
ಅರ್ಜುನ್ ತೆಂಡುಲ್ಕರ್ ಐಪಿಎಲ್ ಪದಾರ್ಪಣೆ?
Team Udayavani, May 6, 2022, 6:55 AM IST

ಮುಂಬಯಿ: ಸತತವಾಗಿ ಸೋತು 9ನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿರುವ ಮುಂಬೈ ಇಂಡಿಯನ್ಸ್ ಉಳಿದ ಪಂದ್ಯಗಳಲ್ಲಿ ತನ್ನ ಮೀಸಲು ಸಾಮರ್ಥ್ಯವನ್ನು ಬಳಸಿಕೊಂಡೀತೇ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಐಪಿಎಲ್ ಪದಾರ್ಪಣೆ ಮಾಡಿಯಾರೇ? ಇದು ಅಭಿಮಾನಿಗಳ ಕುತೂಹಲ.
ಮುಂಬೈ ಪರ ಈ ಬಾರಿಯ ಐಪಿಎಲ್ನಲ್ಲಿ ಮಿಂಚಿ ರುವುದೆಲ್ಲ ಯುವ ಆಟಗಾರರೇ. ಡಿವಾಲ್ಡ್ ಬ್ರೇವಿಸ್, ತಿಲಕ್ ವರ್ಮ, ಹೃತಿಕ್ ಶೊಕೀನ್, ಕುಮಾರ ಕಾರ್ತಿಕೇಯ… ಇವರಲ್ಲಿ ಪ್ರಮುಖರು. ಈ ಸಾಲಿನಲ್ಲಿ ಅರ್ಜುನ್ ತೆಂಡುಲ್ಕರ್ ಕಾಣಿಸಿಕೊಳ್ಳುವರೇ?
ಶುಕ್ರವಾರ ಮುಂಬೈ ತನ್ನ 10ನೇ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೆಣಸಲಿದೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಮುಂಬೈ ತಂಡದ ಮುಖ್ಯ ಕೋಚ್ ಮಾಹೇಲ ಜಯವರ್ಧನ, “ಎಲ್ಲರಿಗೂ ಆಯ್ಕೆಯ ಅವಕಾಶವಿದೆ, ಅರ್ಜುನ್ ತೆಂಡುಲ್ಕರ್ಗೂ…’ ಎಂದಿದ್ದಾರೆ.
“ಎಲ್ಲರಿಗೂ ಮುಂಬೈ ಪರ ಆಡುವ ಅವಕಾಶ ಇದೆ. ನಾವೀಗ ಗೆಲುವಿನ ಖಾತೆ ತೆರೆದಿದ್ದೇವೆ. ನಮ್ಮ ಮುಖ್ಯ ಯೋಜನೆಯೆಂದರೆ ಉಳಿದ ಪಂದ್ಯಗಳನ್ನೂ ಗೆಲ್ಲುವುದು. ಆಗ ತಂಡದ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಲಿದೆ. ಇದಕ್ಕಾಗಿ ಉತ್ತಮ ಸಾಮರ್ಥ್ಯದ ಆಟಗಾರರನ್ನು ಆಡಿಸಬೇಕಾಗುತ್ತದೆ. ಅರ್ಜುನ್ ತೆಂಡುಲ್ಕರ್ ಈ ವ್ಯಾಪ್ತಿಯಲ್ಲಿದ್ದರೆ ಅವರಿಗೂ ಅವಕಾಶ ಸಿಗಲಿದೆ’ ಎಂದು ಜಯವರ್ಧನ ಹೇಳಿದ್ದಾರೆ.
ಎಡಗೈ ವೇಗಿ :
ಎಡಗೈ ವೇಗಿಯಾಗಿರುವ ಅರ್ಜುನ್ ತೆಂಡುಲ್ಕರ್ 2021ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಪ್ರವೇಶಿಸಿದ್ದರು. ಆದರೆ ಆಡುವ ಅವಕಾಶ ಈವರೆಗೆ ಸಿಕ್ಕಿಲ್ಲ. ಯುಎಇಯಲ್ಲಿ ಮುಂದುವರಿದ 2021ರ ದ್ವಿತೀಯಾರ್ಧದ ಐಪಿಎಲ್ ವೇಳೆ ಗಾಯಾಳಾದ ಕಾರಣ ಅರ್ಜುನ್ ತಂಡದಿಂದ ಬೇರ್ಪಟ್ಟಿದ್ದರು. ಹಾಗೆಯೇ 2021ರ ಜನವರಿ ಬಳಿಕ ಯಾವುದೇ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಆಡಿಲ್ಲ.
ಕಳೆದ ಮೆಗಾ ಹರಾಜಿನಲ್ಲಿ 30 ಲಕ್ಷ ರೂ. ಮೂಲ ಬೆಲೆಗೆ ಅರ್ಜುನ್ ತೆಂಡುಲ್ಕರ್ ಮತ್ತೆ ಮುಂಬೈ ಪಾಲಾಗಿದ್ದರು. ಇವರಿಗಾಗಿ ಗುಜರಾತ್ ಟೈಟಾನ್ಸ್ 25 ಲಕ್ಷ ರೂ. ತನಕ ಬಿಡ್ ಸಲ್ಲಿಸಿತ್ತು!
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಸಿ.ಟಿ ರವಿ ವಿರುದ್ಧ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋಟಿ ರೂ ಕೊಡುತ್ತೇನೆ: ಸಿದ್ದರಾಮಯ್ಯಗೆ ಆಹ್ವಾನ

‘ಟಿಪ್ಪು ನಿಜ ಕನಸು’ ನಾಟಕದ ವಿರುದ್ದದ ದೂರು ಹಿಂಪಡೆದ ಅರ್ಜಿದಾರ: ಅಡ್ಡಂಡ ಸಂತಸ

‘ನಟ ಭಯಂಕರ’ನಿಗೆ ತಲೆಬಿಸಿ ತಂದ ರಾಸಲೀಲೆ ಸಿಡಿ..!

ಪ್ರತಿಭಾವಂತ ಕ್ರಿಕೆಟ್ ಪಟುಗಳ ತವರು ಕರ್ನಾಟಕ: ಕೆ.ವೈ.ವೆಂಕಟೇಶ್

ಎರಡು ಅದ್ಭುತ ಕ್ಯಾಚ್ ಗಳಿಂದ ಬೆರಗು ಮೂಡಿಸಿದ ಸೂರ್ಯಕುಮಾರ್; ವಿಡಿಯೋ ನೋಡಿ