ಆರ್ಯರು ಹೊರಗಿನವರಲ್ಲ : ಡಾ. ಜಿ. ಬಿ. ಹರೀಶ್
ವಿಯಟ್ನಾಂನಲ್ಲಿ ವೇದಗಳ ಕುರಿತ ಸಂಶೋಧನೆ
Team Udayavani, Sep 11, 2020, 8:39 PM IST
ಹನೋಯಿ[ವಿಯಟ್ನಾಂ] : ವೇದಗಳನ್ನು ಕುರಿತ ಎರಡು ಸಂಶೋಧನಾ ಪತ್ರಿಕೆಗಳ ಸಂಪುಟಗಳು ವಿಯಟ್ನಾಮಿನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದಲ್ಲಿ ಸೆ.11 ರಂದು ಬಿಡುಗಡೆಯಾದವು. ಕೇಂದ್ರದ ನಿರ್ದೇಶಕ ಮತ್ತು ಭಾರತದ ಸಾಂಸ್ಕೃತಿಕ ರಾಯಭಾರಿ, ಸಾಹಿತಿ ಡಾ. ಜಿ.ಬಿ.ಹರೀಶ ಈ ಸಂಪುಟಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಭಾರತಕ್ಕೆ ಆರ್ಯರು ಹೊರಗಿನಿಂದ ಬಂದರು ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ನುಡಿದರು.
ವಿಯಟ್ನಾಮಿ ಭಾಷೆಯಲ್ಲಿರುವ ಈ ಸಂಚಿಕೆಗಳು ವಿಯಟ್ನಾಂ ಮತ್ತು ಭಾರತದ ಸಂಬಂಧದಲ್ಲಿ ಹೊಸ ಹೆಜ್ಜೆ ಎಂದು ಆವರು ಹೇಳಿದರು. ಈ ವೇದ ಸಂಚಿಕೆಗಳು ಸ್ವಾಮಿ ವಿವೇಕಾನಂದರು ವಿಶ್ವ ಧರ್ಮ ಸಮ್ಮೇಳನದಲ್ಲಿ ಪ್ರಸಿದ್ಧ ಭಾಷಣ ಮಾಡಿದ ಸೆ.11 ರಂದು, 127 ವರ್ಷದ ಸಂದರ್ಭದಲ್ಲಿ ಬಿಡುಗಡೆ ಆಗುತ್ತಿರುವುದು ಮತ್ತೊಂದು ವಿಶೇಷ ಎಂದು ವಿವರಿಸಿದರು.
ಇದರಲ್ಲಿ ಡಾ ವಾಮದೇವ ಶಾಸ್ತ್ರೀ(ಡೇವಿಡ್ ಫ್ರಾಲಿ) ಅವರ ಲೇಖನವೂ ಸೇರಿದಂತೆ ಅನೇಕ ವಿದ್ವಾಂಸರ ಲೇಖನಗಳಿರುವುದು ವಿಶೇಷ. ವೇದಗಳನ್ನು ಕುರಿತು ವಿಯಟ್ನಾಂ ಭಾಷೆಯಲ್ಲಿ ಪ್ರಕಟವಾದ ಮೊದಲ ಸಂಚಿಕೆಗಳಿವು. ಇದನ್ನು ವಿಯಟ್ನಾಂ ಅಕಾಡೆಮಿ ಆಫ್ ಸೋಶಿಯಲ್ ಸೈನ್ಸಸ್ಸಿನ ರಿಲಿಜಿಯಸ್ ಸ್ಟಡೀಸ್ ವಿಭಾಗ ಮತ್ತು ವಿಯಟ್ನಾಂ ನ ಹನೋಯಿಯಲ್ಲಿರುವ, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಈ ಸಂಚಿಕೆಗಳು ಸಿದ್ಧವಾದವು.
ಕಾರ್ಯಕ್ರಮದಲ್ಲಿ ಯೂನಿವರ್ಸಿಟಿ ಆಫ್ ಸೋಶಿಯಲ್ ಸೈನ್ಸಸ್ ಮತ್ತು ಹ್ಯುಮ್ಯಾನಿಟಿಸ್ ನ ಭಾರತೀಯ ಅಧ್ಯಯನಗಳ ವಿಭಾಗದ ಸಹ ಪ್ರಾಧ್ಯಾಪಕಿ ಡಾ ದೋ ತು ಹ, ರಿಲಿಜಿಯಸ್ ಸ್ಟಡೀಸ್ ಸಂಶೋಧನಾ ಪತ್ರಿಕೆಯ ಪ್ರಧಾನ ಸಂಪಾದಕ ಡಾ ಚುನ್ ವನ್ ತನ್ ಮತ್ತು ಇತರರು ಭಾಗವಹಿಸಿದ್ದರು.
ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ಫೇಸ್ ಬುಕ್ ನ ಮೂಲಕ ನಡೆದ ಈ ಬಿಡುಗಡೆ ಸಮಾರಂಭದಲ್ಲಿ ಹಲವಾರು ವಿದ್ವಾಂಸರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ