ಮುಂಬಯಿ: ಸಂಭ್ರಮವಿಲ್ಲದೆ ಗಣೇಶನಿಗೆ ವಿದಾಯ
369 ಸಾರ್ವಜನಿಕ ಪೆಂಡಾಲ್ ಸೇರಿದಂತೆ ಒಟ್ಟು 6,015 ಗಣೇಶ ವಿಗ್ರಹಗಳನ್ನು ವಿಸರ್ಜಿಸಲಾಯಿತು
Team Udayavani, Sep 3, 2020, 11:13 AM IST
ಮುಂಬಯಿ, ಸೆ. 3: ಕೊರೊನಾ ಮಹಾಮಾರಿ ಸಮರದ ಮಧ್ಯೆ ಮುಂಬಯಿ ಮಂಗಳವಾರ 11 ದಿನಗಳ ಗಣೇಶ ಉತ್ಸವದ ಅಂತ್ಯವನ್ನು ಸೂಚಿಸುವ ಅನಂತ
ಚತುರ್ದಶಿಯಂದು ಯಾವುದೇ ಗೌಜು ಗಮ್ಮತ್ತಿಲ್ಲದೆ ಹೆಚ್ಚು ಶಾಂತವಾದ ಆಚರಣೆಗೆ ಸಾಕ್ಷಿಯಾಯಿತು.
ಪ್ರತಿವರ್ಷದಂತೆಯೇ ಈ ವರ್ಷವೂ ಭಕ್ತರು ವಿಘ್ನ ವಿನಾಶಕನಿಗೆ ವಿದಾಯ ಹೇಳಿದರು ಆದರೆ ಬೀದಿಗಳಲ್ಲಿ ಮತ್ತು ಮುಖ್ಯ ರಸ್ತೆಗಳ ಮೂಲಕ ಯಾವುದೇ
ಮೆರವಣಿಗೆಗಳು, ಡೋಲು ಕುಣಿತ ಅಥವಾ ಹಾಡುಗಳನ್ನು ನುಡಿಸುವ ಡಿಜೆ ವ್ಯವಸ್ಥೆಗಳಾಗಲಿ ಯಾವುದೂ ಇರಲಿಲ್ಲ. ಮುಂಬಯಿಯ ಇತಿಹಾಸದಲ್ಲೇ ವಿರಳ ಎಂಬಂತೆ ಅತೀ ಸರಳ ಆಚರಣೆಯೊಂದಿಗೆ ಸಮುದ್ರ, ಸರೋವರಗಳು ಮತ್ತು ಮನಪಾ ನಿರ್ಮಿತ ಕೃತಕ ಕೊಳಗಳಲ್ಲಿ ಗಣೇಶ ವಿಗ್ರಹಗಳನ್ನು ವಿಸರ್ಜಿಸಲಾಯಿತು.
369 ಸಾರ್ವಜನಿಕ ಪೆಂಡಾಲ್ ಸೇರಿದಂತೆ ಒಟ್ಟು 6,015 ಗಣೇಶ ವಿಗ್ರಹಗಳನ್ನು ವಿಸರ್ಜಿಸಲಾಯಿತು ಎಂದು ನಾಗರಿಕ ಸಂಸ್ಥೆ ಮಾಹಿತಿ ನೀಡಿದೆ. ಗಣಪತಿ ಬಪ್ಪಾ ಮೋರ್ಯ, ಫುಡ್ಚ್ಯಾ ವರ್ಷಿ ಲವ್ಕರ್ ಯಾ ಎಂಬ ಘೋಷಗಳೊಂದಿಗೆ ವಿಗ್ರಹಗಳನ್ನು ಹೊತ್ತ ಭಕ್ತರು ಗಿರ್ಗಾಂವ್, ದಾದರ್, ಜುಹೂ, ಮಾರ್ವೆ ಮತ್ತು ಇತರ ಕರಾವಳಿ ವಿಸರ್ಜನಾ ಕೇಂದ್ರಗಳ ಕಡೆಗೆ ನಡೆದುಕೊಂಡು ಹೋಗಿ ತಮ್ಮ ವಿಗ್ರಹಗಳನ್ನು ವಿಸರ್ಜಿಸಿದರು.
ಪೊಲೀಸ್ ಭದ್ರತೆ
ನಗರಾದ್ಯಂತ 35,000ಕ್ಕೂ ಹೆಚ್ಚು ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗಿತ್ತು. ಸುಮಾರು 5,000 ಸಿಸಿಟಿವಿ ಕೆಮೆರಾಗಳ ಸಹಾಯದಿಂದ ಪೊಲೀಸರು ಬೀದಿ ಮತ್ತು ಕಡಲತೀರಗಳ ಮೇಲೆ ನಿಗಾ ಇಟ್ಟರು. ಜನಸಂದಣಿ ತಪ್ಪಿಸಲು ಪೊಲೀಸರು ವಿಸರ್ಜನಾ ಸ್ಥಳಗಳ ಬದಲಿಗೆ ಮನೆಯಿಂದ ಹೊರಡುವ ಮೊದಲು ಅಂತಿಮ ಆರತಿ ಮತ್ತು ಪೂಜೆಯನ್ನು ಮಾಡಬೇಕೆಂದು ಜನರಿಗೆ ಮನವಿ ಮಾಡಿದ್ದರು.
ಕೊರೊನಾ ಸೋಂಕಿನ ದೃಷ್ಟಿಯಿಂದ ಗಣೇಶ ಉತ್ಸವವನ್ನು ಪೆಂಡಾಲ್ಗಳಲ್ಲಿ ಆಯೋಜಿಸುವ ಮಂಡಲಗಳು ಅಥವಾ ಗುಂಪುಗಳಿಗೆ ಸಾಮಾಜಿಕ
ಅಂತರದ ರೂಢಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ