ಆಸೀಸ್ ಸರಣಿಗೆ ಇಶಾಂತ್, ಭುವನೇಶ್ವರ್ ಕುಮಾರ್ ಅನುಮಾನ!
Team Udayavani, Oct 24, 2020, 8:41 AM IST
ಹೊಸದಿಲ್ಲಿ: ವರ್ಷಾಂತ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಕ್ಕೆ ತೆರಳಿ ಪೂರ್ಣ ಪ್ರಮಾಣದ ಕ್ರಿಕೆಟ್ ಸರಣಿ ಆಡಲಿದ್ದು, 32 ಸದಸ್ಯರ ಜಂಬೋ ತಂಡ ಕೆಲವೇ ದಿನಗಳಲ್ಲಿ ಪ್ರಕಟಗೊಳ್ಳಲಿದೆ.
ಇದರಲ್ಲಿ ಗಾಯಾಳು ಪೇಸ್ ಬೌಲರ್ ಗಳಾದ ಇಶಾಂತ್ ಶರ್ಮ ಮತ್ತು ಭುವನೇಶ್ವರ್ ಕುಮಾರ್ ಸ್ಥಾನ ಪಡೆಯುವ ಸಾಧ್ಯತೆ ಇಲ್ಲ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಇವರಿಬ್ಬರೂ ಪ್ರಸಕ್ತ ಐಪಿಎಲ್ ವೇಳೆ ಗಾಯಾಳಾಗಿ ಕೂಟದಿಂದಲೇ ಹೊರಬಿದ್ದಿದ್ದಾರೆ. ಅನುಭವಿ ಇಶಾಂತ್ ಆಸೀಸ್ ಪ್ರವಾಸಕ್ಕೆ ಲಭಿಸಿದೇ ಹೋದರೆ ಭಾರತದ ಟೆಸ್ಟ್ ಹೋರಾಟಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾತ್ ಅವರು ಇಶಾಂತ್ ಆರೋಗ್ಯ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. 2018-19ರ ಐತಿಹಾಸಿಕ ಆಸ್ಟ್ರೇಲಿಯ ಪ್ರವಾಸದ ವೇಳೆ ಇಶಾಂತ್ ಶರ್ಮ 3 ಟೆಸ್ಟ್ ಪಂದ್ಯಗಳಿಂದ 11 ವಿಕೆಟ್ ಉರುಳಿಸಿ ಮಿಂಚಿದ್ದರು. ಅಕಸ್ಮಾತ್ ಇಶಾಂತ್ ಲಭಿಸದೇ ಹೋದರೆ ಸೈನಿ, ಠಾಕೂರ್, ಸಿರಾಜ್ ಅವರಂಥ ಯುವ ಸೀಮರ್ ಟೆಸ್ಟ್ ತಂಡವನ್ನು ಸೇರಿಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ:ಬೌಲ್ಟ್, ಬುಮ್ರಾ ಭಯಾನಕ ಬೌಲಿಂಗ್; ಚೆನ್ನೈ ಬೌಲ್ಡ್
ವೇಗಿ ಭುವನೇಶ್ವರ್ ಕುಮಾರ್ ಮಂಡಿರಜ್ಜು ಗಾಯದಿಂದ ಐಪಿಎಲ್ ನಿಂದ ಹೊರಬಿದ್ದಿದ್ದು, ಅವರು ಕೂಡಾ ಆಸೀಸ್ ಸರಣಿಗೆ ಆಯ್ಕೆಯಾಗುವುದು ಅನುಮಾನ ಎನ್ನಲಾಗಿದೆ.
ಭಾರತ ಏಕದಿನ ಸರಣಿಯೊಂದಿಗೆ ಆಸ್ಟ್ರೇಲಿಯ ಪ್ರವಾಸವನ್ನು ಆರಂಭಿಸಲಿದೆ. ಮೊದಲೆರಡು ಪಂದ್ಯಗಳನ್ನು ನ. 27 ಮತ್ತು 29ರಂದು “ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ಆಡಲಾಗುವುದು. ಕ್ಯಾನ್ಬೆರಾದಲ್ಲಿ ಅಂತಿಮ ಏಕದಿನ (ಡಿ. 1) ಮತ್ತು ಮೊದಲ ಟಿ20 ಪಂದ್ಯ (ಡಿ. 4) ನಡೆಯಲಿದೆ. ಬಳಿಕ ಎರಡೂ ತಂಡಗಳು ಸಿಡ್ನಿಗೆ ವಾಪಸಾಗಿ ಉಳಿದೆರಡು ಟಿ20 ಪಂದ್ಯಗಳಲ್ಲಿ ಪಾಲ್ಗೊಳ್ಳಲಿವೆ (ಡಿ. 6 ಮತ್ತು ಡಿ. 8).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್