ಮಾನವೀಯತೆ ಮೂಡಿಸುವುದು ಸಾಹಿತ್ಯದ ಕೆಲಸ: ಡಾ| ವಿಶ್ವನಾಥ ಕಾರ್ನಾಡ್‌


Team Udayavani, Mar 21, 2021, 1:17 PM IST

The work of literature is to build humanity

ಮುಂಬಯಿ: ನನಗೆ ಜೀವನದಲ್ಲಿ ಹಣ ಸಂಪಾದಿಸುವ ಅನೇಕ ದಾರಿಗಳು ತೆರೆದುಕೊಂಡಿದ್ದರೂ ನಾನು ಆಯ್ದುಕೊಂಡದ್ದು ಅಧ್ಯಯನ, ಅಧ್ಯಾಪನದ ಕ್ಷೇತ್ರವನ್ನು. ಓದು ಮನುಷ್ಯನನ್ನು ಸಂಸ್ಕಾರಿಯನ್ನಾಗಿಸುತ್ತದೆ. ಸಾಹಿತ್ಯದ ಕೆಲಸ ಮಾನವೀಯತೆಯನ್ನು ಮೂಡಿಸುತ್ತದೆ. ಇದರಿಂದ ನಯ, ವಿನಯ, ಕರುಣೆ, ದಯೆ ನಮ್ಮಲ್ಲಿ ಮೂಡುತ್ತದೆ. ಹಾಗಂತ ನಾನು ಸಾಹಿತಿ ಅಲ್ಲ, ಬರಹಗಾರ ಮಾತ್ರ ಎಂದು ಹೇಳಬಯಸುತ್ತೇನೆ. ನಾನು ನನ್ನ ಖುಷಿಗಾಗಿ ಬರೆದು ಬರಹಗಾರ ಎನಿಸಿಕೊಂಡವನು ಎಂದು ನಿವೃತ್ತ ಪ್ರಾಧ್ಯಾಪಕ ಡಾ| ವಿಶ್ವನಾಥ ಕಾರ್ನಾಡ್‌ ಅವರು ನುಡಿದರು.

ಅವರು ಮಾ. 16ರಂದು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆನ್‌ಲೈನ್‌ ಮೂಲಕ ಆಯೋಜಿಸಿದ್ದ ಡಾ| ವಿಶ್ವನಾಥ ಕಾರ್ನಾಡ ಸಾಹಿತ್ಯ ಸಂಭ್ರಮದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಾಹಿತಿಗಳು ಎಂದಿಗೂ ಶ್ರೀಮಂತರಾಗುವುದಿಲ್ಲ. ನಾನು ಸುಮಾರು 40 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಎಂಎ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೇನೆ. ಸದ್ಯ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಗುಣಮಟ್ಟದ ಅಧ್ಯಾಪನ, ಅಧ್ಯಯನ, ಸಂಶೋಧನೆಯನ್ನು ನೋಡಿ ಸಂತೋಷವಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಡಾ| ಜಿ. ಎನ್‌. ಉಪಾಧ್ಯ ಅವರಂತಹ ಸಮರ್ಥ ಮಾರ್ಗದರ್ಶಕರಿದ್ದಾರೆ. ಒಳ್ಳೆಯ ಪ್ರತಿಭಾವಂತ ವಿದ್ಯಾರ್ಥಿ ವರ್ಗವಿದೆ. ಆದ್ದರಿಂದ ಇದೊಂದು ಶ್ರೀಮಂತ ವಿಭಾಗವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ನಾಡರ ಕನ್ನಡ ಪರಿಚಾರಿಕೆಯ ಕುರಿತು ಮಾತನಾಡಿದ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರು, ಡಾ| ವಿಶ್ವನಾಥ ಕಾರ್ನಾಡರು ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡವರು. ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಕಾವ್ಯದ ಮುಖಾಂತರ ಅವರು ಬರವಣಿಗೆಯನ್ನು ಆರಂಭಿಸಿದರು. ಲವಲವಿಕೆಯ ಕವಿತೆಗಳನ್ನು ಬರೆಯುವ ಸಾಮರ್ಥ್ಯ ಇದ್ದರೂ ಅವರು ಕಥೆಗಳನ್ನು ಬರೆಯುವುದರತ್ತ ತನ್ನ ಒಲವನ್ನು ತೋರಿಸಿದರು. ಸುಮಾರು 50 ಕಥೆಗಳನ್ನು ಅವರು ಬರೆದಿದ್ದು, ವಿಶೇಷವಾಗಿ ಮುಂಬಯಿ ಕೇಂದ್ರಿತ ಕಥೆಗಳು ಗಮನಸೆಳೆಯುತ್ತವೆ. ಕಾರ್ನಾಡರು ಒಳ್ಳೆಯ ಅನುವಾದಕರೂ ಹೌದು. ಅನೇಕ ಭಾಷೆಗಳಲ್ಲಿ ಅವರಿಗೆ ಹಿಡಿತವಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕŒƒತ ಪ್ರತಿಭಾರೇ ಅವರ ಒಡಿಸ್ಸಿ ಕಾದಂಬರಿ ಯಾಜ್ಞಸೇನಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂಶೋಧಕರಾಗಿ, ವಿಮರ್ಶಕರಾಗಿಯೂ ಅವರು ಹೆಸರಾಗಿದ್ದಾರೆ. ಅವರ ತುಳುವರ ಮುಂಬಯಿ ವಲಸೆ ಬಹುಮುಖ್ಯ ಆಕರಗ್ರಂಥ ಎಂದು ಅನೇಕ ಅಗ್ನಿದಿವ್ಯಗಳನ್ನು ಹಾದು ಬಂದ ಕಾರ್ನಾಡರ ಸಾಂಘಿಕ, ಸಾಹಿತ್ಯಿಕ ಕಾರ್ಯಗಳ ಕುರಿತು ಬೆಳಕು ಚೆಲ್ಲಿದರು.

ಇದೇ ಸಂದರ್ಭದಲ್ಲಿ ಡಾ| ವಿಶ್ವನಾಥ ಕಾರ್ನಾಡರು ರಚಿಸಿದ ಕೃತಿಗಳ ಸಮೀಕ್ಷೆ ಮಾಡಲಾಯಿತು. ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ತುಳುವರ ಮುಂಬಯಿ ವಲಸೆ ಕೃತಿ, ವಿದ್ಯಾರ್ಥಿ ಮಿತ್ರರಾದ ಕಲಾ ಭಾಗÌತ್‌ ಅವರು ಸಮಾಲೋಕ ಅಭಿನಂದನ ಗ್ರಂಥ, ರುದ್ರಮೂರ್ತಿ ಪ್ರಭು ಅವರು ಕಾರ್ನಾಡರ ಲೇಖನಗಳ ಸಂಗ್ರಹ ಸಮಚಿಂತನ ಹಾಗೂ ಅನಿತಾ ಪೂಜಾರಿ ತಾಕೋಡೆ ಅವರು ಕಾರ್ನಾಡರ ನಿರಂತರ ಕವನ ಸಂಕಲನದ ಕುರಿತು ಮಾತನಾಡಿದರು.

ಶಾಲಿನಿ ಡಿ. ಕೆ ಅವರು ಕಥಾಸಂಕಲನ ಮೌನಸೆಳೆತದ ಡಾ| ಮಮತಾ ರಾವ್‌ ಅವರ ಲೇಖನ ಮತ್ತು ಡಾ| ಜ್ಯೋತಿ ಸತೀಶ್‌ ಅವರು ಯಾಜ್ಞಸೇನಿಯ ಕುರಿತು ಡಾ| ಮುರಳೀಧರ ಉಪಾಧ್ಯಾಯ ಹಿರಿಯಡಕ ಅವರ ಲೇಖನಗಳನ್ನು ವಾಚಿಸಿದರು. ಡಾ| ಜೀವಿ ಕುಲಕರ್ಣಿ ವಿರಚಿತ ಸುನೀತವನ್ನು ಗೀತಾ ಮಂಜುನಾಥ್‌ ಅವರು ಪ್ರಸ್ತುತಪಡಿಸಿದರು. ಕಾರ್ನಾಡ್‌ ಅವರ ಆಯ್ದ ಎರಡು ಕಥೆಗಳನ್ನು ಶಶಿಕಲಾ ಹೆಗಡೆ ಹಾಗೂ ಲೇಖಕ ಪೇತ್ರಿ ವಿಶ್ವನಾಥ ಶೆಟ್ಟಿ ಅವರು ವಾಚಿಸಿದರು. ನಳಿನಾ ಪ್ರಸಾದ್‌ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.