ಬಲ್ಬೀರ್ ಸಿಂಗ್ ನಿಧನಕ್ಕೆ ಕ್ರೀಡಾಪಟುಗಳ ಶೋಕ
Team Udayavani, May 26, 2020, 5:00 AM IST
ಹೊಸದಿಲ್ಲಿ: ಬಲ್ಬೀರ್ ಸಿಂಗ್ ಅಗಲಿಕೆಗೆ ಭಾರತದ ಕ್ರೀಡಾ ವಲಯ ಕಂಬನಿ ಮಿಡಿದಿದೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಅಧ್ಯಕ್ಷ ನರೀಂದರ್ ಬಾತ್ರಾ, ಕ್ರೀಡಾ ಸಚಿವ ಕಿರಣ್ ರಿಜಿಜು, ಮಾಜಿ ಹಾಕಿ ಆಟಗಾರರಾದ ಸರ್ದಾರ್ ಸಿಂಗ್, ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್, ವನಿತಾ ತಂಡದ ನಾಯಕಿ ರಾಣಿ ರಾಮ್ಪಾಲ್, ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್, ಪಿ.ಟಿ. ಉಷಾ ಮೊದಲಾದವರೆಲ್ಲ ಸಾಧಕನ ಗುಣಗಾನ ಮಾಡುತ್ತ ಶೋಕ ವ್ಯಕ್ತಪಡಿಸಿದ್ದಾರೆ.