Cricket World Cup: ಗೆಲುವಿನ ಅನಿವಾರ್ಯತೆಯಲ್ಲಿ ಇಂಗ್ಲೆಂಡ್‌, ಶ್ರೀಲಂಕಾ


Team Udayavani, Oct 26, 2023, 1:12 PM IST

Cricket World Cup: ಗೆಲುವಿನ ಅನಿವಾರ್ಯತೆಯಲ್ಲಿ ಇಂಗ್ಲೆಂಡ್‌, ಶ್ರೀಲಂಕಾ

ಬೆಂಗಳೂರು: ಹದಿಮೂರನೇ ವಿಶ್ವಕಪ್ ನಲ್ಲಿ ಅತ್ಯಂತ ಸಂಕಷ್ಟದಲ್ಲಿರುವ ತಂಡಗಳೆಂದರೆ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಮತ್ತು ಮಾಜಿ ಚಾಂಪಿಯನ್‌ ಶ್ರೀಲಂಕಾ. ಆಡಿದ 4 ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದಿರುವ ಈ ತಂಡಗಳೆರಡು ಅಂಕಪಟ್ಟಿಯಲ್ಲಿ ತೀರಾ ಕೆಳಮಟ್ಟದಲ್ಲಿವೆ. ಇಲ್ಲಿಂದ ಮೇಲೆದ್ದು ಬರಲು ಗುರುವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೋರಾಟಕ್ಕೆ ಇಳಿಯಲಿವೆ. ಸೋತವರು ಭರವಸೆ ಕಳೆದುಕೊಳ್ಳಬೇಕಾದುದು ಅನಿವಾರ್ಯ.

ಶ್ರೀಲಂಕಾ 8ನೇ ಸ್ಥಾನದಲ್ಲಿದ್ದರೆ (-1.048), ಇಂಗ್ಲೆಂಡ್‌ 9ನೇ ಸ್ಥಾನಕ್ಕೆ ಜಾರಿದೆ (-1.249). ಅಂದರೆ ಬಾಂಗ್ಲಾದೇಶಕ್ಕಿಂತ ಸ್ವಲ್ಪ ಮೇಲೆ. ಆದರೆ ಗುರುವಾರ ಒಂದು ತಂಡಕ್ಕಂತೂ ತುಸು ಮೇಲೇರುವ ಅವಕಾಶ ಪ್ರಾಪ್ತವಾಗಲಿದೆ. ಇಷ್ಟೇ ಸಾಲದು, ಉಳಿದ ಪಂದ್ಯಗಳನ್ನೂ ದೊಡ್ಡ ಅಂತರದಿಂದ ಗೆಲ್ಲಬೇಕಾದ ಅಗತ್ಯವಿದೆ. ಹಾಗೆಯೇ ಬೇರೆ ತಂಡಗಳ ಫ‌ಲಿತಾಂಶಗಳೂ ನಿರ್ಣಾಯಕ.

ಆದರೆ ಈ ಬಾರಿ ಗೆದ್ದ ತಂಡಗಳೇ ಗೆಲ್ಲುತ್ತಿರುವುದರಿಂದ ನಾಲ್ಕರಾಚೆ ಸ್ಥಾನ ಪಡೆದಿರುವ ಎಲ್ಲ ತಂಡಗಳ ಹಾದಿಯೂ ದುರ್ಗಮವಾಗಿದೆ. ಈಗಿನ ಸಾಧ್ಯತೆಯಂತೆ ಭಾರತ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ತಂಡಗಳ ಸೆಮಿಫೈನಲ್‌ ಪ್ರವೇಶ ಬಹುತೇಕ ಖಚಿತ. ಆಸ್ಟ್ರೇಲಿಯ 4ನೇ ಸ್ಥಾನಿಯಾದೀತು.

ಕೊನೆಯಲ್ಲಿ ಈ ಅಗ್ರ 4 ತಂಡಗಳ ಸ್ಥಾನ ಸ್ವಲ್ಪ ಆಚೀಚೆ ಆಗಬಹುದು ಅಥವಾ 4ನೇ ಸ್ಥಾನ ಬೇರೊಂದು ತಂಡದ ಪಾಲಾಗಲೂಬಹುದು. ಇದಕ್ಕಾಗಿ ಉಳಿದವರು ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಇವುಗಳಲ್ಲಿ ಇಂಗ್ಲೆಂಡ್‌, ಶ್ರೀಲಂಕಾ ಕೂಡ ಸೇರಿವೆ.

ಏಕೈಕ ಗೆಲುವು: ನ್ಯೂಜಿಲೆಂಡ್‌ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲು ಈಗಲೂ ಇಂಗ್ಲೆಂಡನ್ನು ಕಾಡುತ್ತಿರುವುದು ಸುಳ್ಳಲ್ಲ. ಆಂಗ್ಲರ ಪಡೆ ಸೋಲಿಸಿದ್ದು ಬಾಂಗ್ಲಾದೇಶವನ್ನು ಮಾತ್ರ. ಬಳಿಕ ಅಫ್ಘಾನಿಸ್ತಾನ ವಿರುದ್ಧ ಆಘಾತಕಾರಿಯಾಗಿ ಸೋತು ತೀವ್ರ ಮುಖಭಂಗ ಅನುಭವಿಸಿತು.

ದಕ್ಷಿಣ ಆಫ್ರಿಕಾ ವಿರುದ್ಧ 229 ರನ್ನುಗಳ ಭಾರೀ ಅಂತರದಿಂದ ಮುಗ್ಗರಿಸಿತು. ಈ ಸತತ ಸೋಲುಗಳಿಂದ ಹೊರಬರುವುದು ಸುಲಭವಲ್ಲ. ಇಂಗ್ಲೆಂಡ್‌ ಈ ಕೂಟದಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡವೆಂದು ಭಾವಿಸಲಾಗಿತ್ತು. ಆದರೆ ಇದೀಗ ಬರೀ ಕಾಗದದಲ್ಲಿ ಎಂಬುದು ಸಾಬೀತಾಗಿದೆ. ಬೆನ್‌ ಸ್ಟೋಕ್ಸ್‌ ಬಂದರೂ ಆಂಗ್ಲರ ಸ್ಥಿತಿ ಸುಧಾರಿಸದಿರುವುದು ವಿಪರ್ಯಾಸ. ಬೌಲಿಂಗ್‌ ಕೂಡ ಹಳಿ ತಪ್ಪಿದೆ. ಇಂಗ್ಲೆಂಡ್‌ ಮತ್ತೂಂದು ಜಯ ಸಾಧಿಸಬೇಕಾದರೆ ಬಾಂಗ್ಲಾದೇಶ ವಿರುದ್ಧ ತೋರ್ಪಡಿಸಿದ ಆಟವನ್ನು ಪುನರಾವರ್ತಿಸಬೇಕು. ಧರ್ಮಶಾಲಾದ ಈ ಪಂದ್ಯದಲ್ಲಿ ಇಂಗ್ಲೆಂಡ್‌ 9ಕ್ಕೆ 364 ರನ್‌ ರಾಶಿ ಹಾಕಿತ್ತು.

ಲಂಕೆಗೆ ಬೌಲಿಂಗ್‌ ಸಮಸ್ಯೆ: ಶ್ರೀಲಂಕಾದ ಸಮಸ್ಯೆ ಎಂದರೆ ಬೌಲಿಂಗ್‌ ವಿಭಾಗದ್ದು. ಅದು ದಕ್ಷಿಣ ಆಫ್ರಿಕಾಕ್ಕೆ 428 ರನ್‌, ಪಾಕಿಸ್ತಾನಕ್ಕೆ 345 ರನ್‌ ಹಾಗೂ ಆಸ್ಟ್ರೇಲಿಯಕ್ಕೆ 35.2 ಓವರ್‌ಗಳಲ್ಲಿ 215 ರನ್‌ ನೀಡಿ ಏಟು ತಿಂದಿತ್ತು. ನೆದರ್ಲೆಂಡ್ಸ್‌ ತಂಡವನ್ನು 6ಕ್ಕೆ 91 ರನ್ನಿಗೆ ನಿಯಂತ್ರಿಸಿತಾದರೂ ಬಳಿಕ ಡಚ್ಚರ ಮೊತ್ತ 262ಕ್ಕೆ ಏರಿದ್ದನ್ನು ಮರೆಯುವಂತಿಲ್ಲ. ಲಂಕೆಯ ಬ್ಯಾಟಿಂಗ್‌ ಪರಾಗಿಲ್ಲ ಎನ್ನಬಹುದು. ಪಾಥುಮ್‌ ನಿಸ್ಸಂಕ, ಚರಿತ ಅಸಲಂಕ, ಸದೀರ ಸಮರವಿಕ್ರಮ, ಕುಸಲ್‌ ಮೆಂಡಿಸ್‌ ಉತ್ತಮ ಫಾರ್ಮ್ನಲ್ಲಿದ್ದಾರೆ. ಕಳೆದ ಸಲ ಇಂಗ್ಲೆಂಡ್‌ ಚಾಂಪಿಯನ್‌ ಆಗಿತ್ತಾದರೂ ಲೀಗ್‌ ಹಂತದಲ್ಲಿ ಲಂಕೆ 20 ರನ್ನುಗಳ ಜಯ ಸಾಧಿಸಿದ್ದನ್ನು ಉಲ್ಲೇಖೀಸದಿರುವಂತಿಲ್ಲ. ಹಾಗೆಯೇ ಕಳೆದ 4 ವಿಶ್ವಕಪ್‌ ಪಂದ್ಯಗಳಲ್ಲಿ ಶ್ರೀಲಂಕಾ ಇಂಗ್ಲೆಂಡನ್ನು ಸೋಲಿಸುತ್ತ ಬಂದಿದೆ. ಇಂಗ್ಲೆಂಡ್‌ ಕೊನೆಯ ಸಲ ವಿಶ್ವಕಪ್‌ನಲ್ಲಿ ಲಂಕೆಯನ್ನು ಮಣಿಸಿದ್ದು 1999ರಷ್ಟು ಹಿಂದೆ!

ರನ್‌ ಪ್ರವಾಹ ಸಾಧ್ಯತೆ: ಇಂಗ್ಲೆಂಡ್‌-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ರನ್‌ ಪ್ರವಾಹ ಹರಿದು ಬರುವ ಎಲ್ಲ ಸಾಧ್ಯತೆ ಇದೆ. ಕಾರಣ, ಬೆಂಗಳೂರಿನ ಪಿಚ್‌ ಬ್ಯಾಟಿಂಗ್‌ ಸ್ನೇಹಿ ಆಗಿರುವುದು. ಆಸ್ಟ್ರೇಲಿಯ-ಪಾಕಿಸ್ತಾನ ನಡುವೆ ಇಲ್ಲಿ ನಡೆದ ಪಂದ್ಯದಲ್ಲಿ 672 ರನ್‌ ಹರಿದು ಬಂದಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡಕ್ಕೆ ಲಾಭ ಹೆಚ್ಚು ಎನ್ನಲಡ್ಡಿಯಿಲ್ಲ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.