ಏಶ್ಯ ಕಪ್‌ ಹಾಕಿ: ಭಾರತ ಅಜೇಯ


Team Udayavani, Oct 16, 2017, 1:25 PM IST

16-20.jpg

ಢಾಕಾ: ರವಿವಾರದ ಲೀಗ್‌ ಹಣಾಹಣಿಯಲ್ಲಿ ಬದ್ಧ ಎದುರಾಳಿ ಪಾಕಿಸ್ಥಾನವನ್ನು 3-1 ಗೋಲುಗಳಿಂದ ಹೊಡೆದುರುಳಿಸಿದ ಭಾರತ “ಏಶ್ಯ ಕಪ್‌’ ಹಾಕಿ ಪಂದ್ಯಾವಳಿಯಲ್ಲಿ ಅಜೇಯವಾಗಿ “ಸೂಪರ್‌-4′ ಹಂತಕ್ಕೆ ಲಗ್ಗೆ ಹಾಕಿದೆ. “ಎ’ ವಿಭಾಗದಲ್ಲಿ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿದ ಮನ್‌ಪ್ರೀತ್‌ ಸಿಂಗ್‌ ಪಡೆ ಒಟ್ಟು 9 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡಿತು.

ಪಾಕಿಸ್ಥಾನ ಮತ್ತು ಜಪಾನ್‌ ತಲಾ ಒಂದು ಜಯ, ಒಂದು ಡ್ರಾ ಹಾಗೂ ಒಂದು ಸೋಲಿನೊಂದಿಗೆ 4 ಅಂಕ ಸಂಪಾದಿಸಿದರೂ ಗೋಲು ಗಳಿಕೆಯಲ್ಲಿ ಮುಂದಿದ್ದ ಪಾಕಿಸ್ಥಾನ ಮುಂದಿನ ಸುತ್ತು ಪ್ರವೇಶಿಸಿತು. “ಎ’ ವಿಭಾಗದ ಇನ್ನೊಂದು ಪಂದ್ಯದಲ್ಲಿ ಜಪಾನ್‌ 3-1 ಅಂತರದಿಂದ ಬಾಂಗ್ಲಾದೇಶವನ್ನು ಪರಾಭವಗೊಳಿಸಿತು. 

ಚಿಂಗ್ಲೆನ್ಸಾನ ಸಿಂಗ್‌ (17ನೇ ನಿಮಿಷ), ರಮಣ್‌ದೀಪ್‌ ಸಿಂಗ್‌ (44ನೇ ನಿಮಿಷ) ಮತ್ತು ಹರ್ಮನ್‌ಪ್ರೀತ ಸಿಂಗ್‌ (45ನೇ ನಿಮಿಷ) ಭಾರತದ ಗೋಲುವೀರರು. ಇವರ ಸಾಹಸದಿಂದ ಭಾರತ 3ನೇ ಕ್ವಾರ್ಟರ್‌ ಮುಗಿಯುವಾಗ 3-0 ಮುನ್ನಡೆಯೊಂದಿಗೆ ದಾಪುಗಾಲಿಕ್ಕಿತ್ತು. ಪಾಕಿಸ್ಥಾನದ ಏಕೈಕ ಗೋಲು 49ನೇ ನಿಮಿಷದಲ್ಲಿ ಅಲಿ ಶಾನ್‌ ಅವರಿಂದ ದಾಖಲಾಯಿತು. ಇದಕ್ಕೂ ಮುನ್ನ ಭಾರತ ಜಪಾನನ್ನು 5-1 ಗೋಲುಗಳಿಂದ, ಆತಿಥೇಯ ಬಾಂಗ್ಲಾದೇಶವನ್ನು 7-0 ಗೋಲುಗಳಿಂದ ಮಣಿಸಿತ್ತು.

ಮೇಲುಗೈ ಸಾಧಿಸಿದ ಭಾರತ
ಮೊದಲ ಕ್ವಾರ್ಟರ್‌ನಲ್ಲಿ ಭಾರತ-ಪಾಕಿಸ್ಥಾನ ಗಳೆರಡೂ ಆಕ್ರಮಣದ ಜತೆಗೆ ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಒತ್ತು ಕೊಟ್ಟವು. ಈ ಅವಧಿಯ ಕೊನೆಯ ಕ್ಷಣದಲ್ಲಿ ಪಾಕ್‌ ಪೆನಾಲ್ಟಿ ಕಾರ್ನರ್‌ ಒಂದನ್ನು ಪಡೆಯಿತಾದರೂ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫ‌ಲವಾಯಿತು. 

ದ್ವಿತೀಯ ಕ್ವಾರ್ಟರ್‌ನ ಆರಂಭದಲ್ಲೇ ಭಾರತ ಗೋಲಿನ ಖಾತೆ ತೆರೆದು ಮೇಲುಗೈ ಸಾಧಿಸಿತು. ಆಕಾಶ್‌ದೀಪ್‌ ಸಿಂಗ್‌ ಅವರಿಂದ ಅಮೋಘ ಪಾಸ್‌ ಒಂದನ್ನು ಪಡೆದ ಚಿಂಗ್ಲೆನ್ಸಾನ ಸಿಂಗ್‌ ಅದ್ಬುತ ಗೋಲೊಂದನ್ನು ಸಿಡಿಸಿದರು. ಎರಡೇ ನಿಮಿಷದಲ್ಲಿ ಗುರ್ಜಂತ್‌ ಸಿಂಗ್‌ ಮುಂದೆ ಗೋಲಿನ ಅವಕಾಶ ತೆರೆಯಿತಾದರೂ ಇದರಲ್ಲಿ ಅವರು ಯಶಸ್ಸು ಕಾಣಲಿಲ್ಲ. ಬಳಿಕ ಪಾಕಿಸ್ಥಾನಕ್ಕೆ ಮತ್ತೂಂದು ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿತು. ಮೊಹಮ್ಮದ್‌ ಅಟ್ಟಿಕ್‌ ಹೊಡೆತವನ್ನು ಯುವ ಗೋಲ್‌ಕೀಪರ್‌ ಸೂರಜ್‌ ಕರ್ಕೇರ ಅಮೋಘ ರೀತಿಯಲ್ಲಿ ತಡೆದರು. 

ಪಂದ್ಯದ ಅರ್ಧ ಅವಧಿಯ ಬಳಿಕ ಭಾರತ ತನ್ನ ಗೋಲಿಯನ್ನು ಬದಲಿಸಿತು. ಕರ್ಕೇರ ಸ್ಥಾನದಲ್ಲಿ ಆಕಾಶ್‌ ಚಿಕ್ತೆ ಬಂದರು. 40ನೇ ನಿಮಿಷದಲ್ಲಿ ಇವರಿಂದಲೂ “ಸೂಪರ್ಬ್ ಸೇವ್‌’ ಪ್ರದರ್ಶನ ಕಂಡುಬಂತು. ಅನಂತರವೇ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿದ್ದು. ಆದರೆ ಇದನ್ನು ವರುಣ್‌ ಕುಮಾರ್‌ ವಿಫ‌ಲಗೊಳಿಸಿದರು. ಬಳಿಕ ಪಾಕಿಸ್ಥಾನದ 3ನೇ ಪೆನಾಲ್ಟಿ ಕಾರ್ನರ್‌ ಕೂಡ ವಿಫ‌ಲಗೊಂಡಿತು.

2 ನಿಮಿಷ, 2 ಗೋಲು!
ಮುಂದಿನ ಎರಡೇ ನಿಮಿಷಗಳಲ್ಲಿ ಭಾರತದ ಮುನ್ನಡೆ 3-0ಗೆ ವಿಸ್ತರಿಸಲ್ಪಟ್ಟಿತು. 44ನೇ ನಿಮಿಷದಲ್ಲಿ ರಮಣ್‌ದೀಪ್‌ ಸಿಂಗ್‌, ಮುಂದಿನ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಪಾಕಿಗೆ ಆಘಾತವಿಕ್ಕಿದರು. ಭಾರತದ ಗೆಲುವು ಖಾತ್ರಿಯಾಯಿತು. ಭಾರತಕ್ಕೆ ದಕ್ಕಿದ 2ನೇ ಪೆನಾಲ್ಟಿ ಕಾರ್ನರನ್ನು ಹರ್ಮನ್‌ಪ್ರೀತ್‌ ಗೋಲು ಪೆಟ್ಟಿಗೆಗೆ ತಳ್ಳುವಲ್ಲಿ ಯಶಸ್ವಿಯಾದರು. 

3 ಗೋಲುಗಳ ಹಿನ್ನಡೆಗೆ ಸಿಲುಕಿದ ಪಾಕಿಸ್ಥಾನ 4ನೇ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಲೇಬೇಕಾದ ಒತ್ತಡಕ್ಕೆ ಸಿಲುಕಿದರೂ ಭಾರತದ ಪಾರಮ್ಯದ ಮುಂದೆ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಅಲಿ ಶಾನ್‌ ಗೋಲು ಖಾತೆ ತೆರೆದು ಸೋಲಿನ ಅಂತರವನ್ನು ತಗ್ಗಿಸಿದರು. ಅನಂತರದ 4ನೇ ಪೆನಾಲ್ಟಿ ಕಾರ್ನರ್‌ ಹೊಡೆತವನ್ನು ಗೋಲಿ ಆಕಾಶ್‌ ಚಿಕ್ತೆ ಯಶಸ್ವಿಯಾಗಿ ತಡೆದರು. ಅಲ್ಲಿಗೆ ಪಾಕ್‌ ಕತೆ ಮುಗಿದಿತ್ತು.

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.