ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !


Team Udayavani, Jul 16, 2019, 5:44 AM IST

vivada

ಲಂಡನ್‌: ಐಸಿಸಿಯ ಆಶಯವೇನೋ ಉನ್ನತ ಮಟ್ಟ ದ್ದಾಗಿತ್ತು. ಈ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾ ವಳಿಯಲ್ಲಿ 10 ಬಲಿಷ್ಠ ತಂಡಗಳಷ್ಟೇ ಪಾಲ್ಗೊಳ್ಳಬೇಕು, ಎಲ್ಲರೂ ಎಲ್ಲರ ವಿರುದ್ಧ ಆಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು, ಪ್ರಬಲ ತಂಡವೇ ವಿಶ್ವಕಪ್‌ ಎತ್ತಬೇಕು ಎಂಬು ದಾಗಿತ್ತು. ಆದರೆ ಐಸಿಸಿಯ ಈ ಆಶಯಕ್ಕೆ ಕೊನೆಯಲ್ಲಿ ವಿವಾದ ವೊಂದು ಮೆತ್ತಿಕೊಂಡಿತು.

ಅನುಮಾನವೇ ಇಲ್ಲ, ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ನಡುವೆ ಯಾರೇ ಗೆದ್ದರೂ ಅಲ್ಲಿ ಇತಿಹಾಸ ನಿರ್ಮಾಣವಾಗುತ್ತಿತ್ತು. ಯಾರೇ ಕಪ್‌ ಎತ್ತಿದರೂ ಕ್ರಿಕೆಟ್‌ ಜಗತ್ತು ಸಂಭ್ರ ಮಿಸುತ್ತಿತ್ತು. ಇಂಗ್ಲೆಂಡ್‌ ಇಡೀ ಜಗತ್ತಿಗೆ ಕ್ರಿಕೆಟ್‌ ಕಲಿಸಿ ಗುರುವಿನ ಸ್ಥಾನ ದಲ್ಲಿದ್ದರೆ, ನ್ಯೂಜಿಲ್ಯಾಂಡ್‌ “ಜೀರೋ ಎನಿಮಿ’ಯನ್ನು ಹೊಂದಿರುವ ತಣ್ಣಗಿನ ತಂಡ. ಕೊನೆಗೂ ಇಂಗ್ಲೆಂಡ್‌ ವಿಶ್ವ ಚಾಂಪಿಯನ್‌ ಆಗಿ ಶಾಪ ವಿಮೋಚನೆ ಮಾಡಿಕೊಂಡಿತು. ನ್ಯೂಜಿ ಲ್ಯಾಂಡ್‌ ಸತತ ಎರಡೂ ಫೈನಲ್‌ಗ‌ಳಲ್ಲಿ ಎಡವಿ ಕಣ್ಣೀರಿಟ್ಟಿದ್ದು ಎಲ್ಲರಿಗೂ ಬೇಸರ ತರಿಸಿತು.

ಜಂಟಿ ಚಾಂಪಿಯನ್ಸ್‌ ಯಾಕಾಗಬಾರದು?
ವಿಶ್ವಕಪ್‌ನಲ್ಲಷ್ಟೇ ಏಕೆ, ಏಕದಿನ ಇತಿಹಾಸದಲ್ಲೇ ಚಾಂಪಿಯನ್‌ ತಂಡವೊಂದನ್ನು ಆಯ್ಕೆ ಮಾಡಲು “ಸೂಪರ್‌ ಓವರ್‌’ ಮೊರೆ ಹೋಗ ಬೇಕಾಯಿತು. ಇದು ಫೈನಲ್‌ ಹಣಾ ಹಣಿಯ ತೀವ್ರತೆಗೆ ಸಾಕ್ಷಿ.
“ಫೈನಲ್‌ ಅಂದರೆ ಇದಪ್ಪಾ…’ ಎಂದು ಎಲ್ಲರೂ ಪ್ರಶಂಸಿಸುವಂತಾಯಿತು. ಬಳಿಕ ಸೂಪರ್‌ ಓವರ್‌ ಕೂಡ ಟೈ ಆದಾಗ ಕ್ರಿಕೆಟ್‌ ಜಗತ್ತೇ ತುದಿಗಾಲಲ್ಲಿ ನಿಂತಿತು. ಆಗ ಅಳವಡಿಸಿದ್ದೇ “ಬೌಂಡರಿ ಕೌಂಟ್‌’ ನಿಯಮ. ಅಂದರೆ, ಫೈನಲ್‌ ಪಂದ್ಯದಲ್ಲಿ ಅತೀ ಹೆಚ್ಚು ಬೌಂಡರಿ ಬಾರಿಸಿದ ತಂಡಕ್ಕೆ ಕಿರೀಟ!

ಇದೆಂಥ ಹುಚ್ಚು ನಿಯಮ. ಬೌಂಡರಿ ಲೆಕ್ಕಾಚಾರವೇ ಏಕೆ, ವಿಕೆಟ್‌ ಉರುಳಿದ್ದನ್ನೇ ಮಾನದಂಡವಾಗಿ ಪರಿಗಣಿಸಬಹುದಿತ್ತಲ್ಲ? ಆಗ ನ್ಯೂಜಿಲ್ಯಾಂಡ್‌ ಚಾಂಪಿಯನ್‌ ಆಗುತಿತ್ತಲ್ಲವೇ? ಇದು ಎಲ್ಲರನ್ನೂ ಕಾಡುವ ಪ್ರಶ್ನೆ. ಇಲ್ಲವೇ “ಜಂಟಿ ಚಾಂಪಿಯನ್ಸ್‌’ ಎಂದು ಘೋಷಿಸಿದ್ದರೆ ವಿಶ್ವಕಪ್‌ಘನತೆ ಖಂಡಿತವಾಗಿಯೂ ಹೆಚ್ಚುತ್ತಿತ್ತು ಎಂಬ ವಾದವೂ ಕೇಳಿಬರುತ್ತಿದೆ.

ಆರಲ್ಲ, ಐದೇ ರನ್‌ ನೀಡಬೇಕಿತ್ತು
ಪಂದ್ಯ ಒಮ್ಮೆ ಆಚೆಗೆ, ಒಮ್ಮೆ ಈಚೆಗೆ ಸಾಗುತ್ತಿ ದ್ದಾಗ ಅಂಪಾಯರ್‌ ಕುಮಾರ ಧರ್ಮಸೇನ ಮಾಡಿದ ಎಡವಟ್ಟು ಇನ್ನೊಂದು ಚರ್ಚೆಗೆ ಕಾರಣವಾಗಿದೆ. ಪಂದ್ಯದ ಅಂತಿಮ ಓವರ್‌ನಲ್ಲಿ “ಓವರ್‌ ತ್ರೋ’ ಒಂದಕ್ಕೆ ನೀಡಲಾದ 6 ರನ್ನಿನಿಂದ ನ್ಯೂಜಿಲ್ಯಾಂಡಿನ ಅವಕಾಶ ತಪ್ಪಿತು ಎಂಬುದೇ ಮತ್ತೂಂದು ವಿವಾದದ ಮೂಲ. ಐಸಿಸಿ ನಿಯಮ 19.8ರಂತೆ, ಎರಡನೇ ರನ್ನಿಗಾಗಿ ಸ್ಟೋಕ್ಸ್‌ ಮತ್ತು ರಶೀದ್‌ ಓಡಿದ್ದನ್ನು ಪರಿಗಣಿಸುವಂತಿಲ್ಲ. ಗಪ್ಟಿಲ್‌ ಚೆಂಡನ್ನು ಎಸೆಯುವ ವೇಳೆ ಆಟಗಾರರಿಬ್ಬರೂ ಎರಡನೇ ರನ್ನಿಗಾಗಿ ಓಟ ಆರಂಭಿಸಿದ್ದರೇ ಹೊರತು ಪರಸ್ಪರ ದಾಟಿರಲಿಲ್ಲ. ಹೀಗಾಗಿ, ಇದಕ್ಕೆ ಒಂದು ರನ್ನಷ್ಟೇ ನೀಡಬೇಕಿತ್ತು ಎನ್ನುತ್ತದೆ ನಿಯಮ. ಆಗ ಇಂಗ್ಲೆಂಡಿಗೆ 4 ಓವರ್‌ ತ್ರೋ ಸಹಿತ 5 ರನ್‌ ಮಾತ್ರ ಲಭಿಸುತ್ತಿತ್ತು. ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು.

ಶತಮಾನದ ಫೈನಲ್‌
ಇಂಗ್ಲೆಂಡಿನ ಬಲಿಷ್ಠ ಬ್ಯಾಟಿಂಗ್‌ ಸರದಿಗೆ ಹೋಲಿಸಿದಾಗ ಈ 240 ಚಿಲ್ಲರೆ ರನ್‌ ಯಾವ ಮೂಲೆಗೂ ಅಲ್ಲ. ಆದರೂ ತನ್ನ ಅಮೋಘ ಬೌಲಿಂಗ್‌, ಅದ್ಭುತ ಫೀಲ್ಡಿಂಗ್‌ ಹಾಗೂ ಜಾಣ್ಮೆಯ ನಾಯಕತ್ವದಿಂದ ನ್ಯೂಜಿಲ್ಯಾಂಡ್‌ ತಿರುಗೇಟು ನೀಡಿದ ಪರಿ ಪ್ರಶಂಸನೀಯ. ಕ್ರೀಸ್‌ ಆಕ್ರಮಿಸಿ ಕೊಂಡು ಇಂಗ್ಲೆಂಡಿನ ಹೋರಾಟ ಜಾರಿಯಲ್ಲಿರಿಸಿದ ಬೆನ್‌ ಸ್ಟೋಕ್ಸ್‌ ಆಟಕ್ಕೆ ಸಲಾಂ ಹೇಳಲೇಬೇಕು. ಈ ಕಾರಣ  ಕ್ಕಾಗಿ ಫೈನಲ್‌ ಪರಾಕ್ರಮ ನಿಜಕ್ಕೂ ಅಸಾಮಾನ್ಯ. ಈ ಕಾರಣಕ್ಕಾಗಿ ಇದು “ಶತಮಾನದ ಫೈನಲ್‌’ ಎಂದೇ ಪರಿಗಣಿತವಾಯಿತು.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.