ಏಕದಿನ ಕ್ರಿಕೆಟ್ ಗೆ 50: ಬೆರಗುಗೊಳಿಸಿದ ವಿವಾದಗಳ ನಂಟು!


Team Udayavani, Jan 5, 2021, 3:43 PM IST

ಏಕದಿನ ಕ್ರಿಕೆಟ್ ಗೆ 50: ಬೆರಗುಗೊಳಿಸಿದ ವಿವಾದಗಳ ನಂಟು!

ಏಕದಿನ ಕ್ರಿಕೆಟ್ ಗೆ 50 ವರ್ಷ ತುಂಬಿದೆ. ಈ ಸಮಯದಲ್ಲಿ ಹಲವಾರು ಶ್ರೇಷ್ಠ ಪಂದ್ಯಗಳು ನಡೆದಿವೆ. ಅವುಗಳ ನಡುವೆ ಹಲವು ವಿವಾದಗಳೂ ನಡೆದಿದೆ. ಅವುಗಳು ಕುರಿತು ಒಂದು ನೋಟ.

* ಪಂದ್ಯವನ್ನೇ ಪಾಕಿಸ್ಥಾನಕ್ಕೆ ಬಿಟ್ಟುಕೊಟ್ಟ ಬೇಡಿ!

1978-79ರ ಪಾಕ್‌ ಪ್ರವಾಸದ ಸರಣಿ ನಿರ್ಣಾಯಕ ಸಾಹಿವಾಲ್‌ ಪಂದ್ಯ. ಭಾರತಕ್ಕೆ 40 ಓವರ್‌ಗಳಲ್ಲಿ 206 ರನ್‌ ಟಾರ್ಗೆಟ್‌. 37 ಓವರ್‌ಗಳಲ್ಲಿ ಎರಡಕ್ಕೆ 183 ರನ್‌ ಮಾಡಿದ್ದ ಭಾರತ ಗೆಲುವಿನ ಹಾದಿಯಲ್ಲಿತ್ತು. ಅದು ಸರ್ಫರಾಜ್‌ ನವಾಜ್‌ ಓವರ್‌. ಎಸೆತವೊಂದು ಬ್ಯಾಟ್ಸ್‌ಮನ್‌ ತಲೆಯಿಂದ ಹಾದು ಹೋಯಿತು. ಅಂಪಾಯರ್‌ ಮಿಸುಕಾಡಲಿಲ್ಲ. ನವಾಜ್‌ ಅವರಿಂದ ಮತ್ತೆ ಇಂಥದೇ ಎಸೆತಗಳು ಚಿಮ್ಮಿದವು. ಅಂಪಾಯರ್‌ ಮತ್ತೆ ತಟಸ್ಥ. ನಾಯಕ ಬೇಡಿ ಕೋಪ ತಾರಕಕ್ಕೇರಿತು. ನಾವು ಆಡುವುದಿಲ್ಲ, ಇದು ನಿಮಗೇ ಎಂದು ಪಂದ್ಯವನ್ನು ಪಾಕಿಸ್ಥಾನಕ್ಕೆ ಬಿಟ್ಟುಕೊಟ್ಟರು!

* ಲಂಕೆಯ ಗೆಲುವು ಸಾರಿದ ರೆಫ್ರಿ ಕ್ಲೈವ್ ಲಾಯ್ಡ್

1996ರ ಭಾರತ-ಶ್ರೀಲಂಕಾ ನಡುವಿನ ವಿಶ್ವಕಪ್‌ ಸೆಮಿಫೈನಲ್‌. ಟಾರ್ಗೆಟ್‌ 252 ರನ್‌. ಒಂದೇ ವಿಕೆಟಿಗೆ 98ರಲ್ಲಿದ್ದ ಭಾರತ 22 ರನ್‌ ಅಂತರದಲ್ಲಿ 7 ವಿಕೆಟ್‌ ಉರುಳಿಸಿಕೊಂಡು ಸಂಕಟಕ್ಕೆ ಸಿಲುಕಿತು. ಈಡನ್‌ ಗಾರ್ಡನ್ಸ್‌ನಲ್ಲಿ ವೀಕ್ಷಕರ ದಾಂಧಲೆ ಮೊದಲ್ಗೊಂಡಿತು. ಒಂದು ಸ್ಟಾಂಡ್‌ಗೆ ಬೆಂಕಿ ಬಿತ್ತು. ಕೂಡಲೇ ವೀಕ್ಷಕರನ್ನು ಹೊರಗೆ ಕಳುಹಿಸಲಾಯಿತು. ಆದರೆ ರೆಫ್ರಿ ಕ್ಲೈವ್‌ ಲಾಯ್ಡ 1983ರ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಳ್ಳುವುದನ್ನೇ ಕಾಯುತ್ತಿದ್ದರು. ಪಂದ್ಯವನ್ನು ರದ್ದುಗೊಳಿಸಿ, ಲಂಕೆಯನ್ನು ವಿಜಯಿ ಎಂದು ಘೋಷಿಸಿದರು. ವಿನೋದ್‌ ಕಾಂಬ್ಳಿ ಕ್ರೀಸಿನಲ್ಲಿ ಅಳುತ್ತ ನಿಂತುಬಿಟ್ಟರು!

ಇದನ್ನೂ ಓದಿ:ಏಕದಿನ ಕ್ರಿಕೆಟ್ ಗೆ 50: ವಿಶ್ವಕ್ರಿಕೆಟ್ ಗೆ ರಂಗು ಹಚ್ಚಿದ ಐದು ರೋಚಕ ಪಂದ್ಯಗಳು!

* ಒಂದೇ ಎಸೆತಕ್ಕೆ 22 ರನ್‌ ಹೊಡೆಯಿರಿ…!

1992ರ ವಿಶ್ವಕಪ್‌ ಸೆಮಿಫೈನಲ್‌. ಮೊದಲ ಸಲ ವರ್ಲ್ಡ್ ಕಪ್ ಆಡಲಿಳಿದ ದಕ್ಷಿಣ ಆಫ್ರಿಕಾ ಅಮೋಘ ಪ್ರದರ್ಶನ ನೀಡಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿತ್ತು. ಸಿಡ್ನಿಯಲ್ಲಿ ಕೆಪ್ಲರ್‌ ವೆಸಲ್ಸ್‌ ಬಳಗಕ್ಕೆ ಇಂಗ್ಲೆಂಡ್‌ ಎದುರಾಳಿ. 13 ಎಸೆತಗಳಲ್ಲಿ 22 ರನ್‌ ಹೊಡೆದರೆ ದಕ್ಷಿಣ ಆಫ್ರಿಕಾ ವಿನ್‌. ಕೈಯಲ್ಲಿನ್ನೂ 4 ವಿಕೆಟ್‌ ಇತ್ತು. ಆಗ ಮಳೆ ಸುರಿಯಿತು. ಮತ್ತೆ ಆಟ ಆರಂಭವಾದಾಗ ಹರಿಣಗಳಿಗೆ ಮರ್ಮಾಘಾತ. ಒಂದೇ ಎಸೆತದಲ್ಲಿ 22 ರನ್‌ ಮಾಡಬೇಕಾದ ಪರಿಷ್ಕೃತ ಟಾರ್ಗೆಟ್‌. ಡಕ್‌ವರ್ತ್‌-ಲೂಯಿಸ್‌ ಎಂಬ ನೂತನ ಮಳೆ ನಿಯಮದ ಲೆಕ್ಕಾಚಾರ. ಕ್ರಿಕೆಟ್‌ ಜಗತ್ತಿಗೇ ಶಾಕ್‌. ದಕ್ಷಿಣ ಆಫ್ರಿಕಾ ಔಟ್‌!

* ಬೌಂಡರಿ ಲೆಕ್ಕಾಚಾರದಲ್ಲಿ ಇಂಗ್ಲೆಂಡಿಗೆ ವಿಶ್ವಕಪ್‌!

2019ರ ವಿಶ್ವಕಪ್‌ ಫೈನಲ್‌. ಇಂಗ್ಲೆಂಡ್‌-ನ್ಯೂಜಿಲ್ಯಾಂಡ್‌ ಜಿದ್ದಾಜಿದ್ದಿ ಫೈಟ್‌. ಎರಡೂ ತಂಡಗಳಿಂದ 241 ರನ್‌. ಪಂದ್ಯ ಟೈ. ಸೂಪರ್‌ ಓವರ್‌ ಕೂಡ ಟೈ. ಅತ್ಯಧಿಕ ಬೌಂಡರಿ ಹೊಡೆದ ಇಂಗ್ಲೆಂಡ್‌ ಚಾಂಪಿಯನ್‌! ಐಸಿಸಿಯ ಇಂಥದೊಂದು ಎಡವಟ್ಟು ಹಾಗೂ ಅರ್ಥವಿಲ್ಲದ ನಿಯಮಕ್ಕೆ ಎಲ್ಲರಿಂದಲೂ ಶಾಪ ಬಿತ್ತು.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.