ಪ್ರಶಸ್ತಿ ಸೀಕರಿಸಲು ಹಿಜಾಬ್‌ ಧರಿಸಿ: ಬೆಂಗಳೂರಿನ ಆಟಗಾರ್ತಿಗೆ ಇರಾನ್ ಸಂಘಟಕರ ಸೂಚನೆ


Team Udayavani, Feb 7, 2023, 10:45 AM IST

Bengaluru shuttler Tanya Hemanth asked to wear headscarf in Iran event

ಬೆಂಗಳೂರು: ಕಟ್ಟರ್‌ ಮೂಲಭೂತವಾದಿ, ಮತಾಂಧ ದೇಶವೆನಿಸಿಕೊಂಡಿರುವ ಇರಾನ್‌ನಲ್ಲಿ ನಡೆದ ಬೆಳವಣಿಗೆಯೊಂದು ಭಾರೀ ಟೀಕೆಗೆ ಕಾರಣವಾಗಿದೆ. ಇರಾನ್‌ ರಾಜಧಾನಿ ಟೆಹ್ರಾನ್‌ ನಲ್ಲಿ ನಡೆದ ಮಹಿಳಾ ಸಿಂಗಲ್ಸ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ಗೆದ್ದಿದ್ದ ಬೆಂಗಳೂರಿನ ತಾನ್ಯಾ ಹೇಮಂತ್‌; ಹಿಜಾಬ್‌ ಧರಿಸಿಯೇ ಪ್ರಶಸ್ತಿ ಸ್ವೀಕರಿಸಬೇಕಾಯಿತು.

ಹೀಗೊಂದು ತಾಕೀತನ್ನು ಸಂಘಟಕರೇ ಪ್ರಶಸ್ತಿ ವಿತರಣೆಗೂ ಮುನ್ನ ಮಾಡಿದರು! ಹೀಗಾಗಿ ಫ‌ಜ್ರ್ ಅಂತಾರಾಷ್ಟ್ರೀಯ ಚಾಲೆಂಜ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಪ್ರಶಸ್ತಿ ಗೆದ್ದ ಆಟಗಾರ್ತಿಯರು ಹಿಜಾಬ್‌ ಧರಿಸಿಯೇ ಪದಕಗಳನ್ನು ಸ್ವೀಕರಿಸಿದರು.

ಬೆಂಗಳೂರಿನ ತಾನ್ಯಾ ಫೈನಲ್‌ ಪಂದ್ಯದಲ್ಲಿ ಇರಾನಿನ ತಸ್ನಿಮ್‌ ಮೀರ್‌ ರನ್ನು 21-7, 21-11 ಅಂಕಗಳಿಂದ ಏಕಪಕ್ಷೀಯವಾಗಿ ಸೋಲಿಸಿದ್ದರು. ಆದರೆ ಪ್ರಶಸ್ತಿ ಸ್ವೀಕರಿಸುವಾಗ ಹಿಜಾಬ್‌ ಧರಿಸಬೇಕೆಂದು ಸಂಘಟಕರು ಹೇಳಿದ್ದಾರೆ. ಆದರೆ ಕೂಟದ ವಸ್ತ್ರಸಂಹಿತೆಯಲ್ಲಿ ಇದರ ಉಲ್ಲೇಖವಿರಲಿಲ್ಲ. ಸಂಘಟಕರು ಮಾತ್ರ ಪ್ರಶಸ್ತಿ ಗೆದ್ದ ಆಟಗಾರ್ತಿಯರು ಪದಕ ಸ್ವೀಕರಿಸುವಾಗ ಹಿಜಾಬ್‌ ಧರಿಸುವುದು ಕಡ್ಡಾಯ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್

ವಿಶ್ವ ಬ್ಯಾಡ್ಮಿಂಟನ್‌ ಒಕ್ಕೂಟದಿಂದ ಮಾನ್ಯತೆ ಪಡೆದ ಯಾವುದೇ ಕೂಟಗಳಲ್ಲಿ ವಸ್ತ್ರಸಂಹಿತೆ ಒಂದೇ ರೀತಿಯಿರುತ್ತದೆ. ಇರಾನ್‌ನಲ್ಲಿ ಮಹಿಳೆಯರು ಹಿಜಾಬ್‌ ಧರಿಸಬೇಕಾಗಿದ್ದರೂ, ಕೂಟಗಳಲ್ಲೂ ಹೀಗೆ ಮಾಡಬೇಕಾಗುತ್ತದೆ ಎಂಬ ಮಾಹಿತಿಯಿರಲಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

ಮಹಿಳಾ ಪಂದ್ಯಗಳನ್ನು ನೋಡಲು ಗಂಡಸರಿಗೆ ಪ್ರವೇಶವಿಲ್ಲ: ವಿಚಿತ್ರವೆಂದರೆ ಮಹಿಳೆಯರು ಆಡುವ ಪಂದ್ಯಗಳನ್ನು ನೋಡಲು ಯಾವುದೇ ಪುರುಷರಿಗೆ ಪ್ರವೇಶವಿರಲಿಲ್ಲ. ಇನ್ನೂ ವಿಚಿತ್ರವೆಂದರೆ ಪುರುಷರೆಂಬ ಕಾರಣಕ್ಕೆ ಅಪ್ಪನನ್ನು, ತರಬೇತುದಾರರನ್ನು ಒಳಗೆ ಬಿಟ್ಟಿರಲಿಲ್ಲ! ಇಷ್ಟೆಲ್ಲದರ ಮಧ್ಯೆ ಪುರುಷ ಆಟಗಾರರೂ ಇರುವ ಮಿಶ್ರ ಡಬಲ್ಸ್‌ ಪಂದ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಬೆಳವಣಿಗೆ ವಿಶ್ವಾದ್ಯಂತ ಟೀಕೆಗೆ ಕಾರಣವಾಗಿದೆ.

ಟಾಪ್ ನ್ಯೂಸ್

ಯಾವುದೇ ಕ್ಷಣದಲ್ಲಾದರೂ ವೇಳಾಪಟ್ಟಿ ಘೋಷಣೆ; ಸನ್ನದ್ಧರಾಗಿರಲು ಸೂಚನೆ

ಯಾವುದೇ ಕ್ಷಣದಲ್ಲಾದರೂ ವೇಳಾಪಟ್ಟಿ ಘೋಷಣೆ; ಸನ್ನದ್ಧರಾಗಿರಲು ಸೂಚನೆ

ಐಪಿಎಸ್‌ ಅಧಿಕಾರಿ ರೂಪಾಗೆ ಕೋರ್ಟ್‌ ನೋಟಿಸ್‌

ಐಪಿಎಸ್‌ ಅಧಿಕಾರಿ ರೂಪಾಗೆ ಕೋರ್ಟ್‌ ನೋಟಿಸ್‌

ತೆರೆಗೆ ಮತ್ತೆ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕಮ್‌ಬ್ಯಾಕ್‌

ತೆರೆಗೆ ಮತ್ತೆ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕಮ್‌ಬ್ಯಾಕ್‌

ತಿರುವನಂತಪುರದ ರೈಲ್ವೇ ಯಾರ್ಡ್‌ ಕಾಮಗಾರಿ: ಕೆಲವು ರೈಲು ಸೇವೆ ವ್ಯತ್ಯಯ

ತಿರುವನಂತಪುರದ ರೈಲ್ವೇ ಯಾರ್ಡ್‌ ಕಾಮಗಾರಿ: ಕೆಲವು ರೈಲು ಸೇವೆ ವ್ಯತ್ಯಯ

ತೃತೀಯಲಿಂಗಿ ಗಗನಸಖಿ ಕೈಲೀ ಸ್ಕಾಟ್‌ ನಿಧನ!

ತೃತೀಯಲಿಂಗಿ ಗಗನಸಖಿ ಕೈಲೀ ಸ್ಕಾಟ್‌ ನಿಧನ!

MUMBAI WPL

ಫೈನಲ್‌ಗೆ ನೆಗೆದ ಮುಂಬೈ ಇಂಡಿಯನ್ಸ್‌: ಐಸಿ ವೋಂಗ್‌ ಹ್ಯಾಟ್ರಿಕ್‌

ರಾಜ್ಯವು ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ: ಸಿಎಂ ಶ್ಲಾಘನೆ

ರಾಜ್ಯವು ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ: ಸಿಎಂ ಶ್ಲಾಘನೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pv sindhu

ಸ್ವಿಸ್‌ ಬ್ಯಾಡ್ಮಿಂಟನ್‌: ಸಿಂಧು ಆಘಾತಕಾರಿ ನಿರ್ಗಮನ

MUMBAI WPL

ಫೈನಲ್‌ಗೆ ನೆಗೆದ ಮುಂಬೈ ಇಂಡಿಯನ್ಸ್‌: ಐಸಿ ವೋಂಗ್‌ ಹ್ಯಾಟ್ರಿಕ್‌

mousin khan

ಮೊಹ್ಸಿನ್‌ ಖಾನ್‌ ಐಪಿಎಲ್‌ಗೆ ಅನುಮಾನ

T20 World Cup-winning England team met British Prime Minister Rishi Sunak

ಟಿ20 ವಿಶ್ವಕಪ್ ವಿಜೇತ ತಂಡದೊಂದಿಗೆ ಕ್ರಿಕೆಟ್ ಆಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್; ವಿಡಿಯೋ

Lionel Messi Scores 800 Career Goals

ವೃತ್ತಿಜೀವನದ 800ನೇ ಗೋಲು ಗಳಿಸಿದ ಲಿಯೋನೆಲ್ ಮೆಸ್ಸಿ; ವಿಡಿಯೋ ನೋಡಿ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

ಯಾವುದೇ ಕ್ಷಣದಲ್ಲಾದರೂ ವೇಳಾಪಟ್ಟಿ ಘೋಷಣೆ; ಸನ್ನದ್ಧರಾಗಿರಲು ಸೂಚನೆ

ಯಾವುದೇ ಕ್ಷಣದಲ್ಲಾದರೂ ವೇಳಾಪಟ್ಟಿ ಘೋಷಣೆ; ಸನ್ನದ್ಧರಾಗಿರಲು ಸೂಚನೆ

ಐಪಿಎಸ್‌ ಅಧಿಕಾರಿ ರೂಪಾಗೆ ಕೋರ್ಟ್‌ ನೋಟಿಸ್‌

ಐಪಿಎಸ್‌ ಅಧಿಕಾರಿ ರೂಪಾಗೆ ಕೋರ್ಟ್‌ ನೋಟಿಸ್‌

pv sindhu

ಸ್ವಿಸ್‌ ಬ್ಯಾಡ್ಮಿಂಟನ್‌: ಸಿಂಧು ಆಘಾತಕಾರಿ ನಿರ್ಗಮನ

ತೆರೆಗೆ ಮತ್ತೆ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕಮ್‌ಬ್ಯಾಕ್‌

ತೆರೆಗೆ ಮತ್ತೆ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕಮ್‌ಬ್ಯಾಕ್‌

ತಿರುವನಂತಪುರದ ರೈಲ್ವೇ ಯಾರ್ಡ್‌ ಕಾಮಗಾರಿ: ಕೆಲವು ರೈಲು ಸೇವೆ ವ್ಯತ್ಯಯ

ತಿರುವನಂತಪುರದ ರೈಲ್ವೇ ಯಾರ್ಡ್‌ ಕಾಮಗಾರಿ: ಕೆಲವು ರೈಲು ಸೇವೆ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.