Asia Cup: ಇಂದು ಅಫ್ಘಾನ್‌ ಅಖಾಡಕ್ಕೆ; ಗೆದ್ದರಷ್ಟೇ ಬಾಂಗ್ಲಾಕ್ಕೆ ಉಳಿಗಾಲ


Team Udayavani, Sep 3, 2023, 6:30 AM IST

1-wewwe

ಲಾಹೋರ್‌: ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ರವಿವಾರದ ಪಂದ್ಯದಲ್ಲಿ ಅಪಾಯಕಾರಿ ತಂಡವಾದ ಅಫ್ಘಾನಿಸ್ಥಾನ ಅಖಾಡಕ್ಕೆ ಇಳಿಯಲಿದೆ. ಲಾಹೋರ್‌ನ “ಕರ್ನಲ್‌ ಗದ್ದಾಫಿ ಸ್ಟೇಡಿಯಂ’ನಲ್ಲಿ ನಡೆಯುವ “ಬಿ’ ವಿಭಾಗದ ಮುಖಾಮುಖಿಯಲ್ಲಿ ಅದು ಬಾಂಗ್ಲಾದೇಶವನ್ನು ಎದುರಿಸಲಿದೆ. ಬಾಂಗ್ಲಾಕ್ಕೆ ಇದು ಅಳಿವು ಉಳಿವಿನ ಪಂದ್ಯವಾ ದ್ದರಿಂದ ಕೂಟದ ಕೌತುಕ ಸಹಜವಾಗಿಯೇ ಹೆಚ್ಚಿದೆ.

ಗುರುವಾರ ಪಲ್ಲೆಕೆಲೆಯಲ್ಲಿ ಶ್ರೀಲಂಕಾ ವಿರುದ್ಧ ಆಡಲಾದ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಎಡವಿದ ಕಾರಣ ಬಾಂಗ್ಲಾದೇಶ ಪಾಲಿಗೆ ಇದು ಮಾಡು-ಮಡಿ ಪಂದ್ಯವಾಗಿ ಪರಿಣಮಿಸಿದೆ. ಸೋತರೆ ಅದು ಕೂಟದಿಂದ ನಿರ್ಗಮಿಸಲಿದೆ. ಹೀಗಾಗಿ ಅಫ್ಘಾನ್‌ ಪಡೆಯನ್ನು ಬಗ್ಗುಬಡಿಯಲೇಬೇಕಾದ ಒತ್ತಡ ಶಕಿಬ್‌ ಅಲ್‌ ಹಸನ್‌ ತಂಡದ ಮೇಲಿದೆ.

ಬ್ಯಾಟಿಂಗ್‌ ವೈಫ‌ಲ್ಯ
ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಸೋಲಲು ಮುಖ್ಯ ಕಾರಣ ಬ್ಯಾಟಿಂಗ್‌ ವೈಫ‌ಲ್ಯ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡೂ 164 ರನ್ನುಗಳ ಸಣ್ಣ ಮೊತ್ತಕ್ಕೆ ಆಲೌಟ್‌ ಆಗಿತ್ತು. ವನ್‌ಡೌನ್‌ ಬ್ಯಾಟರ್‌ ನಜ್ಮುಲ್‌ ಹುಸೇನ್‌ ಏಕಾಂಗಿಯಾಗಿ ಹೋರಾಡಿ 89 ರನ್‌ ಬಾರಿಸಿದ ಕಾರಣ ಬಾಂಗ್ಲಾದಿಂದ ಇಷ್ಟಾದರೂ ರನ್‌ ಗಳಿಸಲು ಸಾಧ್ಯವಾಗಿತ್ತು. ಅನುಭವಿ ಶಕಿಬ್‌ ಅಲ್‌ ಹಸನ್‌ ಸೇರಿದಂತೆ ಉಳಿದವರರ್ಯಾರಿಂದಲೂ ಲಂಕಾ ದಾಳಿಯನ್ನು ತಡೆದು ನಿಲ್ಲಲು ಸಾಧ್ಯವಾಗಿರಲಿಲ್ಲ. ವೇಗಿ ಮತೀಶ ಪತಿರಣ ಘಾತಕ ಸ್ಪೆಲ್‌ ಮೂಲಕ ಬಾಂಗ್ಲಾ ಟೈಗರ್‌ಗಳನ್ನು ಬೇಟೆಯಾಡಿದ್ದರು.
ಚೇಸಿಂಗ್‌ ವೇಳೆ ಶ್ರೀಲಂಕಾ ಕೂಡ ಆರಂಭಿಕ ಆಘಾತಕ್ಕೆ ಸಿಲುಕಿತು. ಆದರೆ ಸದೀರ ಸಮರವಿಕ್ರಮ ಮತ್ತು ಚರಿತ ಅಸಲಂಕ ಕ್ರೀಸ್‌ ಆಕ್ರಮಿಸಿಕೊಂಡ ಪರಿಣಾಮ ಲಂಕಾ 39 ಓವರ್‌ಗಳಲ್ಲಿ ಗುರಿ ಮುಟ್ಟಿತ್ತು.

ಗೆಲುವಿನ ಖಾತೆ ತೆರೆದು ಕೂಟದಲ್ಲಿ ಮುಂದುವರಿಯ ಬೇಕಾದರೆ ಬಾಂಗ್ಲಾದ ಬ್ಯಾಟಿಂಗ್‌ ವಿಭಾಗ ಕ್ಲಿಕ್‌ ಆಗಬೇಕಾದುದು ಅತ್ಯಗತ್ಯ. ಆದರೆ ಮೊಹಮ್ಮದ್‌ ನೈಮ್‌-ತಾಂಜಿದ್‌ ಹಸನ್‌ ಅವರ ಆರಂಭಿಕ ಜೋಡಿ ಮೇಲೆ ಭರವಸೆ ಸಾಲದು. ಇವರಲ್ಲಿ ತಾಂಜಿದ್‌ ಲಂಕಾ ವಿರುದ್ಧ ಪದಾರ್ಪಣೈಗದು ಸೊನ್ನೆ ಸುತ್ತಿ ಬಂದಿದ್ದಾರೆ. ಅನುಭವಿಗಳಾದ ಮುಶ್ಫಿಕರ್‌ ರಹೀಂ, ಶಕಿಬ್‌, ಭರವಸೆಯ ಬ್ಯಾಟರ್‌ ತೌಹಿದ್‌ ಹೃದಯ್‌ ಕ್ರೀಸ್‌ ಆಕ್ರಮಿಸಿಕೊಳ್ಳಬೇಕಿದೆ.

ಬಾಂಗ್ಲಾ ಬೌಲಿಂಗ್‌ ವಿಭಾಗ ಘಾತಕವಾಗಿಯೇ ಇದೆ. ಟಸ್ಕಿನ್‌ ಅಹ್ಮದ್‌, ಶೊರೀಫುಲ್‌ ಇಸ್ಲಾಮ್‌, ಶಕಿಬ್‌, ಮೆಹೆದಿ ಹಸನ್‌ ಇಲ್ಲಿನ ಪ್ರಮುಖರು. ಲಂಕೆಗೆ ಸಣ್ಣ ಟಾರ್ಗೆಟ್‌ ಲಭಿಸಿದ ಕಾರಣ ಇವರಿಗೆ ಏನೂ ಮಾಡಲಾಗಲಿಲ್ಲ.

ಅಪಾಯಕಾರಿ ಅಫ್ಘಾನ್‌
ಅಫ್ಘಾನಿಸ್ಥಾನ ಅನಿಶ್ಚಿತ ಆಟಕ್ಕೆ ಹೆಸರುವಾಸಿಯಾದ ಪಡೆ. ಅಪಾಯಕಾರಿಯಾಗಿ ಎದುರಾಳಿ ಮೇಲೆರಗಬಹುದು, ಹೋರಾಟ ನೀಡದೆ ಶರಣಾಗಲೂಬಹುದು. ಅದು ಪಾಕಿಸ್ಥಾನ ವಿರುದ್ಧ ಕ್ಲೀನ್‌ಸಿÌàಪ್‌ ಸಂಕಟ ಅನುಭವಿಸಿ ಏಷ್ಯಾ ಕಪ್‌ ಆಡಲು ಬಂದಿದೆ. ಆದರೆ ಜೂನ್‌-ಜುಲೈಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಸರಣಿಯನ್ನು 2-1ರಿಂದ ಗೆದ್ದ ಹೆಗ್ಗಳಿಕೆಯನ್ನು ಹೊಂದಿದೆ.

ಅಫ್ಘಾನ್‌ ಆರಂಭಕಾರ ರೆಹಮಾನುಲ್ಲ ಗುರ್ಬಜ್‌ ಪ್ರಚಂಡ ಫಾರ್ಮ್ನಲ್ಲಿ ದ್ದಾರೆ. ಕಳೆದ ಏಕದಿನ ಸರಣಿಯಲ್ಲಿ ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ವಿರುದ್ಧ ಸೆಂಚುರಿ ಬಾರಿಸಿದ್ದಾರೆ. ಹಶ್ಮತುಲ್ಲ ಶಾಹಿದಿ, ಇಬ್ರಾಹಿಂ ಜದ್ರಾನ್‌, ನಜೀಬುಲ್ಲ ಜದ್ರಾನ್‌, ಮೊಹಮ್ಮದ್‌ ನಬಿ ಅವರೆಲ್ಲ ಬ್ಯಾಟಿಂಗ್‌ ವಿಭಾಗದ ಆಧಾರಸ್ತಂಭವಾಗಿದ್ದಾರೆ.

ಇತ್ತೀಚೆಗಷ್ಟೇ ನಾಯಕತ್ವ ಕಳೆದುಕೊಂಡ ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌, ಆಫ್ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್‌ ಬೌಲಿಂಗ್‌ ಶಕ್ತಿಯಾಗಿದ್ದಾರೆ. ಮೇಲ್ನೋಟಕ್ಕೆ ಬಾಂಗ್ಲಾಕ್ಕಿಂತ ಅಫ್ಘಾನಿಸ್ಥಾನವೇ ಬಲಿಷ್ಠ ತಂಡವಾಗಿ ಗೋಚರಿಸುತ್ತದೆ.

ಟಾಪ್ ನ್ಯೂಸ್

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.