ಐ-ಲೇಸಾ ತಂಡದಿಂದ ತುಳು ಭಾವಗೀತೆಗಳ ಆಹ್ವಾನ

ಆಯ್ಕೆಯಾದ ಭಾವಗೀತೆಯ ಸಂಪೂರ್ಣ ಹಕ್ಕು ಐ-ಲೇಸಾದ್ದಾಗಿರುತ್ತದೆ.

Team Udayavani, Sep 10, 2020, 12:48 PM IST

ಐ-ಲೇಸಾ ತಂಡದಿಂದ ತುಳು ಭಾವಗೀತೆಗಳ ಆಹ್ವಾನ

ಮುಂಬಯಿ, ಸೆ. 9: ಐ-ಲೇಸಾ (The Voice of Ocean) ತಂಡವು ಹೆಸರಾಂತ ಕವಿ ಮತ್ತು ತುಳು ಲಿಪಿ ತಜ್ಞ ಡಾ| ವೆಂಕಟರಾಜ್‌ ಪುಣಿಂಚತ್ತಾಯ ಇವರ
ಸಂಸ್ಮರಣೆಗಾಗಿ ನೂರ ಒಂದು ತುಳು ಭಾವಗೀತೆಗಳ ಪುಸ್ತಕವನ್ನು ಪ್ರಕಟಿಸಲಿದೆ. ಆ ಪ್ರಯುಕ್ತ ಜಗದಗಲ ಪಸರಿಸಿರುವ ತುಳು ಬರಹಗಾರರಲ್ಲಿ ಉತ್ತಮ ಗೇಯತೆಯ ತುಳು ಭಾವಗೀತೆಗಳನ್ನು ಆಹ್ವಾನಿಸಲಾಗಿದೆ.

ತುಳು ಭಾವಗೀತೆಗಳನ್ನು ಕನ್ನಡ ಲಿಪಿಯಲ್ಲಿ (ಯುನಿಕೋಡ್‌) ಟೈಪ್‌ ಮಾಡಿರಬೇಕು. ರಚನೆಕಾರರಿಗೆ ಯಾವುದೇ ವಯೋಮಾನದ ನಿರ್ಬಂಧವಿರುವುದಿಲ್ಲ. ಒಬ್ಬರಿಗೆ ಗರಿಷ್ಠ ಎರಡು ರಚನೆಗಳನ್ನು ಮಾತ್ರ ಕಳುಹಿಸುವ ಅವಕಾಶವಿದ್ದು, ರಚನೆಯು ಭಾವಗೀತೆಯ ರೂಪದಲ್ಲಿದ್ದು ಹಾಡುವುದಕ್ಕೆ ಸೂಕ್ತವಾಗಿರಬೇಕು. ಭಾವಗೀತೆಯ ಜೊತೆಗೆ ಜಾನಪದದ ಲೇಪವಿದ್ದರೂ ಪರವಾಗಿಲ್ಲ. ಭಾವಗೀತೆಯು ಬರಹಗಾರರ ಸ್ವರಚನೆಯಾಗಿರಬೇಕು.

ಈ ಹಿಂದೆ ಯಾವ ರೂಪದಲ್ಲಿ ಎಲ್ಲಿಯೂ ಇದು ಪ್ರಕಟವಾಗಿರಬಾರದು. ಮಾಧ್ಯಮದಲ್ಲಿ ಬಂದಿದ್ದರೆ ಅಂತಹ ರಚನೆಗಳನ್ನು ಕಳುಹಿಸಬಾರದು. ಅನುವಾದಿತ ರಚನೆಗಳಿಗೆ ಅವಕಾಶವಿಲ್ಲ. ಉತ್ತಮವಾದ ನೂರ ಒಂದು ಭಾವಗೀತೆಗಳನ್ನು ಮಾತ್ರ ಪರಿಗಣಿಸಲಾಗುವುದು.

ಆಯ್ಕೆಯಾದ ಭಾವಗೀತೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು. ಭಾವಗೀತೆಯ ರಚನೆಕಾರರ ಹೆಸರನ್ನು ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಜೊತೆಗೆ
ಅವರಿಗೆ ಒಂದು ಪುಸ್ತಕವನ್ನು ಉಚಿತವಾಗಿ  ನೀಡಲಾಗುವುದು. ಸಂಸ್ಥೆಗೆ ಕಳುಹಿಸಿದ ನಂತರವೂ ಆ ಭಾವಗೀತೆ ರಚನೆಯನ್ನು ಬೇರೆಲ್ಲಿಗೂ ಕಳುಹಿಸಬಾರದು ಹಾಗೂ ಪ್ರಕಟಿಸಬಾರದು. ಆಯ್ಕೆಯಾದ ಭಾವಗೀತೆಯ ಸಂಪೂರ್ಣ ಹಕ್ಕು ಐ-ಲೇಸಾದ್ದಾಗಿರುತ್ತದೆ.

ಗೀತೆಗಳ ಆಯ್ಕೆ, ರಾಗ ಸಂಯೋಜನೆಯ ಹಕ್ಕು, ಇತ್ಯಾದಿ ತೀರ್ಮಾನಗಳು ಸಂಪೂರ್ಣವಾಗಿ ಐ-ಲೇಸಾ ತಂಡದ್ದಾಗಿರುತ್ತದೆ. ನಿಯಮಗಳು ಒಪ್ಪಿಗೆಯಾದಲ್ಲಿ ನಿಮ್ಮ ಟೈಪ್‌ ಮಾಡಿದ ತುಳು ಭಾವಗೀತೆ ರಚನೆಗಳನ್ನು ಈ ಮೈಲ್‌ 101tulusongs.ilesagmail.com ಅಥವಾ ವಾಟ್ಸಾಪ್‌ ಮೂಲಕ 9342936622
ಸಂಖ್ಯೆಗೆ ಕಳುಹಿಸಬಹುದು. ಭಾವಗೀತೆಗಳನ್ನು ಸೆ. 20 ರೊಳಗೆ ಕಳುಹಿಸತಕ್ಕದ್ದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಬಾಲ್ಯದ ನೆನಪು ತಂದ ನೃತ್ಯ

Desi Swara: ಬಾಲ್ಯದ ನೆನಪು ತಂದ ನೃತ್ಯ

Desi Swara: ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…..

Desi Swara: ಇಮೋಜಿ… ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…

Desi Swara: ಕತಾರ್‌- ಅನಿವಾಸಿ ಕನ್ನಡತಿ ಸುಮಾ ಮಹೇಶ್‌ ಗೌಡ ಅವರಿಗೆ ಸಮ್ಮಾನ

Desi Swara: ಕತಾರ್‌- ಅನಿವಾಸಿ ಕನ್ನಡತಿ ಸುಮಾ ಮಹೇಶ್‌ ಗೌಡ ಅವರಿಗೆ ಸಮ್ಮಾನ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.