4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

ಅಂದಿನ ವಿಲನ್‌, ಇಂದು ಗೆಲುವಿನ ರೂವಾರಿ!

Team Udayavani, Jul 16, 2019, 5:38 AM IST

stoks

ಲಂಡನ್‌: ರವಿವಾರ ಲಾರ್ಡ್ಸ್‌ ಅಂಗಳದಲ್ಲಿ ನಡೆದ ವಿಶ್ವಕಪ್‌ ಫೈನಲ್‌ನ ರೋಚಕ ಹಣಾಹಣಿಯಲ್ಲಿ ಬೌಂಡರಿ ಆಧಾರದ ಮೂಲಕ ಇಂಗ್ಲೆಂಡ್‌ ಚೊಚ್ಚಲ ವಿಶ್ವಚಾಂಪಿಯನ್‌ ಆಗಿ ಮೆರೆದಿದೆ. ವಿಶ್ವಕಪ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಬೆನ್‌ ಸ್ಟೋಕ್ಸ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಆ ಬಳಿಕ ಮಾತನಾಡಿದ ಸ್ಟೋಕ್ಸ್‌, ತಮ್ಮ ತಂಡದ ಎಲ್ಲ ಸದಸ್ಯರ 4 ವರ್ಷಗಳ‌ ಪರಿಶ್ರಮವೇ ಇಂದು ವಿಶ್ವಕಪ್‌ ಗೆಲ್ಲಲು ಪ್ರಮುಖ ಕಾರಣ. ಈ ಗೆಲುವಿನ ಹಿಂದೆ ಇಂಗ್ಲೆಂಡ್‌ನ‌ ಎಲ್ಲ ಮಾಜಿ ಆಟಗಾರರ ಸಹಾಯ ಬೆಂಬಲವೂ ಇದೆ ಎಂದರು.

ನ್ಯೂಜಿಲ್ಯಾಂಡ್‌ ಕೂಡ ಚಾಂಪಿಯನ್‌
49.4ನೇ ಓವರ್‌ನಲ್ಲಿ ಗಪ್ಟಿಲ್‌ ಎಸೆದ ಚೆಂಡು ಸ್ಟೋಕ್ಸ್‌ ಬ್ಯಾಟಿಗೆ ತಗುಲಿ ಬೌಂಡರಿ ಗೆರೆ ದಾಟಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಟೋಕ್ಸ್‌, “ನಾನು ಉದ್ದೇಶಪೂರ್ವಕವಾಗಿ ಮಾಡಿದ ಕೆಲಸವಲ್ಲ. ಡೈವ್‌ ಮಾಡುವ ವೇಳೆ ಚೆಂಡು ಬ್ಯಾಟ್‌ಗೆ ತಗುಲಿ ಬೌಂಡರಿ ದಡ ಸೇರಿತ್ತು ಈ ಬಗ್ಗೆ ಅಂಪಾಯರ್‌ಗಳು ಸರಿಯಾದ ತೀರ್ಮಾನ ಕೈಗೊಳ್ಳಬೇಕಿತ್ತು. ಕ್ಷಮೆ ಯಾಚಿಸುವುದನ್ನು ಬಿಟ್ಟು ಇದರ ಬಗ್ಗೆ ನಾನೇನೂ ಹೆಚ್ಚು ಹೇಳುವುದಿಲ್ಲ. ನ್ಯೂಜಿಲ್ಯಾಂಡ್‌ ಕೂಡ ನನ್ನ ದೃಷ್ಟಿಯಲ್ಲಿ ವಿಶ್ವಚಾಂಪಿಯನ್‌. ಅವರ ಆಟಕ್ಕೆ ನಾನು ತಲೆಬಾಗುತ್ತೇನೆ’ ಎಂದು ಕ್ರೀಡಾಸ್ಫೂರ್ತಿ ಮೆರೆದರು.

ನೈಟ್‌ ಬಾರ್‌ ಪ್ರಕರಣದ ವಿಲನ್‌
ಇಂಗ್ಲೆಂಡ್‌ ತಂಡದ ಗೆಲುವಿನ ರೂವಾರಿ ಬೆನ್‌ ಸ್ಟೋಕ್ಸ್‌ 2 ವರ್ಷಗಳ ಹಿಂದೆ ಬ್ರಿಸ್ಟಲ್‌ ನೈಟ್‌ ಬಾರ್‌ ಪ್ರಕರಣವೊಂದರಲ್ಲಿ ಸಿಲುಕಿ ತಮ್ಮ ಕ್ರಿಕೆಟ್‌ ಭವಿಷ್ಯವನ್ನೇ ಅಂಧಕಾರಕ್ಕೆ ತಳ್ಳಿದ ಆಟಗಾರ. ಅನಂತರದ 15 ತಿಂಗಳನ್ನು ತಾನು ಹೇಗೆ ನಿಭಾಯಿಸಿದೆ ಎಂಬುದು ತನಗೇ ತಿಳಿದಿಲ್ಲ. ಬಹುಶಃ ಈ ಘಟನೆಯೇ ತನ್ನ ಬದುಕಿನಲ್ಲಿ, ತಾನು ಆಲೋಚಿಸುವ ರೀತಿಯಲ್ಲಿ, ತನ್ನ ಆಟದಲ್ಲಿ ಸಕಾರಾತ್ಮಕ ಬದಲಾವಣೆ ತಂದಿರಬಹುದೆಂದು ಭಾವಿಸುತ್ತೇನೆ ಎಂದಿದ್ದಾರೆ ಸ್ಟೋಕ್ಸ್‌.

ಅಂದು ಇಂಗ್ಲೆಂಡ್‌ ಪಾಲಿಗಷ್ಟೇ ಅಲ್ಲ, ಕ್ರಿಕೆಟ್‌ ಜಗತ್ತಿನ ಕಣ್ಣಿನಲ್ಲಿ ದೊಡ್ಡ ವಿಲನ್‌ ಆಗಿ ಗೋಚರಿಸಿದ್ದ ಬೆನ್‌ ಸ್ಟೋಕ್ಸ್‌ ಇಂದು ಇಂಗ್ಲೆಂಡಿಗೆ ಚೊಚ್ಚಲ ವಿಶ್ವಕಪ್‌ ತಂದುಕೊಡುವಲ್ಲಿ ವಹಿಸಿದ ಪಾತ್ರ ಸ್ಮರಣೀಯ. ಇಂಗ್ಲೆಂಡ್‌ ಹೇಗೇ ಕಪ್‌ ಗೆಲ್ಲಲಿ, ಸ್ಟೋಕ್ಸ್‌ ಕೊನೆಯ ತನಕ ಕ್ರೀಸ್‌ ಆಕ್ರಮಿಸಿಕೊಳ್ಳದಿದ್ದರೆ, ಸೂಪರ್‌ ಓವರ್‌ನಲ್ಲಿ ಸಿಡಿಯದೇ ಹೋಗಿದ್ದರೆ ಫೈನಲ್‌ ಫ‌ಲಿತಾಂಶ ಬೇರೆಯೇ ಆಗುತ್ತಿದ್ದುದರಲ್ಲಿ ಅನುಮಾನವೇ ಇಲ್ಲ.

ಸ್ಟೋಕ್ಸ್‌ ತಂದೆ ಬೆಂಬಲ ನ್ಯೂಜಿಲ್ಯಾಂಡಿಗೆ!
ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಬಾರಿಸಿದ ಅಜೇಯ 84 ರನ್‌ ಆಂಗ್ಲರಿಗೆ ಚೊಚ್ಚಲ ವಿಶ್ವಕಪ್‌ ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿರಬಹುದು. ಆದರೆ ಸ್ಟೋಕ್ಸ್‌ ತಂದೆ ಗೆರಾರ್ಡ್‌ ಸ್ಟೋಕ್ಸ್‌ ಬೆಂಬಲಿಸಿದ್ದು ಮಾತ್ರ ನ್ಯೂಜಿಲ್ಯಾಂಡ್‌ ತಂಡವನ್ನು!

ಇದೇಕೆಂದು ಆಶ್ಚರ್ಯಚಕಿತರಾದಿರಾ? ಸ್ಟೋಕ್ಸ್‌ ಪೂರ್ವಾಪರವನ್ನು ಅರಿತರೆ ಇದು ಸ್ಪಷ್ಟವಾಗುತ್ತದೆ. ಗೆರಾರ್ಡ್‌ ಸ್ಟೋಕ್ಸ್‌ ಮೂಲತಃ ನ್ಯೂಜಿಲ್ಯಾಂಡಿನವರು.

ಬೆನ್‌ ಸ್ಟೋಕ್ಸ್‌ ಹುಟ್ಟಿದ್ದು ಕೂಡ ನ್ಯೂಜಿಲ್ಯಾಂಡಿನಲ್ಲೇ!
ಆರಂಭದ ಕೆಲವು ವರ್ಷಗಳನ್ನು ಬೆನ್‌ ಸ್ಟೋಕ್ಸ್‌ ಕ್ರೈಸ್ಟ್‌ಚರ್ಚ್‌ಲ್ಲಿ ಕಳೆದಿದ್ದರು. ಸ್ಟೋಕ್ಸ್‌ ಗೆ 12 ವರ್ಷವಾಗಿದ್ದಾಗ ಗೆರಾರ್ಡ್‌ ರಗಿº ಕೋಚಿಂಗ್‌ ಗುತ್ತಿಗೆ ಲಭಿಸಿ ಇಂಗ್ಲೆಂಡ್‌ಗೆ ಬಂದರು. ಬಳಿಕ ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್‌ ಪ್ರಜೆಯಾದರೂ ಅವರ ಹೆತ್ತವರು ಈಗಲೂ ನ್ಯೂಜಿಲ್ಯಾಂಡಿನಲ್ಲೇ ಇದ್ದಾರೆ. ಹೀಗಾಗಿ ಗೆರಾರ್ಡ್‌ ಸ್ಟೋಕ್ಸ್‌ಗೆ ಫೈನಲ್‌ ಪಂದ್ಯದಲ್ಲಿ ಮಗನನ್ನು ಬೆಂಬಲಿಸುವುದೋ ದೇಶವನ್ನು ಬೆಂಬಲಿಸುವುದೋ ಎಂಬ ಉಭಯ ಸಂಕಟ. ಕೊನೆಗೆ ದೇಶಪ್ರೇಮವೇ ಮೇಲುಗೈ ಸಾಧಿಸಿತು. “ನ್ಯೂಜಿಲ್ಯಾಂಡ್‌ ಸೋಲಿನಿಂದ ನಿರಾಶೆಯಾಗಿದೆ. ಅಷ್ಟು ಚೆನ್ನಾಗಿ ಆಡಿಯೂ ಕಪ್‌ ಸಿಗದಿರುವುದು ನಿಜಕ್ಕೂ ಬೇಸರದ ಸಂಗತಿ.

ಆದರೆ ಸ್ಟೋಕ್ಸ್‌ ಮತ್ತು ತಂಡದ ಆಟವನ್ನು ನಾನು ಆನಂದಿಸಿದ್ದೇನೆ. ಆದರೆ ನನ್ನ ಬೆಂಬಲ ಯಾವತ್ತಿದ್ದರೂ ನ್ಯೂಜಿಲ್ಯಾಂಡಿಗೇ…’ ಎಂದಿದ್ದಾರೆ ಗೆರಾರ್ಡ್‌ ಸ್ಟೋಕ್ಸ್‌.

ಟಾಪ್ ನ್ಯೂಸ್

1-dfsadsad

ಪ್ರೊ ಅಸ್ಸಾದಿ ಅವರಿಗೆ 26 ವರ್ಷಗಳ ನಂತರ ಕೈ ಸೇರಿದ ರಾಜೀನಾಮೆ ಪತ್ರ

1-wewqewqe

Nothing ಭಾರತದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ಪ್ರಣಯ್ ರಾವ್ ನೇಮಕ

1-ssdsad

Shirva ಬೈಕುಗಳ ಮುಖಾಮುಖಿ:ಓರ್ವ ಮೃತ್ಯು, ಇನ್ನೋರ್ವ ಗಂಭೀರ

1-qwwqewq

Gadag ವಿರೇಶ್ವರ ಪುಣ್ಯಾಶ್ರಮದಲ್ಲಿ ಅದ್ದೂರಿ ಮಹಾರಥೋತ್ಸವ

Jaishankar

Rahul Gandhi ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸ: ಜೈಶಂಕರ್

sanjay-raut

BJPಗೆ ಬಜರಂಗ ಬಲಿ ಸಹಾಯ ಮಾಡಲಿಲ್ಲ,ಈಗ ಔರಂಗಜೇಬ..: ರಾವುತ್

1-saddsad

Chikkamagaluru ; ನಾಲ್ವರು ಕುಖ್ಯಾತ ಶ್ರೀಗಂಧ ಕಳ್ಳರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

ben

ಬಾರ್‌ ನಲ್ಲಿ ಜಗಳವಾಡಿ ಜೈಲು ಸೇರಿದ್ದ ಸ್ಟೋಕ್ಸ್‌ ಈಗ ವಿಶ್ವ ಗೆದ್ದ ಸಾಧಕ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

1-adasds

Hunsur; ಅಕ್ರಮ ಮರಳು ಸಾಗಾಟ;ಟಿಪ್ಪರ್‌ ಗಳು ವಶ, ಚಾಲಕರು ಪರಾರಿ

1-asds-dsad

ವಸತಿ ವಿದ್ಯಾಲಯದಲ್ಲಿ ಬಾಲಕಿ ಆಕಸ್ಮಿಕ ಸಾವು; ಸೂಕ್ತ ತನಿಖೆಗೆ ಬೇಳೂರು ಸೂಚನೆ

1-dfsadsad

ಪ್ರೊ ಅಸ್ಸಾದಿ ಅವರಿಗೆ 26 ವರ್ಷಗಳ ನಂತರ ಕೈ ಸೇರಿದ ರಾಜೀನಾಮೆ ಪತ್ರ

1-wewqewqe

Nothing ಭಾರತದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ಪ್ರಣಯ್ ರಾವ್ ನೇಮಕ

1-ssdsad

Shirva ಬೈಕುಗಳ ಮುಖಾಮುಖಿ:ಓರ್ವ ಮೃತ್ಯು, ಇನ್ನೋರ್ವ ಗಂಭೀರ