ವಾಚನಾಲಯಗಳಿಂದ ಭಾಷೆ ಉಳಿಯಲು ಸಾಧ್ಯ
ಡೊಂಬಿವಲಿ ಕರ್ನಾಟಕ ಸಂಘದ ಮುಖ್ಯಾಲಯ: ನವೀಕೃತ ವಾಚನಾಲಯ ಲೋಕಾರ್ಪಣೆ
Team Udayavani, Jan 7, 2021, 8:00 PM IST
ಮುಂಬಯಿ, ಜ. 6: ಹೊರನಾಡ ಕನ್ನಡಿಗರ ಹೆಮ್ಮೆಯ ಸಂಸ್ಥೆ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ನಿರ್ಮಿಸಿಕೊಂಡ ಡೊಂಬಿವಲಿ ಕರ್ನಾಟಕ ಸಂಘದ ಮುಖ್ಯಾಲಯದ ನವೀಕೃತ ವಾಚನಾಲಯದ ಉದ್ಘಾಟನ ಕಾರ್ಯಕ್ರಮವು ಜ. 5ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಹೋಮ ಹಾಗೂ ವಿಶೇಷ ಪೂಜೆ ಸಲ್ಲಿಸುವ ಮುಖಾಂತರ ವಾಚಕರಿಗಾಗಿ ಗ್ರಂಥಾಲಯವನ್ನು ಮುಕ್ತಗೊಳಿಸಲಾಯಿತು. ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಹಾಗೂ ಸುಷ್ಮಾ ಶೆಟ್ಟಿ ದಂಪತಿಯ ಯಜಮಾನಿಕೆಯಲ್ಲಿ ನಡೆದ ಗಣಹೋಮವನ್ನು ವೇ| ಮೂ| ಪಂಡಿತ್ ರಾಮಚಂದ್ರ ಭಟ್ ಬಾಯರ್ ಅವರ ಸಾರಥ್ಯದಲ್ಲಿ ನಡೆಯಿತು.
ಗಣಹೋಮ ಹಾಗೂ ಪೂಜಾಧಿಗಳ ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು, ಪ್ರತಿಯೊಬ್ಬರ ಜ್ಞಾನ ವೃದ್ಧಿಯಾಗಲು ವಾಚನಾಲಯಗಳ ಆವಶ್ಯಕತೆಯಿದೆ. ಆದರೆ ಇಂದಿನ ಮೊಬೈಲ್ ಯುಗದಲ್ಲಿ ವಾಚನಾಲಯದಲ್ಲಿ ಓದುಗರ ಸಂಖ್ಯೆ ಕಡಿಮೆ ಆಗುತ್ತಿರುವುದು ವಿಪರ್ಯಾಸದ ಸಂಗತಿ.
ವಾಚನಾಲಯಗಳು ನಮ್ಮ ಜ್ಞಾನವನ್ನು ವೃದ್ಧಿಸುವ ದೇಗುಲಗಳಾಗಿದ್ದು, ವಾಚಕರು ಹೆಚ್ಚಿನ ಸಂಖ್ಯೆಯಲ್ಲಿ ವಾಚನಾಲಯದ ಲಾಭ ಪಡೆಯಬೇಕು. ಡೊಂಬಿವಲಿ ಕರ್ನಾಟಕ ಸಂಘವೂ ನಗರದ ಎರಡು ಭಾಗಗಳಲ್ಲಿ ವಾಚನಾಲಯ ಹೊಂದಿದ್ದು, ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಸಾಹಿತ್ಯದ ಭಂಡಾರವೇ ನಮ್ಮ ವಾಚನಾಯದಲ್ಲಿದೆ.
ಇದನ್ನೂ ಓದಿ:ರಾಜ್ಯ ಮುಖಂಡರ ಜತೆ ಎಐಸಿಸಿ ಉಸ್ತುವಾರಿ ಚರ್ಚೆ
ಸಮಸ್ತ ಕನ್ನಡಿಗರು ವಾಚನಾಲಯಗಳ ಲಾಭ ಪಡೆದು ಅಳಿವಿನ ಅಂಚಿನಲ್ಲಿರುವ ವಾಚನಾಲಯಗಳನ್ನು ಉಳಿಸಿ ಬೆಳೆಸುವುದರಿಂದ ಹೊರನಾಡಿನಲ್ಲಿ ಕನ್ನಡ ಭಾಷೆಗೆ ಪುನ:ಶ್ಚೇತನ ನೀಡಿದಂತಾಗುತ್ತದೆ ಎಂದು ಹೇಳಿ ಶುಭಹಾರೈಸಿದರು.
ಗಣಹೋಮದ ಬಳಿಕ ಗಣ್ಯರು ಮಹಾಪ್ರಸಾದವನ್ನು ಸ್ವೀಕರಿಸಿ ಪುನೀತರಾದರು. ಈ ಸಮಯದಲ್ಲಿ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ, ಉಪಾಧ್ಯಕ್ಷರಾದ ಡಾ| ದಿಲೀಪ್ ಕೊಪರ್ಡೆ, ಗೌರವ ಕಾರ್ಯದರ್ಶಿ ದೇವದಾಸ ಕುಲಾಲ್, ಕೋಶಾಧಿಕಾರಿ ಲೋಕನಾಥ ಶೆಟ್ಟಿ, ಜತೆ ಕೋಶಾಧಿಕಾರಿ ರಮೇಶ ಕಾಖಂಡಕಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕಾರಿ ಮಂಡಳಿಯ ಸದಸರಾದ ಅಜೀತ ಉಮರಾಣಿ, ಜಗನ್ನಾಥ ಶೆಟ್ಟಿ, ಪ್ರಭಾಕರ ಶೆಟ್ಟಿ, ಗೀತಾ ಮೆಂಡನ್, ಮಂಜುನಾಥ್ ವಿದ್ಯಾಲಯದ ಮುಖ್ಯ ಶಿಕ್ಷಕ ಆನಂದ ಪಡಸಲಗಿ, ನಾಗಪ್ಪ ಪೂಜಾರಿ, ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷೆ ವಿಮಲಾ ಶೆಟ್ಟಿ ಹಾಗೂ ಸಿಬಂದಿಗಳಾದ ಚಂಚಲಾ ಸಾಲ್ಯಾನ್, ಪರಿಮಳಾ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು. ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ಧಾರ್ಮಿಕ ಕಾರ್ಯಕ್ರಮವು ನೆರವೇರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ