IPL 2023: ಮಗನಿಗೆ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಆಪ್ತ ಸಲಹೆ


Team Udayavani, Apr 18, 2023, 6:55 AM IST

IPL 2023: ಮಗನಿಗೆ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಆಪ್ತ ಸಲಹೆ

ಮುಂಬಯಿ: ಬಹಳ ಸಮಯ ಕಾದ ಬಳಿಕ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮುಂಬೈ ಇಂಡಿಯನ್ಸ್‌ ಪರ ಐಪಿಎಲ್‌ ಪದಾರ್ಪಣೆ ಮಾಡಿದರು.

ಅರ್ಜುನ್‌ ಆಟವನ್ನು ಕಾಣಲು ಸಚಿನ್‌ಪರಿವಾರವೇ ವಾಂಖೇಡೆಯಲ್ಲಿ ನೆರೆದಿತ್ತು. ಈ ಸಂದರ್ಭದಲ್ಲಿ ಸಚಿನ್‌ ತೆಂಡುಲ್ಕರ್‌ ತಮ್ಮ ಮಗನಿಗೆ ಕೆಲವು ಆತ್ಮೀಯ ಸಲಹೆಗಳನ್ನು ನೀಡಿದರು. “ಅರ್ಜುನ್‌, ನೀನಿಂದು ಕ್ರಿಕೆಟ್‌ ಪಯಣದಲ್ಲಿ ಮತ್ತೂಂದು ಪ್ರಮುಖ ಹೆಜ್ಜೆ ಇಟ್ಟಿರುವೆ. ನಿನ್ನನ್ನು ತುಂಬಾ ಪ್ರೀತಿಸುವ ಮತ್ತು ಕ್ರಿಕೆಟ್‌ ಬಗ್ಗೆ ಅತ್ಯಂತ ಒಲವನ್ನು ಹೊಂದಿರುವ ನಿನ್ನ ತಂದೆಯ ಹಾಗೆ ನೀನು ಕೂಡ ಕ್ರಿಕೆಟ್‌ಗೆ ಯೋಗ್ಯವಾದ ಗೌರವ ನೀಡುವೆ, ಆಗ ಕ್ರಿಕೆಟ್‌ ಕೂಡ ಅದೇ ಪ್ರೀತಿ, ಗೌರವವನ್ನು ನಿನಗೆ ನೀಡುತ್ತದೆ’ ಎಂದು ಸಚಿನ್‌ ತೆಂಡುಲ್ಕರ್‌ ಟ್ವೀಟ್‌ ಮಾಡಿದ್ದಾರೆ.

“ನೀನು ಇಲ್ಲಿಯ ತನಕ ಬರಲು ಕಠಿನ ಪರಿಶ್ರಮಪಟ್ಟಿರುವೆ. ಇದನ್ನು ಮುಂದುವರಿಸುವ ನಂಬಿಕೆ ಇದೆ. ಇದು ಸುಂದರ ಪಯಣವೊಂದರ ಆರಂಭ. ಆಲ್‌ ದಿ ಬೆಸ್ಟ್‌’ ಎಂದು ಸಚಿನ್‌ ತಮ್ಮ ಮಗನಿಗೆ ಶುಭ ಹಾರೈಸಿದ್ದಾರೆ.

ತಂದೆ-ಮಗನ ಮೊದಲ ಜೋಡಿ
ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಪದಾರ್ಪಣೆಯೊಂದಿಗೆ ಇತಿಹಾಸವೊಂದು ನಿರ್ಮಾಣಗೊಂಡಿತು. ಐಪಿಎಲ್‌ನಲ್ಲಿ ತಂದೆ-ಮಗ ಆಡಿದ ಮೊದಲ ನಿದರ್ಶನ ಇದಾಗಿದೆ. ಸಚಿನ್‌ ತೆಂಡುಲ್ಕರ್‌ 2008ರ ಆರಂಭಿಕ ಪಂದ್ಯಾವಳಿಯಿಂದ 2013ರ ತನಕ 6 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಅರ್ಜುನ್‌ ಅವರನ್ನು 2021ರ ಹರಾಜಿನಲ್ಲಿ 20 ಲಕ್ಷ ರೂ. ಮೂಲ ಬೆಲೆಗೆ ಮುಂಬೈ ಖರೀದಿಸಿತ್ತು. ಆದರೆ ಐಪಿಎಲ್‌ ಪದಾರ್ಪಣೆಗೆ ಇಷ್ಟು ಕಾಲ ಕಾಯಬೇಕಾಯಿತು.

“ಇದೊಂದು ಅಮೋಘ ಕ್ಷಣ. 2008ರಿಂದ ನಾನು ಬೆಂಬಲಿಸುತ್ತ ಬಂದಿರುವ ತಂಡವನ್ನು ಇಂದು ಪ್ರತಿನಿಧಿಸುತ್ತಿದ್ದೇನೆ. ಭಾರತ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮ ಅವರಿಂದ ಕ್ಯಾಪ್‌ ಪಡೆದದ್ದು ಅತ್ಯಂತ ಖುಷಿಯ ಸಂಗತಿ’ ಎಂಬುದಾಗಿ ದೇಶಿ ಕ್ರಿಕೆಟ್‌ನಲ್ಲಿ ಗೋವಾ ತಂಡವನ್ನು ಪ್ರತಿನಿಧಿಸುವ ಅರ್ಜುನ್‌ ಹೇಳಿದರು.

ರವಿವಾರದ ಕೋಲ್ಕತಾ ಎದುರಿನ ಪಂದ್ಯದಲ್ಲಿ 23 ವರ್ಷದ ಎಡಗೈ ಬೌಲಿಂಗ್‌ ಆಲ್‌ರೌಂಡರ್‌ ಅರ್ಜುನ್‌ ತೆಂಡುಲ್ಕರ್‌ ಮುಂಬೈ ಪರ ಬೌಲಿಂಗ್‌ ಆರಂಭಿಸಿ 2 ಓವರ್‌ ಎಸೆದರು. 17 ರನ್‌ ನೀಡಿದರು. ಆದರೆ ಯಾವುದೇ ಯಶಸ್ಸು ಸಂಪಾದಿಸಲಿಲ್ಲ.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.