ದಬಾಂಗ್‌ ಡೆಲ್ಲಿಗೆ ಒಂದಂಕದ ಗೆಲುವು


Team Udayavani, Jul 26, 2019, 5:39 AM IST

PRO

ಹೈದರಾಬಾದ್‌: ಗುರುವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ವಿರುದ್ಧ ದಬಾಂಗ್‌ ಡೆಲ್ಲಿ 30-29 ಅಂತರದ ರೋಚಕ ಗೆಲುವು ದಾಖಲಿಸಿತು.

ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಕೊನೆಯ ತನಕ ಅತ್ಯಂತ ಕುತೂಹಲಕಾರಿಯಾಗಿ ಸಾಗಿತು. ಅಂತ್ಯದಲ್ಲಿ ತಮಿಳ್‌ ತಲೈವಾಸ್‌ ತಂಡಕ್ಕೆ ನೀರು ಕುಡಿಸಿದ ದಬಾಂಗ್‌ ಡೆಲ್ಲಿ ಕೇವಲ ಒಂದು ಅಂಕದ ಅಂತರದಿಂದ ರೋಚಕ ಜಯ ಸಾಧಿಸಿ ಬೀಗಿತು. ಮೊದಲ ಪಂದ್ಯದಲ್ಲೂ ದಬಾಂಗ್‌ ಡೆಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ ವಿರುದ್ಧ ಇದೇ ರೀತಿಯಲ್ಲಿ (34-33) ಜಯಿಸಿದ್ದನ್ನು ಸ್ಮರಿಸಬಹುದು. ಇದು ಕೂಟದಲ್ಲಿ ದಬಾಂಗ್‌ ಡೆಲ್ಲಿ ದಾಖಲಿಸಿದ ಸತತ ಎರಡನೇ ಗೆಲುವು. ಕೊನೆಯ 3 ನಿಮಿಷಗಳಲ್ಲಿ ಪಂದ್ಯದ ಚಿತ್ರಣವೇ ಬದಲಾದದ್ದು ವಿಶೇಷ.

ತಮಿಳ್‌ ತಲೈವಾಸ್‌ ವೀರೋಚಿತ ಹೋರಾಟ ಪ್ರದರ್ಶಿಸಿದರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ತಲೈವಾಸ್‌ ತನ್ನ ಲೀಗ್‌ನ ಮೊದಲ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ ತಂಡವನ್ನು 39-26 ಅಂತರದಿಂದ ಸೋಲಿಸಿ ಶುಭಾರಂಭ ಮಾಡಿತ್ತು. ತಲೈವಾಸ್‌ಗೆ ಇದು ಮೊದಲ ಸೋಲು.

ಪಂದ್ಯ ಗೆಲ್ಲಿಸಿದ ನವೀನ್‌
ದಬಾಂಗ್‌ ಡೆಲ್ಲಿ -ತಮಿಳ್‌ ತಲೈವಾಸ್‌ ನಡುವಿನ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಮೊದಲ ಅವಧಿಯಲ್ಲಿ ತಲೈವಾಸ್‌ 18-11ರ ಮುನ್ನಡೆ ಪಡೆದಿತ್ತು. ಆದರೆ ಎರಡನೇ ಅವಧಿಯಲ್ಲಿ ಡೆಲ್ಲಿ ಮಿಂಚಿನ ಆಟಪ್ರದರ್ಶಿಸಿತು. ಕೊನೆಯ ನಿಮಿಷದಲ್ಲಿ ಅಂಕವನ್ನು 29-29ಕ್ಕೆ ತಂದು ಸಮ ಮಾಡಿಕೊಂಡಿತ್ತು.

ಆದರೆ ನವೀನ್‌ ಕುಮಾರ್‌ ಅವರ ಕೊನೆಯ ಡು ಆರ್‌ ಡೈ ರೈಡಿಂಗ್‌ ವೇಳೆ ತಲೈವಾಸ್‌ ಆಟಗಾರ ಮಂಜೀತ್‌ ಚಿಲ್ಲರ್‌ ಸೆಲ್ಫ್ ಔಟ್‌ ಆದ ಕಾರಣ ಡೆಲ್ಲಿಗೆ ಒಂದಂಕ ಸಿಕ್ಕಿತು. ಇದು ಡೆಲ್ಲಿ ಗೆಲುವಿಗೆ ಕಾರಣವಾಯಿತು. ನವೀನ್‌ ರೈಡಿಂಗ್‌ನಲ್ಲಿ 7, ಟ್ಯಾಕಲ್‌ನಿಂದ ಒಂದು, ಒಟ್ಟು 8 ಅಂಕ ತಂದುಕೊಡುವ ಮೂಲಕ ಯಶಸ್ವಿ ರೈಡರ್‌ ಎನಿಸಿಕೊಂಡರು.

ದಿಗ್ಗಜರಿದ್ದರೂ ಸೋತ ತಲೈವಾಸ್‌
ತಮಿಳ್‌ ತಲೈವಾಸ್‌ ತಂಡದಲ್ಲಿ ರಾಹುಲ್‌ ಚೌಧರಿ, ಅಜಯ್‌ ಠಾಕೂರ್‌ ಹಾಗೂ ಮಂಜಿತ್‌ ಚಿಲ್ಲರ್‌ ಅವರಂತಹ ಖ್ಯಾತನಾಮರಿದ್ದರೂ ಗೆಲುವು ಸಿಗಲಿಲ್ಲ. ರಾಹುಲ್‌ ಚೌಧರಿ ಒಟ್ಟು 7 ಅಂಕಕ್ಕೆ ಸೀಮಿತರಾದರು. 13 ಸಲ ರೈಡ್‌ ಮಾಡಿದ ಅವರು 6 ಸಲ ಬರಿಗೈನಿಂದಲೇ ವಾಪಸ್‌ ಆಗಿದ್ದರು.

ಅಜಯ್‌ ಠಾಕೂರ್‌ 16 ಸಲ ರೈಡಿಂಗ್‌ ಮಾಡಿ ಗಳಿಸಿದ್ದು ಕೇವಲ 5 ಅಂಕ ಮಾತ್ರ. ಮಂಜಿತ್‌ ಚಿಲ್ಲರ್‌ 5 ಅಂಕವನ್ನು ಟ್ಯಾಕಲ್‌ನಿಂದ ಗಳಿಸಿದರು. ಆದರೆ ಆಲ್‌ರೌಂಡರ್‌ ಆಗಿರುವ ಅವರು ಸಂಪೂರ್ಣವಾಗಿ ರೈಡಿಂಗ್‌ನಲ್ಲಿ ವಿಫ‌ಲರಾದರು. ಉಳಿದಂತೆ ಅಜಿತ್‌ (2 ಅಂಕ), ಮೋಹಿತ್‌ ಚಿಲ್ಲರ್‌ (2 ಅಂಕ) ಹಾಗೂ ರಾಣ್‌ ಸಿಂಗ್‌ (1 ಅಂಕ) ಅವರಿಂದ ಪವಾಡ ಸಾಧ್ಯವಾಗಲಿಲ್ಲ.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.