
ಆಲ್ರೌಂಡರ್ ರವೀಂದ್ರ ಜಡೇಜ ಇಂದು ಕಣಕ್ಕೆ
Team Udayavani, Jan 23, 2023, 11:06 PM IST

ಚೆನ್ನೈ: ಪೂರ್ತಿ ದೈಹಿಕ ಕ್ಷಮತೆಯೊಂದಿಗೆ ಭಾರತ ತಂಡಕ್ಕೆ ಮರಳುವ ಹಾದಿಯಲ್ಲಿರುವ ಆಲ್ರೌಂಡರ್ ರವೀಂದ್ರ ಜಡೇಜ 4 ತಿಂಗಳ ಬ್ರೇಕ್ ಬಳಿಕ ಮಂಗಳವಾರ ಕ್ರಿಕೆಟ್ ಕಣಕ್ಕೆ ಇಳಿಯಲಿದ್ದಾರೆ.
ಭಾರತ ತಂಡಕ್ಕೆ ಮರಳುವವರು ಒಂದಾದರೂ ದೇಶಿ ಕ್ರಿಕೆಟ್ ಪಂದ್ಯ ವನ್ನು ಆಡಬೇಕೆನ್ನುವ ಬಿಸಿಸಿಐ ನಿಯಮದಂತೆ ಅವರು ರಣಜಿ ಟ್ರೋಫಿ ಪಂದ್ಯಾವಳಿಯ 7ನೇ ಸುತ್ತಿನ ಸ್ಪರ್ಧೆಯಲ್ಲಿ ಸೌರಾಷ್ಟ್ರವನ್ನು ಪ್ರತಿನಿಧಿ ಸಲಿದ್ದಾರೆ. ತಮಿಳುನಾಡು ವಿರುದ್ಧದ ಈ ಪಂದ್ಯ ಚೆನ್ನೈಯಲ್ಲಿ ನಡೆಯಲಿದೆ. ಇಲ್ಲಿ ಜಡೇಜ ಸೌರಾಷ್ಟ್ರ ತಂಡದ ನಾಯಕರಾಗಿರುವುದು ವಿಶೇಷ.
2022ರ ಸೆಪ್ಟಂಬರ್ನಿಂದ ರವೀಂದ್ರ ಜಡೇಜ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಯುಎಇಯಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಗಾಯಾಳಾಗಿದ್ದರು. ಇದರಿಂದ ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲೂ . ಅವರಿಗೆ ಆಡಲು ಸಾಧ್ಯ ವಾಗಿರಲಿಲ್ಲ. ಕಳೆದ 3 ವಾರಗಳಿಂದ ಬೆಂಗಳೂ ರಿನ ಎನ್ಸಿಎಯಲ್ಲಿ ಪುನ ಶ್ಚೇತನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಚೇತರಿಸಿಕೊಂಡಿದ್ದಾರೆ.
5 ವರ್ಷ ಬಳಿಕ ರಣಜಿ!
ಅಂದಹಾಗೆ ರವೀಂದ್ರ ಜಡೇಜ ರಣಜಿ ಟ್ರೋಫಿ ಪಂದ್ಯವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು 2018ರ ಬಳಿಕ ಇದೇ ಮೊದಲು. ಚೇತೇಶ್ವರ್ ಪೂಜಾರ ಮತ್ತು ಜೈದೇವ್ ಉನಾದ್ಕತ್ ಅವರಿಗೆ ವಿಶ್ರಾಂತಿ ನೀಡಿದ ಕಾರಣ ಇಲ್ಲಿ ಜಡೇಜ ಅವರಿಗೆ ಸೌರಾಷ್ಟ್ರ ತಂಡದ ನಾಯಕತ್ವ ಒಲಿದು ಬಂದಿದೆ. ಅವರು ಪ್ರಥಮ ದರ್ಜೆ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು ಕೂಡ ಇದೇ ಮೊದಲು ಎಂಬುದು ವಿಶೇಷ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ
ಹೊಸ ಸೇರ್ಪಡೆ

odisha ರೈಲು ಅಪಘಾತ; ಕಳಸದಿಂದ ತೆರಳಿದ್ದ 110 ಮಂದಿ ಸುರಕ್ಷಿತ

Odisha ಭೀಕರ ರೈಲು ಅವಘಡ; ಸಾವಿನ ಸಂಖ್ಯೆ 233ಕ್ಕೆ ಏರಿಕೆ; 900ಕ್ಕೂ ಹೆಚ್ಚು ಮಂದಿಗೆ ಗಾಯ

Milk : 8 ತಿಂಗಳಿಂದ ಸಿಗದ ಹಾಲಿನ ಪ್ರೋತ್ಸಾಹ ಧನ

Mangalore ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಆದಿತ್ಯ ವಿರುದ್ಧ ಮತ್ತೂಂದು ದೂರು

World Bicycle Day- ಸುಸ್ಥಿರ ಭವಿಷ್ಯಕ್ಕಾಗಿ ಸೈಕಲ್ ತುಳಿಯೋಣ