

Team Udayavani, Aug 7, 2024, 9:36 AM IST
ಢಾಕಾ: ಬಾಂಗ್ಲಾದೇಶದಲ್ಲಿ ದಂಗೆ ಭುಗಿಲೆದ್ದಿರುವ ಸಂಧರ್ಭದಲ್ಲಿ ಹಿಂದೂ ಕ್ರಿಕೆಟಿಗ ಲಿಟನ್ ದಾಸ್ ಅವರಿಗೆ ಸಂಬಂಧಿಸಿದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಲಿಟನ್ ದಾಸ್ ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.
ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ನಿರಂತರವಾಗಿ ಹಿಂಸಾಚಾರ ನಡೆಸುತ್ತಿದ್ದು, ಶೇಖ್ ಹಸೀನಾ ಬೆಂಬಲಿಗರಲ್ಲದೆ ಹಿಂದೂಗಳ ಮನೆ ಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ ಎಂದು ಸುದ್ದಿ ವೈರಲ್ ಆಗಿದೆ.
ವಾಸ್ತವವಾಗಿ, ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಲಾಗಿದೆ . ಪ್ರತಿಭಟನಾಕಾರರು ಲಿಟನ್ ದಾಸ್ ಅವರ ಮನೆಯನ್ನು ಗುರಿಯಾಗಿಸಿಕೊಂಡಿಲ್ಲ. ಆದರೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಫೆ ಮೊರ್ತಜಾ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಮುಶ್ರಫೆ ಮೊರ್ತಜಾ ಅವರು ಶೇಖ್ ಹಸೀನಾ ಅವರ ಪಕ್ಷವಾದ ಬಾಂಗ್ಲಾದೇಶ ಅವಾಮಿ ಲೀಗ್ನ ಸಂಸದರಾಗಿದ್ದರು. ಇದರಿಂದ ಮುಶ್ರಫೆ ಮೊರ್ತಜಾ ಮೇಲೆ ಪ್ರತಿಭಟನಾಕಾರರ ಆಕ್ರೋಶ ಭುಗಿಲೆದ್ದಿದ್ದು ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಅಕ್ಟೋಬರ್ನಲ್ಲಿ ಮಹಿಳಾ ಟಿ20 ವಿಶ್ವಕಪ್ನ ಆತಿಥ್ಯವನ್ನು ಬಾಂಗ್ಲಾದೇಶ ವಹಿಸಿಕೊಂಡಿದ್ದು, ಪರಿಸ್ಥಿತಿಯನ್ನು ಐಸಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಜಕೀಯ ಪರಿಸ್ಥಿತಿಯಿಂದಾಗಿ ಅಪಾಯದ ಮೋಡಗಳು ಆವರಿಸಿದ್ದು ಅಲ್ಲಿ ನಡೆಯುವ ಅನುಮಾನಗಳು ಮೂಡಿವೆ.
ಮುಶ್ರಫೆ ಮೊರ್ತಜಾ, ಶೇಖ್ ಹಸೀನಾ
Ad
FIDE ಮಹಿಳಾ ವಿಶ್ವಕಪ್ ಚೆಸ್: ಪ್ರಿ ಕ್ವಾರ್ಟರ್ಗೆ ದಿವ್ಯಾ, ಹಂಪಿ
Tokyo ಜಪಾನ್ ಬ್ಯಾಡ್ಮಿಂಟನ್: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ
IPL: ಸನ್ರೈಸರ್ ಹೈದರಾಬಾದ್ಗೆ ವರುಣ್ ಆರೋನ್ ಬೌಲಿಂಗ್ ಕೋಚ್
ವಿಂಬಲ್ಡನ್ ಗೆಲ್ಲಬೇಕಾದರೆ ಅಲ್ಕರಾಜ್ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್
AUS Vs WI: ಕಿಂಗ್ಸ್ಟನ್ ಟೆಸ್ಟ್ : 181 ರನ್ ಮುನ್ನಡೆಯಲ್ಲಿ ಆಸ್ಟ್ರೇಲಿಯ
You seem to have an Ad Blocker on.
To continue reading, please turn it off or whitelist Udayavani.