Asian Games ; ಜಪಾನ್‌ನಲ್ಲಿ  ಬೆಳಗಲಿದೆ 20ನೇ ಏಷ್ಯಾಡ್‌ ಜ್ಯೋತಿ

ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದ 19ನೇ ಏಷ್ಯನ್‌ ಗೇಮ್ಸ್‌  ಮುಕ್ತಾಯ

Team Udayavani, Oct 9, 2023, 12:09 AM IST

1-qweqweqwe

ಹ್ಯಾಂಗ್‌ಝೂ: ಕಳೆದ 2 ವಾರಗಳಿಂದ ಚೀನದ ಹ್ಯಾಂಗ್‌ಝೂನಲ್ಲಿ ನಡೆಯುತ್ತದ್ದ 19ನೇ ಏಷ್ಯನ್‌ ಗೇಮ್ಸ್‌ ಸುಸಂಪನ್ನಗೊಂಡಿದೆ. ಆದರೆ ಇದು ಮುಗಿದದ್ದೇ ಗೊತ್ತಾಗಲಿಲ್ಲ. ಭಾರತೀಯರು ದಿನದಿನಕ್ಕೆ ತಮ್ಮ ಪದಕಗಳ ಸಂಖ್ಯೆ ವೃದ್ಧಿಸಿಕೊಳ್ಳುತ್ತ ಹೋಗಿದ್ದರಿಂದ ಒಂದು ಸುಂದರ, ಅವಿಸ್ಮರಣೀಯ ನೆನಪುಗಳನ್ನು ಭಾರತೀಯರಲ್ಲಿ ತುಂಬಿದೆ. ರವಿವಾರ 75 ನಿಮಿಷಗಳ ಕಾಲ ನಡೆದ ಮುಕ್ತಾಯ ಸಮಾರಂಭದಲ್ಲಿ, ಏಷ್ಯಾ ಒಲಿಂಪಿಕ್ಸ್‌ ಕೌನ್ಸಿಲ್‌ನ ಹಂಗಾಮಿ ಮುಖ್ಯಸ್ಥ ರಣಧೀರ್‌ ಸಿಂಗ್‌ ಕೂಟದ ಮುಕ್ತಾಯವನ್ನು ಘೋಷಿಸಿದರು.

“19ನೇ ಏಷ್ಯಾಡ್‌ ಮುಕ್ತಾಯವಾಗಿದೆ ಎಂದು ಘೋಷಿಸುತ್ತಿದ್ದೇನೆ. ಏಷ್ಯಾ ಒಲಿಂಪಿಕ್‌ ಕೌನ್ಸಿಲ್‌ನ ಸಂಪ್ರದಾಯದಂತೆ ಏಷ್ಯಾದ ಯುವಕರು, ಜಪಾನಿನ ನಗೋಯ ಆಯಿcಯಲ್ಲಿ ನಡೆಯುವ 20ನೇ ಕೂಟದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡುತ್ತಿದ್ದೇನೆ. ಏಷ್ಯಾ ಮತ್ತು ವಿಶ್ವ ಹ್ಯಾಂಗ್‌ಝೂವನ್ನು ಪ್ರೀತಿಸುತ್ತದೆ. ನೀವು ಅತ್ಯದ್ಭುತ ಆತಿಥೇಯರಾದಿರಿ. ಇದನ್ನು ಒಸಿಎ ಎಂದಿಗೂ ಮರೆಯುವುದಿಲ್ಲ. ಚೀನ ಸರಕಾರಕ್ಕೆ, ಚೀಮ ಒಲಿಂಪಿಕ್‌ ಸಮಿತಿಗೆ, ಹ್ಯಾಂಗ್‌ಝೂ ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ನಿಮ್ಮೆಲ್ಲರಿಂದ ಈ ಕೂಟ ಹಿಂದೆಂದೂ ಕಾಣದ ಯಶಸ್ಸನ್ನು ನೋಡಿದೆ’ ಎಂದು ರಣಧೀರ್‌ ಸಿಂಗ್‌ ಹೇಳಿದರು. ಈ ವೇಳೆ ಚೀನದ ಪ್ರಧಾನಿ ಲೀ ಖೀಯಾಂಗ್‌, ಇತರ ಗಣ್ಯರು ಇದ್ದರು.

ಭಾರತೀಯ ತಂಡದ ಮೆರವಣಿಗೆಯಲ್ಲಿ 100 ಮಂದಿ ಪಾಲ್ಗೊಂಡಿದ್ದರು. ಉಳಿದವರು ಆಗಲೇ ಕೂಟವನ್ನು ತೊರೆದಿದ್ದರು. ಮುಕ್ತಾಯ ಸಮಾರಂಭದ ಮೆರವಣಿಗೆಯ ನೇತೃತ್ವವನ್ನು ಹಾಕಿ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ವಹಿಸಿದ್ದರು.

ತಂತ್ರಜ್ಞಾನ, ಕಲೆಗಳ ಸಮ್ಮಿಲನ
ಏಷ್ಯಾಡ್‌ನ‌ ಮುಕ್ತಾಯ ಸಮಾರಂಭ ವರ್ಣರಂಜಿತವಾಗಿತ್ತು. ಚೀನ ತನ್ನ ತಾಂತ್ರಿಕ ಶಕ್ತಿಯನ್ನು ಇಲ್ಲಿ ತೆರೆದಿಟ್ಟಿತು. ಉದ್ಘಾಟನ ಸಮಾರಂಭದಲ್ಲೂ ಚೀನದ ತಾಂತ್ರಿಕ ಶಕ್ತಿಯೇ ಮೇಲುಗೈ ಸಾಧಿಸಿತ್ತು. ಮುಕ್ತಾಯ ಸಮಾರಂಭದಲ್ಲಿ “ಬಿಗ್‌ ಲೋಟಸ್‌ ಫ‌ುಟ್‌ಬಾಲ್‌ ಮೈದಾನ’ವನ್ನೇ ತೋಟದಂತೆ ಪರಿವರ್ತಿಸಲಾಗಿತ್ತು. ಇದರಲ್ಲಿ ಡಿಜಿಟಲ್‌ ತಂತ್ರಜ್ಞಾನ, ಕಲೆ, ಪರಿಸರವನ್ನು ಸುಂದರವಾಗಿ, ಸಂತುಲಿತವಾಗಿ ಸಂಯೋಜಿಸಲಾಗಿತ್ತು.

ತಂತ್ರಜ್ಞಾನದ ನೆರವಿನಿಂದ ಬಿಗ್‌ ಲೋಟಸ್‌ ಮೈದಾನವನ್ನು ಡಿಜಿಟಲ್‌ ಟಫ್ìನಂತೆ ತೋರಿಸಲಾಯಿತು. ಅದರ ಒಂದು ಪಕ್ಕದಲ್ಲಿ ಏಷ್ಯಾದ ಅಕ್ಷರಗಳನ್ನು ಬಿಡಿಬಿಡಿಯಾಗಿ ಬರೆಯಲಾಗಿತ್ತು. ಡಿಜಿಟಲ್‌ ಪರದೆಯಲ್ಲಿ ರಾಶಿರಾಶಿ ಹೂಗಳು ನಳನಳಿಸುತ್ತಿದ್ದವು.

ಟಫ್ìನಲ್ಲಿ ಒಂದು ಬಲೆಯನ್ನು ಸೃಷ್ಟಿಸಲಾಗಿತ್ತು. ಇದರಲ್ಲಿ ಹೊಳೆಯುವ 40,000 ಸಣ್ಣ ಬೆಳಕಿನ ಕೇಂದ್ರಗಳನ್ನು ಗುರುತಿಸಿ, ಅವನ್ನು ಬೆಸ ಸಂಖ್ಯೆಯಲ್ಲಿ ನೇಯಲಾಗಿತ್ತು. ಇವೆಲ್ಲ ಸೇರಿ ಇಡೀ ಅಂಕಣವನ್ನೇ ವರ್ಣಫ‌ಲಕವನ್ನಾಗಿ ಪರಿವರ್ತಿಸಿದಂತೆ ಕಂಡುಬಂತು. ಅಲ್ಲಿ ತಾರೆಗಳು ತುಂಬಿದ ಆಗಸ, ಹೂಗಳು, ನೀರಿನ ಅಲೆಗಳು ಕಾಣಿಸಿಕೊಳ್ಳುತ್ತಿದ್ದವು.

ವೇದಿಕೆಯಲ್ಲಿ ನೆನಪುಗಳ ನದಿಯೇ ಹರಿಯಿತು. ಸ್ವಯಂಸೇವಕರು ಹಾಕಿದ ಪರಿಶ್ರಮ, ಚಿಂತನಾಪೂರ್ಣ ಸೇವೆಗಳನ್ನು ನೆನಪಿಸಿಕೊಳ್ಳಲಾಯಿತು. ಅಂತಿಮವಾಗಿ ಎಲ್ಲ ಸ್ವಯಂಸೇವಕರನ್ನು ಆ್ಯತ್ಲೀಟ್‌ಗಳನ್ನು ಕೂಡಿಕೊಳ್ಳಲು ಕರೆಯಲಾಯಿತು. ಇದು ಸಮಾರಂಭದ ಅಂತಿಮ ಭಾಗವಾಗಿ ನಡೆಯಿತು.19ನೇ ಏಷ್ಯಾಡ್‌ ಮುಕ್ತಾಯವಾದ ಸಂಕೇತವಾಗಿ ವರ್ಚುವಲ್‌ ಮೂಲಕ ಜ್ಯೋತಿ ಹಿಡಿದುಕೊಂಡಿದ್ದ ದೈತ್ಯ ವ್ಯಕ್ತಿ, ಗೇಮ್ಸ್‌ ಜ್ಯೋತಿಯನ್ನು ನಂದಿಸಿದ. ಹಾಗೆಯೇ ಮನಮಿಡಿಯುವಂತೆ ನಿಧಾನಕ್ಕೆ ಕಣ್ಮರೆಯಾಗಿ ಹೋದ. ಇಲ್ಲಿ ನಂದಿದ ಬೆಳಕು 2026ರಲ್ಲಿ ಜಪಾನಿನ ನಗೋಯ ಆಯಿcಯಲ್ಲಿ ಹತ್ತಿಕೊಳ್ಳಲಿದೆ.

ಟಾಪ್ ನ್ಯೂಸ್

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.