ಪಾಕಿಸ್ಥಾನ ಕ್ರಿಕೆಟ್ ತಂಡದ ನಾಯಕನಿಗೆ ಆಟದ ನಿಯಮಗಳೇ ಗೊತ್ತಿಲ್ಲ! ತಂಡಕ್ಕೆ ಪೆನಾಲ್ಟಿ!
Team Udayavani, Jun 11, 2022, 1:42 PM IST
ಮುಲ್ತಾನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಪಾಕಿಸ್ಥಾನ ತಂಡ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಪಾಕಿಸ್ಥಾನ ನಾಯಕ ಬಾಬರ್ ಅಜಂ ನಡೆ ತೀವ್ರ ಟೀಕೆಗೆ ಗುರಿಯಾಗಿದೆ.
ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಬಾಬರ್ ಅಜಂ ಅವರು ವಿಕೆಟ್ ಕೀಪರ್ ಬಳಸುವ ಗ್ಲೌಸ್ ಬಳಸಿದ್ದಾರೆ. ಕ್ರಿಕೆಟ್ ನಿಯಮಗಳ ಪ್ರಕಾರ ಹೀಗೆ ಮಾಡುವಂತಿಲ್ಲ. ಹೀಗಾಗಿ ಐದು ರನ್ ಪೆನಾಲ್ಟಿ ವಿಧಿಸಲಾಗಿದೆ.
ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 29ನೇ ಓವರ್ ನಲ್ಲಿ ಬಾಬರ್ ಅಜಂ ಈ ಅತಿರೇಕ ಪ್ರದರ್ಶಿಸಿದರು. ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರ ಕೀಪಿಂಗ್ ಗ್ಲೌಸ್ ಬಳಸಿದ ಬಾಬರ್ ಫೀಲ್ಡಿಂಗ್ ಮಾಡಿದರು. ಇದು ನಿಯಮಬಾಹಿರ ಫೀಲ್ಡಿಂಗ್ ಎಂದು ಪರಿಗಣಿಸಲಾಗಿದ್ದು, ತಂಡಕ್ಕೆ ಐದು ರನ್ ಪೆನಾಲ್ಟಿ ವಿಧಿಸಲಾಗಿದೆ.
ಇದನ್ನೂ ಓದಿ:ಕೃಷ್ಣನ ‘ದಿಲ್ ಪಸಂದ್’; ಜೂ.12ಕ್ಕೆ ಚಿತ್ರದ ಫಸ್ಟ್ ಗ್ಲಿಂಪ್ಸ್
ಕ್ರಿಕೆಟ್ ನಿಯಮಗಳ ಪ್ರಕಾರ ವಿಕೆಟ್ ಕೀಪರ್ ಹೊರತು ಪಡಿಸಿ ಉಳಿದ ಯಾವ ಫೀಲ್ಡರ್ ಕೂಡಾ ಗ್ಲೌಸ್ ಧರಿಸುವಂತಿಲ್ಲ. ಅಲ್ಲದೆ ಅಂಪೈರ್ ಅನುಮತಿಯಿಲ್ಲದೆ ಕೈಗೆ ಅಥವಾ ಬೆರಳಿಗೆ ಯಾವುದೇ ಸುರಕ್ಷತಾ ಪಟ್ಟಿ/ ಬ್ಯಾಂಡ್ ಧರಿಸುವಂತಿಲ್ಲ.
A rare thing happened tonight. West Indies were awarded 5 penalty runs due to illegal fielding by Pakistan.
Laws of cricket:
28.1 – No fielder other than the wicket-keeper shall be permitted to wear gloves or external leg guards. #PakvWI pic.twitter.com/WPWf1QeZcP
— Mazher Arshad (@MazherArshad) June 10, 2022
ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ಥಾನ ತಂಡ ಎಂಟು ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 32.2 ಓವರ್ ಗಳಲ್ಲಿ 155 ರನ್ ಗೆ ಆಲೌಟಾಗಿ, 120 ರನ್ ಅಂತರದ ಸೋಲನುಭವಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ