ಕೋಚ್ಗಳ ಜತೆ ರವಿಶಾಸ್ತ್ರಿ ಆನ್ಲೈನ್ ಚರ್ಚೆ
Team Udayavani, May 1, 2020, 10:23 AM IST
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ದಿಗ್ಬಂಧನದ ಸಮಯದಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಸೇರಿದಂತೆ ಎ ತಂಡ ಹಾಗೂ ಕಿರಿಯರ ತಂಡಗಳ ಕೋಚ್ ಜತೆ ಆನ್ ಲೈನ್ ಮೂಲಕ ಚರ್ಚೆ ನಡೆಸಿದರು.
ಈ ವೇಳೆ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಕೂಡ ಇದ್ದರು. ಪರಾಸ್ ಮಂಬ್ರೆ, ನರೇಂದ್ರ ಹಿರ್ವಾನಿ, ಅಭಯ್ ಶರ್ಮಾ ಮತ್ತು ಸಿತಾಂಶು ಕೋಟಕ್ ಕೂಡಾ ಭಾಗಿಯಾಗಿದ್ದರು.
ಭವಿಷ್ಯದ ಕ್ರಿಕೆಟ್ ಚಟುವಟಿಕೆಗಳ ಕುರಿತು ಕಳೆದ ವಾರ ನಡೆದ ಆನ್ಲೈನ್ ಮಾತುಕತೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ಎನ್ಸಿಎ ಮೂಲಗಳು ಹೇಳಿವೆ. ಎನ್ ಸಿಎ ಅಧ್ಯಕ್ಷ ಈ ಆನ್ ಪೈನ್ ಮೀಟಿಂಗ್ ನ ಹಿಂದಿನ ಪ್ರಮುಖ ರೂವಾರಿ ಎನ್ನಲಾಗಿದೆ.