ಅಕ್ಕಲ್ಕೋಟೆಯಲ್ಲಿ ಸ್ವಾಮಿ ಸಮರ್ಥರ ಜನ್ಮ ದಿನಾಚರಣೆ
Team Udayavani, Mar 21, 2018, 4:31 PM IST
ಸೊಲ್ಲಾಪುರ: ಶ್ರೀ ಸ್ವಾಮಿ ಸಮರ್ಥರ ಜನ್ಮ ದಿನ ನಿಮಿತ್ತ ಮಹಾರಾಷ್ಟ್ರ-ಕರ್ನಾಟಕ ಹಾಗೂ ಆಂಧ್ರ ಸೇರಿದಂತೆ ದೇಶದ ಮೂಲೆ-ಮೂಲೆಗಳಿಂದ ಬಂದಿರುವ ಲಕ್ಷಾಂತರ ಭಕ್ತರು ಸೋಮವಾರ ಅಕ್ಕಲ್ಕೋಟೆಯ ಸ್ವಾಮಿ ಸಮರ್ಥರ ದರ್ಶನ ಪಡೆದರು. ಬೆಳಗ್ಗೆ 5ರಿಂದ ಮಂದಿರದ ಪುರೋಹಿತ ಮೋಹನ್ ಮಹಾರಾಜರು ಸಮರ್ಥರಿಗೆ ಕಾಕಡಾರತಿಯ ಮೂಲಕ ಮಹಾಪೂಜೆಯನ್ನು ನೆರವೇರಿಸಿದರು. ಅನಂತರ ಸ್ವಾಮಿ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಯಿತು.
ಬೆಳಗ್ಗೆ 5 ರಿಂದ ಸರದಿಯಲ್ಲಿ ನಿಂತುಕೊಂಡು ಶ್ರೀ ಸ್ವಾಮಿ ಸಮರ್ಥ ಜಯ ಜಯ ಸ್ವಾಮಿ ಸಮರ್ಥ ಎಂದು ನಾಮಸ್ಮರಣೆಗೈಯುತ್ತ ದರ್ಶನ ಪಡೆದರು. ವಿಠuಲನ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಸಾಲಾಗಿ ನಿಂತ ಭಕ್ತರ ಜಯ ಘೋಷಣೆಗಳು ಮುಗಿಲು ಮುಟ್ಟಿದ್ದವು. ಪೂರ್ವಾಹ್ನ 10ರಿಂದ ಮಧ್ಯಾಹ್ನ 12ರ ವರೆಗೆ ಮಂದಿರದ ಜ್ಯೋತಿಬಾ ಮಂಟಪದಲ್ಲಿ ದೇವಸ್ಥಾನ ವಿಶ್ವಸ್ತೆ ಉಜ್ವಲಾತಾಯಿ ಸರ್ದೇಶ್ಮುಖ್ ಇವರ ನೇತೃತ್ವದಲ್ಲಿ ಸತ್ಸಂಗ ಕಾರ್ಯಕ್ರಮ ನಡೆದಿದ್ದು ಸಮರ್ಥರಿಗೆ ಪುಷ್ಪಹಾರ ಅರ್ಪಿಸಿದರು. ತದನಂತರ ತೊಟ್ಟಿಲು ಉತ್ಸವ ನೆರವೇರಿತು. ಭಜನೆ ಹಾಗೂ ಆರತಿಯೊಂದಿಗೆ ಸಮರ್ಥರ ಜನ್ಮೋತ್ಸವ ಭಕ್ತಿ-ಭಾವದಿಂದ ಅದ್ದೂರಿಯಾಗಿ ಆಚರಿಸಲಾಯಿತು. ಮೈಂದರ್ಗಿ ರಸ್ತೆಯಲ್ಲಿರುವ ಭಕ್ತ ನಿವಾಸದಲ್ಲಿ ಭಕ್ತರಿಗಾಗಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಅಪರಾಹ್ನ 4ರಿಂದ ಪುಣೆಯ ಮಿಲಿಂದ್ ಪೋತದಾರ ಹಾಗೂ ಸಂಗಡಿಗರಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಂದಿರ ಸಮಿತಿಯ ಕಾರ್ಯದರ್ಶಿ ಆತ್ಮಾರಾವ ಘಾಟಗೆ, ವಿಶ್ವಸ್ತ ವಿಲಾಸರಾವ್ ಪುಟಾಣೆ, ಮಹೇಶ ಗೋಗಿ, ಶ್ರೀನಿವಾಸ ಇಂಗಳೆ, ಪ್ರದೀಪ ದಿಂಡೋಳೆ, ಬಾಳಾ ಸಾಹೇಬ ಘಾಟಗೆ, ಅಕ್ಷಯ ಸರ್ದೇಶ್ಮುಖ್, ಶ್ರೀಪಾದ ಸರ್ದೇಶ್ಮುಖ್, ಶಿವಶರಣ ಅಚಲೇರ, ಸ್ವಾಮಿನಾಥ ಲೋಣಾರಿ, ಸಂಜಯ ಪವಾರ, ಅಮರ್ ಪಾಟೀಲ್, ಮಹಾದೇವ ತೇಲಿ, ಸಂಜಯ ಪಾಠಕ್, ದೀಪಕ್ ಜರಿಪಟಕೆ, ರಾಮಚಂದ್ರ ಸಮಾಣೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಸ್ವಾಮಿ ಸಮರ್ಥರ ಪ್ರಕಟದಿನ ನಿಮಿತ್ತ ಹೊರ ರಾಜ್ಯಗಳಿಂದ ಬರುವ ಭಕ್ತರಿಗಾಗಿ ವಸತಿಗೃಹ, ಕುಡಿಯುವ ನೀರು, ಶೌಚಾಲಯ, ಆರೋಗ್ಯ ಹೀಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಅಲ್ಲದೇ ದೇವಸ್ಥಾನದ ಪರಿಸರದಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ