ಕುಲಾಲ ಸಂಘದ ಜ್ಯೋತಿ ಕೋ ಆಪ್‌. ಕ್ರೆಡಿಟ್‌ ಸೊಸೈಟಿ  ಮಹಾಸಭೆ


Team Udayavani, Aug 16, 2018, 4:05 PM IST

1508mum01.jpg

ಮುಂಬಯಿ: ಕುಲಾಲ ಸಂಘ ಮುಂಬಯಿ ಸಂಚಾಲಕತ್ವದಲ್ಲಿರುವ ಆರ್ಥಿಕ ಸಂಸ್ಥೆ ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯು ಇಂದು ಮುಂಬಯಿ ತುಳು-ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದಕ್ಕೆ ಗ್ರಾಹಕರು, ಶೇರುದಾರರ ಸಹಕಾರ ಹಾಗೂ ಬೆಂಬಲವೇ ಪ್ರಮುಖ ಕಾರಣವಾಗಿದೆ. ನಮ್ಮ ಸದಸ್ಯರುಗಳ ಸಂಖ್ಯೆಯನ್ನು ಹೆಚ್ಚಿಸಿ ವ್ಯವಹಾರಗಳನ್ನು ಅಧಿಕಗೊಳಿಸುವುದು, ಶಾಖೆಗಳನ್ನು ವಿಸ್ತರಿಸುವುದು ಇನ್ನಿತರ ಯೋಜನೆಗಳು ನಮ್ಮ ಮುಂದಿದ್ದು, ಇದಕ್ಕೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದು ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಅವರು ನುಡಿದರು.
ಆ. 13 ರಂದು ಸಯಾನ್‌ ನಿತ್ಯಾನಂದ ಸಭಾಗೃಹದಲ್ಲಿ ನಡೆದ ಕುಲಾಲ ಸಂಘ ಮುಂಬಯಿ ಸಂಚಾಲಕತ್ವದ ಪ್ರತಿಷ್ಠಿದ ಆರ್ಥಿಕ ಸಂಸ್ಥೆ ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ 37 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಲ ಪಡೆದವರು ಸಾವನ್ನು ಸರಿಯಾದ ಸಮಯಕ್ಕೆ ಹಿಂತಿರುಗಿಸಬೇಕು. ಆಗ ಸಂಸ್ಥೆ ಬಲಗೊಳ್ಳುತ್ತದೆ. ಈ ವರ್ಷ ಶೇ. 12 ರಷ್ಟು ಲಾಭಾಂಶವನ್ನು ಗ್ರಾಹಕರಿಗೆ ನೀಡಲಾಗುವುದು. ಇದನ್ನು ಹೆಚ್ಚಿಸುವುದರ ಬಗ್ಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಪ್ರಾರಂಭದಲ್ಲಿ ಕಾರ್ಯಾಧ್ಯಕ್ಷರು ಹಾಗೂ ನಿರ್ದೇಶಕರು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಕಾರ್ಯದರ್ಶಿ ದೇವದಾಸ್‌ ಎಲ್‌. ಕುಲಾಲ್‌ ಅವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯು ವರದಿ ಮತ್ತು ಲೆಕ್ಕಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಿತು. ಇದೇ ಸಂದರ್ಭದಲ್ಲಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಸಮ್ಮಾನಿಸಲಾಯಿತು.
ಲೆಕ್ಕ ಪರಿಶೋಧಕರಾಗಿ ಆರ್‌ಎವಿ ಆ್ಯಂಡ್‌ ಕಂಪೆನಿಯನ್ನು ಪುನ:ರಾಯ್ಕೆಗೊಳಿಸಲಾಯಿತು. ಸಭಿಕರ ಪರವಾಗಿ ಎಂ. ಪಿ. ಪೈ, ಜಿ. ಎಸ್‌. ನಾಯಕ್‌, ಶಂಕರ್‌ ವೈ. ಮೂಲ್ಯ, ಜಯ ಎಸ್‌. ಅಂಚನ್‌, ರಾಘು ಎ. ಮೂಲ್ಯ, ಸದಾನಂದ ಐ. ಸಾಲ್ಯಾನ್‌, ಲಕ್ಷ¾ಣ್‌ ಸಿ. ಮೂಲ್ಯ, ಮಮತಾ ಎಸ್‌. ಗುಜರನ್‌ ಹಾಗೂ ನಿರ್ದೇಶಕರಾದ ನ್ಯಾಯವಾದಿ ಉಮಾನಾಥ್‌ ಮೂಲ್ಯ, ಎಚ್‌. ಎಂ. ಥೋರತ್‌, ನ್ಯಾಯವಾದಿ ಸವಿನಾ ಎಸ್‌. ಕುಲಾಲ್‌ ಅವರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ವೇದಿಕೆಯಲ್ಲಿ ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ಪಿ. ಶೇಖರ್‌ ಮೂಲ್ಯ, ಕೋಶಾಧಿಕಾರಿ ಭಾರತಿ ಪಿ. ಆಕ್ಯಾìನ್‌, ಡೊಂಬಯ್ಯ ಐ. ಮೂಲ್ಯ, ಚಂದು ಕೆ. ಮೂಲ್ಯ, ಬಾಬು ಜಿ. ಅಂಚನ್‌, ಸುರೇಖಾ ಆರ್‌. ಕುಲಾಲ್‌, ಗಿರೀಶ್‌ ವಿ. ಕರ್ಕೇರ, ರಾಜೇಶ್‌ ಎಸ್‌. ಬಂಜನ್‌, ಕರುಣಾಕರ ಬಿ. ಸಾಲ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು. ಕುಲಾಲ ಸಂಘ ಮುಂಬಯಿ ಹಾಗೂ ಸಂಘದ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಗ್ರಾಹಕರು, ಶೇರುದಾರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.  

ವಿವಿಧ ಯೋಜನೆಗಳು  
ವರದಿ ವರ್ಷದಲ್ಲಿ ಸೊಸೈಟಿಯು ಸಿಬಂದಿ ವರ್ಗದವರಿಗೆ ಸ್ಟಾಫ್‌ ವೆಲ್ಫೆàರ್‌  ಸ್ಕೀಮ್‌ನಲ್ಲಿ ಲೀವ್‌ ಫೇಯರ್‌  ಕನ್‌ಸಿಷನನ್ನು ಪ್ರಾರಂಭಿಸಿದೆ. ಸೊಸೈಟಿಯಲ್ಲಿ 1 ಲಕ್ಷದಿಂದ 35 ಲಕ್ಷ ರೂ. ಗಳವರೆಗೆ ಸಾಲ ನೀಡುವ ವ್ಯವಸ್ಥೆಯಿದ್ದು, ಠೇವಣಿಗೆ ಶೇ. 8 ರಷ್ಟು ಬಡ್ಡಿದರ ಹಾಗೂ ಹಿರಿಯರಿಗೆ ಶೇ. 8.50 ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಅದಲ್ಲದೆ ಕಡಿಮೆ ದರದ ಬಡ್ಡಿಯಲ್ಲಿ ಗೃಹಸಾಲ, ಶಿಕ್ಷಣಕ್ಕೆ ಸಾಲ ಇನ್ನಿತರ ಸೌಲಭ್ಯಗಳನ್ನು ನೀಡುತ್ತಿದೆ. ಜ್ಯೋತಿ ಡೈಲಿ ಡೆಪೋಸಿಟ್‌ ಸ್ಕೀಮ್‌ ಮತ್ತು ಮಾಸಿಕ ಡೆಪೋಸಿಟ್‌ ಮತ್ತು ಸೇವಿಂಗ್‌ ಬ್ಯಾಂಕ್‌ ಮುಖಾಂತರವೂ ಶೇ. 4 ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಸೊಸೈಟಿಯ ಎಲ್ಲಾ ಯೋಜನೆಗಳನ್ನು ಸಮಾಜ ಬಾಂಧವರು, ತುಳು-ಕನ್ನಡಿಗರು ಮುಕ್ತವಾಗಿ ಪಡೆಯಬಹುದು ಎಂದು ಸಭೆಯಲ್ಲಿ ತಿಳಿಸಲಾಯಿತು.

5240 ಮಂದಿ ಸದಸ್ಯರು 
ಸೊಸೈಟಿಯಲ್ಲಿ ಒಟ್ಟು 5240 ಮಂದಿ ಸದಸ್ಯರಿದ್ದು, ಒಟ್ಟು ಶೇರು ಬಂಡವಾಳವು 292.76 ಲಕ್ಷ ರೂ. ಗಳನ್ನು ಹೊಂದಿದೆ. ಅಡ್ವಾನ್ಸ್‌ ವಿಭಾಗದಲ್ಲಿ 142.64 ಲಕ್ಷ ರೂ., ಡೆಪೋಸಿಟ್‌ ವಿಭಾಗದಲ್ಲಿ 237.35 ಲಕ್ಷ ರೂ. ಗಳನ್ನು ಹೊಂದಿದೆ. ಸೊಸೈಟಿಯ ಒಟ್ಟು ವ್ಯವಹಾರ 3162.80 ಲಕ್ಷ ರೂ. ಗಳಲ್ಲಿದ್ದು, ಎನ್‌ಪಿಎ ಶೇ. 4.98 ಹೊಂದಿರುವುದಲ್ಲದೆ, ಸೊಸೈಟಿಯ ನೆಟ್‌ ಪ್ರಾಫಿಟ್‌ 39.48 ಲಕ್ಷ ರೂ. ಗಳನ್ನು ಹೊಂದಿ, ವರದಿ ವರ್ಷದಲ್ಲಿ ಶೇ. 12 ರಷ್ಟು ಲಾಭಾಂಶವನ್ನು ಪಡೆದಿದೆ. ಸೊಸೈಟಿಯ ಕಾರ್ಯವ್ಯಾಪ್ತಿಯು ಮುಂಬಯಿ, ಥಾಣೆ, ನವಿಮುಂಬಯಿ, ಪುಣೆಯವರೆಗೆ  ವಿಸ್ತಾರಗೊಂಡಿದೆ.

  ಚಿತ್ರ-ವರದಿ : ಸುಭಾಷ್‌ ಶಿರಿಯಾ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.