ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ಗೆ ಮೊದಲ ಆಘಾತ
ಯುಪಿ ಯೋಧಾಸ್ ವಿರುದ್ಧ ದಬಾಂಗ್ ಡೆಲ್ಲಿಗೆ ರೋಚಕ ಜಯ
Team Udayavani, Oct 12, 2022, 11:25 PM IST
ಬೆಂಗಳೂರು: ಆರಂಭದ ಜಿದ್ದಾಜಿದ್ದಿ ಸ್ಪರ್ಧೆಯ ಬಳಿಕ ಬೆಂಗಾಲ್ ವಾರಿಯರ್ನ ರಭಸದ ಆಟಕ್ಕೆ ತಲೆಬಾಗಿದ ಆತಿಥೇಯ ಬೆಂಗಳೂರು ಬುಲ್ಸ್, ಪ್ರೊ ಕಬಡ್ಡಿ ಸೀಸನ್-9ರಲ್ಲಿ ಮೊದಲ ಸೋಲನುಭವಿಸಿದೆ. ಬುಧವಾರದ ಪಂದ್ಯದಲ್ಲಿ ಬುಲ್ಸ್ 33-42 ಅಂತರದ ಆಘಾತಕ್ಕೊಳಗಾಯಿತು. ಮೊದಲೆರಡು ಪಂದ್ಯಗಳಲ್ಲಿ ಟೈಟಾನ್ಸ್ ಮತ್ತು ಪುಣೇರಿ ವಿರುದ್ಧ ಬುಲ್ಸ್ ಜಯ ಸಾಧಿಸಿತ್ತು.
ಮೊದಲಾರ್ಧದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿ ಸ್ಪರ್ಧೆಗೆ ಇಳಿದವು. ಬೆಂಗಾಲ್ ವಾರಿಯರ್ಗೆ ಪಂದ್ಯಕ್ಕೆ ಮರಳಲು ಬುಲ್ಸ್ ಅಲ್ಲಲ್ಲಿ ಹಾದಿಯನ್ನು ಕಲ್ಪಿಸುತ್ತ ಬಂತು. ವಿರಾಮದ ವೇಳೆ ಬುಲ್ಸ್ 14-13 ಅಂತರದ ಸಣ್ಣದೊಂದು ಮುನ್ನಡೆ ಸಾಧಿಸಿತ್ತು.
ಬ್ರೇಕ್ ಬಳಿಕ ಬೆಂಗಾಲ್ ಬಿರುಸಿನ ಪ್ರದರ್ಶನ ನೀಡತೊಡಗಿತು. ಬುಲ್ಸ್ಗೆ ಮುನ್ನುಗ್ಗಿ ಬರಲು ಸಾಧ್ಯವಾಗಲಿಲ್ಲ. ಬೆಂಗಾಲ್ ಪರ ರೈಡರ್ ಮಣಿಂದರ್ ಸಿಂಗ್ ಕಪ್ತಾನನ ಆಟದ ಮೂಲಕ ತಂಡದ ಆಪತಾºಂಧವನಾಗಿ ಗೋಚರಿಸಿದರು. ಮಣಿಂದರ್ 11 ಅಂಕ, ಮತ್ತೋರ್ವ ರೈಡರ್ ಶ್ರೀಕಾಂತ್ ಜಾಧವ್ 6 ಅಂಕ, ಡಿಫೆಂಡರ್ ಗಿರೀಶ್ ಮಾರುತಿ 5 ಅಂಕ, ವೈಭವ್ ಗರ್ಜೆ 4 ಅಂಕ ಗಳಿಸಿದರು.
ಬುಲ್ಸ್ ತಂಡದ ರೈಡರ್ಗಳಾದ ಭರತ್ (8 ಅಂಕ) ಮತ್ತು ವಿಕಾಸ್ ಕಂಡೋಲ (7 ಅಂಕ) ಗಮನಾರ್ಹ ಪ್ರದರ್ಶನವಿತ್ತರು.
ಡೆಲ್ಲಿಗೆ ರೋಚಕ ಜಯ
ದಿನದ ಇನ್ನೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ 44-42 ಅಂತರ ದಿಂದ ಯುಪಿ ಯೋಧಾಸ್ಗೆ ಸೋಲುಣಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ