಡಳಿ ಆಯ್ಕೆ

ಕತಾರ್‌: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕತಾರ್‌: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ದಶಮಾನೋತ್ಸವ-2025 ಸಂಭ್ರಮ

ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ದಶಮಾನೋತ್ಸವ-2025 ಸಂಭ್ರಮ

Europe: ಇಟಲಿ ಏಕೆ ಅಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ? ಇದರ ಒಳಗುಟ್ಟೇನು!

Europe: ಇಟಲಿ ಏಕೆ ಅಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ? ಇದರ ಒಳಗುಟ್ಟೇನು!

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

22(1

Sagara: ದ್ವೀಪವಾಸಿಗಳ ಕಾಲಾಪಾನಿ ಶಿಕ್ಷೆಗೆ ಇಂದು ಮುಕ್ತಿ!

7-dudhsagar

Dudhsagar Falls: ದೂಧ್‌ಸಾಗರಕ್ಕೊಂದು ಸಾಹಸಮಯ ರೈಲು ಯಾತ್ರೆ!

ಹೊಂದಾಣಿಕೆ ಸಮಸ್ಯೆ: 22 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ಘೋಷಿಸಿದ ಖ್ಯಾತ ಕಿರುತೆರೆ ನಟಿ

ಹೊಂದಾಣಿಕೆ ಸಮಸ್ಯೆ: 22 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ಘೋಷಿಸಿದ ಖ್ಯಾತ ಕಿರುತೆರೆ ನಟಿ

21

Kondlahalli: ಕೊನೆಗೂ ಪಶು ಚಿಕಿತ್ಸಾಲಯ ಮಂಜೂರು!

20

Molakalmuru: ಬಸ್‌ ನಿಲ್ದಾಣದಲ್ಲಿಲ್ಲ ಕುಡಿವ ನೀರಿನ ಸೌಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.