
ಕ್ಯಾನ್ಸರ್ಪೀಡಿತ ಬಾಲಕನ ಸಹಾಯಕ್ಕೆ ಮನವಿ
Team Udayavani, Aug 5, 2019, 12:48 PM IST

ನವಿಮುಂಬಯಿ, ಆ. 4: ಕ್ಯಾನ್ಸರ್ನಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಬಾಲಕನ ಚಿಕಿತ್ಸೆಗೆ ನೆರವು ನೀಡುವಂತೆ ಸಹೃದಯಿ ದಾನಿಗಳಲ್ಲಿ ವಿನಂತಿಸಲಾಗಿದೆ. ವಾಶಿಯ ನಿವಾಸಿಗಳಾದ ಕುಮಾರ ಕೆ. ಶೆಟ್ಟಿ ಮತ್ತು ಸುರೇಖಾ ಕೆ. ಶೆಟ್ಟಿ ದಂಪತಿಯ ನಾಲ್ಕು ವರ್ಷದ ಪುತ್ರ ಕೃತಿಕ್ ಕೆ. ಶೆಟ್ಟಿ ಅ್ಯಡ್ರಿನಲ್ ಗ್ರಂಥಿ (Neuroblastoma)ಯ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ.
ಕುಮಾರ ಕೆ. ಶೆಟ್ಟಿ ಅವರು ಕಳೆದ ಕೆಲವು ವರ್ಷಗಳಿಂದ ಮುಂಬಯಿ ಮಹಾನಗರದಲ್ಲಿ ಅನಾರೋಗ್ಯ ಪೀಡಿತರಾದ ಪತ್ನಿಯೊಂದಿಗೆ ಕಡು ಬಡತನದಿಂದ ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಪುತ್ರನಿಗೆ ಸರಿಯಾದ ಚಿಕಿತ್ಸೆ ನೀಡಲು ದಂಪತಿಯು ಅಸಹಾಕತೆಯಿಂದ ಕಣ್ಣೀರು ಸುರಿಸುತ್ತಿದ್ದು, ಪಾನ್ಶಾಪ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿ ರುವಾಗಲೆ ತನ್ನ ಮಗನ ಮಾರಕ ಕಾಯಿಲೆಯಿಂದ ಮಾನಸಿಕ ಅಘಾತಕ್ಕೊಳಗಾದ ದಂಪತಿ ಇದ್ದ ಅಲ್ಪ-ಸ್ವಲ್ಪ ಹಣ ಇಷ್ಟರವರೆಗಿನ ಚಿಕಿತ್ಸೆಗೆ ಖರ್ಚು ಮಾಡಿದ್ದು, ಮುಂದಿನ ಚಿಕಿತ್ಸೆಗ ಹಣ ಇಲ್ಲದ ಸಹೃದಯಿ ದಾನಿಗಳ ಮೊರೆ ಹೋಗಿದ್ದಾರೆ.
ಮಗುವಿಗೆ ತೊಂದರೆ ಕಾಣಿಸಿಕೊಂಡ ಆರಂಭದಲ್ಲಿ ಪ್ರಾಥಮಿಕ ಚಿಕಿತ್ಸೆಗಾಗಿ ವಾಶಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಯಾವುದೇ ರೀತಿಯ ಚಿಕಿತ್ಸೆ ಫಲಕಾರಿಯಾಗದ ಕಾರಣ ಅಲ್ಲಿನ ವೈದ್ಯರು ಬೇರೆ ಆಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದರು. ಅಲ್ಲಿನ ವೈದ್ಯರು ಮಗುವನ್ನು ಪರೀಕ್ಷಿಸಿ ಕ್ಯಾನ್ಸರ್ ಕಾಯಿಲೆ ಎಂದು ದೃಢಪಡಿಸಿದ್ದು, ಕುಮಾರ ಕೆ. ಶೆಟ್ಟಿ ಅವರ ಪತ್ನಿಯು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅಲ್ಪ ಸ್ವಲ್ಪ ಆದಾಯ ಇದ್ದ ಕೆಲಸವನ್ನು ಬಿಟ್ಟು ಮಗನ ಆರೈಕೆಗಾಗಿ ಮನೆಯಲ್ಲೇ ಇರುವಂತಹ ಪರಿಸ್ಥಿತಿ ಎದುರಾಗಿದೆ.
ಸಹಕರಿಸಲಿಚ್ಛಿಸುವ ತುಳು-ಕನ್ನಡಿಗರು, ಸಹೃದಯಿ ದಾನಿಗಳು Kumar k. Shetty, Punjab national bank. Ac no: 436800 0100008875, IFSC code:- PUNBO 350200, Branch: Navi mumbai vashi sector 17, Mumbai. ಇಲ್ಲಿಗೆ ಕಳುಹಿಸಿಕೊಡಬಹುದು. ಹೆಚ್ಚಿನ ಮಾಹಿತಿಗಾಗಿ 7039456671 ನಂಬರನ್ನು ಸಂಪರ್ಕಿಸಬಹುದು.
ಟಾಪ್ ನ್ಯೂಸ್
