ಮೈಸೂರು ಅಸೋಸಿಯೇಶನ್‌: ಕನಕದಾಸರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ


Team Udayavani, Dec 18, 2018, 4:59 PM IST

1712mum10.jpg

ಮುಂಬಯಿ: ಕನಕ ದಾಸರು ಐದು ಶತಮಾನಗಳ ಹಿಂದೆಯೇ ಸಮಾನ ಸಮಾಜ ನಿರ್ಮಾಣದ ಆಶಯವನ್ನು ಇರಿಸಿದ ಮಹಾನ್‌ ಸಂತರು. ಸಮಾಜವನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದಿ ಸಮಾನತೆಗೆ ಒತ್ತು ನೀಡಿದವರು. ಅಂತಹ ಆಶಯವನ್ನು ನಮ್ಮ ಪೊಲೀಸ್‌ ಇಲಾಖೆಯೂ ಇರಿಸಿ ಆ ಆಶಯವನ್ನು ನನಸಾಗಿಸಲು ನಿರಂತರವಾಗಿ ಪ್ರಯತ್ನಿಸುತ್ತಾ ಬರುತ್ತಿದೆ ಎಂದು ಮುಂಬಯಿಯ ಹಿರಿಯ ಪೊಲೀಸ್‌ ಅಧಿಕಾರಿ, ಶಿಕ್ಷಣ ಪ್ರೇಮಿ ಕನ್ನಡಿಗ ದಯಾನಾಯಕ್‌ ಅವರು ನುಡಿದರು.

ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಬೆಂಗಳೂರು, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಹಾಗೂ ಮೈಸೂರು ಅಸೋಸಿಯೇಶನ್‌ ಮುಂಬಯಿ ಇವರ ಸಂಯುಕ್ತ ಅಶ್ರಯದಲ್ಲಿ ಹಮ್ಮಿಕೊಂಡ ಕನಕದಾಸರ ಸಾಂಸ್ಕೃತಿಕ  ಅನುಸಂಧಾನ-ರಾಷ್ಟ್ರೀಯ ವಿಚಾರ ಸಂಕಿರಣವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ  ನಮ್ಮ ಕೆಲಸ ಯಾವಾಗ ಮುಗಿಯುವುದೋ ಎಂದು ಹೊರಗಡೆ ಕಾಯುವುದಿರು ತ್ತದೆ. ಆದರೆ ಇಂದು ತಾವೆಲ್ಲರೂ ನನ್ನನ್ನು ಆಮಂತ್ರಿಸಿ ವೇದಿಕೆಯಲ್ಲಿ ಕೂರಿಸಿ ಗೌರವಿಸಿದ್ದೀರಿ.  ತಾನು ಕಾರ್ಕಳದಲ್ಲಿ ತಾಯಿಯ ಹೆಸರಿನ ಪ್ರೌಢಶಾಲೆಯನ್ನು ಕಟ್ಟಿಸಿ ಸರಕಾರಕ್ಕೆ ಒಪ್ಪಿಸಿರುವುದರ ಹಿಂದೆ ಕರ್ತವ್ಯಪ್ರಜ್ಞೆ ಇತ್ತು. ಪ್ರತಿ ಶಾಲೆಯ ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಅವೃದ್ಧಿಯ ಬಗ್ಗೆ ಕಾಳಜಿ ವಹಿಸಬೇಕು ಎನ್ನುವುದು ನನ್ನ ಆಶಯ. ಕನಕದಾಸರ ಸಮಾನ ಸಮಾಜದ ಆಶಯವಾಗಿದೆ ಎಂದು ನುಡಿದು. ಇದಕ್ಕೆ ತಮ್ಮದೇ ಪೊಲೀಸ್‌ ಇಲಾಖೆ ಒಂದು ನಿದರ್ಶನವಾಗಿದೆ. ಮುಂಬಯಿಯಂತಹ ನಗರದಲ್ಲಿ ಒಂದೇ ಕಟ್ಟಡದ ಒಂದೇ ಫ್ಲೊÉàರ್‌ನಲ್ಲಿರುವ ನಾಲ್ಕು ಪ್ಲಾಟ್‌ಗಳಲ್ಲಿ ನಾಲ್ಕು ರಾಜ್ಯದವರು ನಾಲ್ಕು ಜಾತಿಯವರು ಇರಬಹುದು. ಆದರೆ ಅವರೆಲ್ಲರ ರಕ್ಷಣೆ ಪೊಲೀಸರು ಮಾಡುತ್ತಾರೆ. ಇದರಲ್ಲಿ ಕನಕದಾಸರ ಸಮಾನ ಸಮಾಜದ ಆಶಯ ಕಾಣಿಸುತ್ತದೆ ಎಂದು ನುಡಿದು ತಾನು ಬಾಲ್ಯದಿಂದಲೂ ಕಾಡುತ್ತಿದ್ದ ಕನಕನ ಕಿಂಡಿಯನ್ನು ನೆನಪಿಸಿಕೊಂಡರು.

ಈ ರಾಷ್ಟ್ರೀಯ ವಿಚಾರ ಸಂಕಿರಣದ ಸರ್ವಾಧ್ಯಕ್ಷರಾದ ರಾ. ಸಂತ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಬೆಂಗಳೂರು ಇದರ ಸಮನ್ವಯಾಧಿಕಾರಿ  ಕಾ.ತ. ಚಿಕ್ಕಣ್ಣ ಅವರು ಮಾತನಾಡಿ, ಕನಕದಾಸರು ದಾರ್ಶನಿಕ ಕವಿ. 16 ನೇ ಶತಮಾನದವರಾದರೂ, ಅವರ ಬಗ್ಗೆ ಈ 21ನೇ ಶತಮಾನದಲ್ಲೂ ನಾವು ಮಾತನಾಡುತ್ತೇವೆ ಅಂದರೆ ಇಂದಿಗೂ ಅವರ ರಚನೆಗಳು ಪ್ರಸ್ತುತವಾಗಿವೆ. ಅವರು ತಳ ಸಮುದಾಯದಲ್ಲೂ ನಾವು ಮಾತನಾಡುತ್ತೇವೆ ಅಂದರೆ ಇಂದಿಗೂ ಅವರ ರಚನೆಗಳು ಪ್ರಸ್ತುತವಾಗಿದೆ. ಅವರು ತಳ ಸಮುದಾಯದಲ್ಲಿ ಹುಟ್ಟಿ ನೋವು ಅಪಮಾನಗಳನ್ನು ಅನುಭವಿಸಿದರೂ ಕತ್ತಿ ಹಿಡಿದು ಹೋರಾಡಿಲ್ಲ. ಲೇಖನ ವನ್ನು ಕೈಗೆತ್ತಿಕೊಂಡು ಹೋರಾಟ ನಡೆಸಿದವರು. ಮಾನವೀಯ ಮೌಲ್ಯದ ತಲ್ಲಣಗಳನ್ನು ಇಟ್ಟು ಕೊಂಡು ಬರೆದವರು ಕನಕದಾಸರು ಎಂದರು.

ಇದೇ ಸಂದರ್ಭದಲ್ಲಿ ಮನೋಹರ ಕುಲಕರ್ಣಿ ಅವರ ಸಂತಕವಿ ಕನಕದಾಸ ಜೀವನ್‌ ಅಣಿ ಸಾಹಿತ್ಯ’ ಎನ್ನುವ ಮರಾಠಿ ಕೃತಿಯನ್ನು ದಯಾನಾಯಕ್‌ ಅವರು ಲೋಕಾರ್ಪಣೆಗೊಳಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರು, ಕನಕ ದಾಸರ ಶ್ರೇಷ್ಠತೆಯನ್ನು ತಿಳಿಸಿದರು. ದಾಸರೆಂದರೆ ಪುರಂದರ ದಾಸರಯ್ನಾ ಎಂದರೂ ಸಾಹಿತ್ಯ ಕ್ಷೇತ್ರದಲ್ಲಿ ಕನಕದಾಸರೇ ಮುಖ್ಯರಾಗುತ್ತಾರೆ ಎಂದರು.

ಅನಂತರ ನಡೆದ ಗೋಷ್ಠಿಗಳಲ್ಲಿ ಡಾ| ಎಚ್‌. ಪಿ. ಗೀತಾ, ಮೈಸೂರು ಅವರು ಕನಕದಾಸರ ಜೀವನ ವಿಚಾರ, ಡಾ| ನಾಗಣ್ಣ ಕಿಲಾರಿ ಹೊಸಪೇಟೆ ಅವರು ಕನಕದಾಸರ ಧಾರ್ಮಿಕ ದರ್ಶನ, ಡಾ| ತ್ರಿವೇಣಿ ಹುಣಸೂರು ಅವರು ಕನಕದಾಸರ ಸಾಮಾಜಿಕ ಸಂವೇದನೆ, ಡಾ| ರವಿ ಕುಮಾರ್‌ ಬಾಗಿ ಬೆಂಗಳೂರು ಅವರು ಕನಕದಾಸರ ಕಾವ್ಯಗಳಲ್ಲಿ ದೇಶೀಯತೆ ವಿಷಯಗಳ  ಕುರಿತು ಮಾತನಾಡಿದರು.

ಮೈಸೂರು ಅಸೋಸಿಯೇಶನ್ನಿನ ಅಧ್ಯಕ್ಷರಾದ ಕೆ. ಕಮಲಾ  ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅತಿಥಿಗಳನ್ನು ಗೌರವಿಸಿದರು.  ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ಡಾ| ಬಿ.ಆರ್‌. ಮಂಜುನಾಥ್‌, ಕೆ. ಮಂಜು ನಾಥಯ್ಯ, ನಾರಾಯಣ ನವಿಲೇಕರ್‌, ಡಾ| ಜೀವಿ ಕುಲಕರ್ಣಿ, ಡಾ| ಮೇಧಾ ಕುಲಕರ್ಣಿ, ಡಾ| ಪೂರ್ಣಿಮಾ ಎಸ್‌. ಶೆಟ್ಟಿ, ಶ್ರೀನಿವಾಸ ಜೋಕಟ್ಟೆ, ಅಶೋಕ ಸುವರ್ಣ, ರತ್ನಾಕರ ಶೆಟ್ಟಿ,  ವಸಂತ ಕಲಕೋಟಿ, ಸುಶೀಲಾ ದೇವಾಡಿಗ, ನೀಲಕಂಠ ಮೇದಾರ್‌, ರಮಾ ವಸಂತ್‌, ಪ್ರಭಾಕರ ಬೆಳವಾಯಿ, ಬಾಲಚಂದ್ರ ರಾವ್‌, ಡಾ|  ಜ್ಯೋತಿ ಸತೀಶ್‌, ಸುಗಂಥಾ ಸತ್ಯಮೂರ್ತಿ, ಸಾ. ದಯಾ, ಡಾ| ರಘುನಾಥ್‌ ಮೊದಲಾದವರು ಭಾಗವಹಿಸಿದ್ದರು. ವಿದುಷಿ ವೀಣಾ ಶಾಸ್ತ್ರಿ, ಡಾ| ಶ್ಯಾಮಲಾ ಪ್ರಕಾಶ್‌, ವಿದುಷಿ ಶ್ಯಾಮಲಾ ರಾಧೇಶ್‌ ಅವರಿಂದ ಕನಕ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.

ಕುಮಾರಿ ಜೀವಿಕಾ ಶೆಟ್ಟಿ ಪೇತ್ರಿ ಕನಕದಾಸರ ರಚನೆಯ ಕಾವ್ಯ ವಾಚನ ಮಾಡಿದರು. ಕು|  ನಿಕಿತಾ ಸದಾನಂದ ಅಮೀನ್‌ ಹಾಗೂ  ರಾಗಿಣಿ ರೆಡ್ಡಿ ಅವರಿಂದ ನೃತ್ಯ ಪ್ರದರ್ಶನ ನಡೆಯಿತು. 

ಕಾರ್ಯಕ್ರಮವನ್ನು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ನಿರೂಪಿಸಿ ವಂದಿಸಿದರು.

Ad

ಟಾಪ್ ನ್ಯೂಸ್

ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ:  ಡಾ.ಜಿ. ಪರಮೇಶ್ವರ್‌

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್‌

Yaduveer-Wodeyar

ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

Maha-CM–MLA-Canteen

ಕ್ಯಾಂಟೀನ್‌ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಥಾ ಸರಣಿ ಭಾಗ 7-ಕೊನೆಗೂ ಭೀಷ್ಮ ಅಬ್ಬರಿಸಿದ್ದ; ಸ್ವಯಂವರದಲ್ಲಿ ಪರಾಕ್ರಮಿ ಭೀಷ್ಮ

ಕಥಾ ಸರಣಿ ಭಾಗ 7-ಕೊನೆಗೂ ಭೀಷ್ಮ ಅಬ್ಬರಿಸಿದ್ದ; ಸ್ವಯಂವರದಲ್ಲಿ ಪರಾಕ್ರಮಿ ಭೀಷ್ಮ

ಹೆಗಲ ಮೇಲಿನ ಶಾಲು

ಹೆಗಲ ಮೇಲಿನ ಶಾಲು

ಪುಣೆಯ ಮಕ್ಕಳ ತಜ್ಞ ಡಾ| ಸುಧಾಕರ್‌ ಶೆಟ್ಟಿಯವರಿಗೆ ಸಮಾಜ ಭೂಷಣ ಪ್ರ ಶಸ್ತಿ ಪ್ರದಾನ

ಪುಣೆಯ ಮಕ್ಕಳ ತಜ್ಞ ಡಾ| ಸುಧಾಕರ್‌ ಶೆಟ್ಟಿಯವರಿಗೆ ಸಮಾಜ ಭೂಷಣ ಪ್ರ ಶಸ್ತಿ ಪ್ರದಾನ

Foreign Life: ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು!

Foreign Life: ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು!

Scuba Diving: ಪೆಸಿಫಿಕ್‌ ಮಹಾಸಾಗರದೊಳಗೆ ಮೊದಲ ಸ್ಕೂಬಾ ಡೈವ್‌

Scuba Diving: ಪೆಸಿಫಿಕ್‌ ಮಹಾಸಾಗರದೊಳಗೆ ಮೊದಲ ಸ್ಕೂಬಾ ಡೈವ್‌

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ:  ಡಾ.ಜಿ. ಪರಮೇಶ್ವರ್‌

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್‌

Yaduveer-Wodeyar

ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.