
ಫಿಫಾ ವಿಶ್ವಕಪ್: ಸೆರ್ಬಿಯದೆದುರು ಸ್ವಿಸ್ಗೆ ರೋಚಕ ಜಯ
Team Udayavani, Dec 3, 2022, 10:38 PM IST

ರಾಸ್ ಅಬು ಅಬೌದ್: ದಿಟ್ಟ ಹೋರಾಟ ನೀಡಿದ ಸೆರ್ಬಿಯವನ್ನು 3-2 ಗೋಲುಗಳಿಂದ ಪರಾಭವಗೊಳಿಸಿದ ಸ್ವಿಜರ್ಲೆಂಡ್ ಫಿಫಾ ವಿಶ್ವಕಪ್ ನಾಕೌಟ್ಗೆ ಲಗ್ಗೆ ಹಾಕಿದೆ. ಹಾವು ಏಣಿ ಆಟದಂತೆ ಸಾಗಿದ ಈ ಪಂದ್ಯ 5 ಗೋಲುಗಳಿಗೆ ಸಾಕ್ಷಿಯಾಯಿತು. ಶೆರ್ಡನ್ ಶಾಕಿರಿ 20ನೇ ನಿಮಿಷದಲ್ಲೇ ಸ್ವಿಸ್ ಪರ ಗೋಲು ಖಾತೆ ತೆರೆದರು. ಇದರೊಂದಿಗೆ ಕಳೆದ 3 ವಿಶ್ವಕಪ್ ಗಳಲ್ಲೂ ಗೋಲು ಬಾರಿಸಿದ ಕೇವಲ 3ನೇ ಆಟಗಾರನೆನಿಸಿದರು. ಉಳಿದಿಬ್ಬರೆಂದರೆ ಲಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ.
ಆದರೆ ಮುಂದಿನ 15 ನಿಮಿಷಗಳಲ್ಲೇ ಸೆರ್ಬಿಯ ಭಾರೀ ಸದ್ದು ಮಾಡಿತು. ಅಲೆಕ್ಸಾಂಡರ್ ಮೆಟ್ರೋವಿಕ್ (26ನೇ ನಿಮಿಷ) ಮತ್ತು ಡುಸಾನ್ ವ್ಲಾಹೋವಿಕ್ (35ನೇ ನಿಮಿಷ) 2 ಗೋಲು ಬಾರಿಸಿ ಸೆರ್ಬಿಯಕ್ಕೆ ಮಹತ್ವದ ಮುನ್ನಡೆ ಒದಗಿಸಿದರು.
ಇದರಿಂದ ಸ್ವಿಜರ್ಲೆಂಡ್ ಸ್ವಲ್ಪವೂ ಎದೆಗುಂದಲಿಲ್ಲ. ಅದು ಇನ್ನಷ್ಟು ಆಕ್ರಮಣಕಾರಿಯಾಗಿ ಗೋಚರಿಸಿತು. 44ನೇ ನಿಮಿಷದಲ್ಲಿ ಬ್ರಿàಲ್ ಎಂಬೊಲೊ ಆಕರ್ಷಕ ಗೋಲಿನ ಮೂಲಕ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. ಹೀಗೆ ವಿರಾಮದ ಒಳಗಾಗಿ 4 ಗೋಲು ಸಿಡಿದವು.
ದ್ವಿತೀಯಾರ್ಧದಲ್ಲೂ ಆಕ್ರಮಣಕಾರಿ ಆಟದ ಮುನ್ಸೂಚನೆ ಲಭಿಸಿತು. ಮೂರೇ ನಿಮಿಷದಲ್ಲಿ ರೆಮೊ ಫ್ರಾಲರ್ ಸ್ವಿಸ್ ತಂಡದ 3ನೇ ಗೋಲಿಗೆ ಸಾಕ್ಷಿಯಾದರು. ಇದು ಪಂದ್ಯದ ನಿರ್ಣಾಯಕ ಗೋಲೆನಿಸಿತು. ಶೇ. 54ರಷ್ಟು ಸಮಯ ಚೆಂಡನ್ನು ತನ್ನ ಹಿಡಿತದಲ್ಲಿರಿಸಿಕೊಂಡರೂ ಸೆರ್ಬಿಯಕ್ಕೆ ಇದರ ಸಂಪೂರ್ಣ ಲಾಭ ಎತ್ತಲಾಗಲಿಲ್ಲ. ಹಾಗೆಯೇ 69ನೇ ನಿಮಿಷದಲ್ಲಿ ಶೆರ್ಡನ್ ಶಾಕಿರಿ ಹೊರನಡೆದರೂ ಸೆರ್ಬಿಯಕ್ಕೆ ಮೇಲುಗೈ ಸಾಧ್ಯವಾಗಲಿಲ್ಲ.
ಫಲಿತಾಂಶ
ಸ್ವಿಜರ್ಲೆಂಡ್: 03
ಸೆರ್ಬಿಯ: 02
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿರಾಟ್, ಸಚಿನ್, ಗಾವಸ್ಕರ್ ರಂತಹ ಆಟಗಾರರನ್ನು ಮತ್ತೆ ತಯಾರಿಸಲು ಸಾಧ್ಯವಿಲ್ಲ: ಕೋಚ್ ಗುರುಚರಣ್ ಸಿಂಗ್

ಇವನಂತಹ ಆಟಗಾರನನ್ನು ನೋಡಿಲ್ಲ..: ಭಾರತೀಯನನ್ನು ಹಾಡಿ ಹೊಗಳಿದ ರಿಕಿ ಪಾಂಟಿಂಗ್

ಐಸಿಸಿ ವನಿತಾ ಟಿ20 ವಿಶ್ವಕಪ್: ಮತ್ತೊಂದು ಎತ್ತರಕ್ಕೆ ತಲುಪಿದ ವನಿತಾ ಕ್ರಿಕೆಟ್

ಆಸ್ಟ್ರೇಲಿಯನ್ ಓಪನ್: ನೊವಾಕ್ ಜೊಕೋವಿಕ್-ಸಿಸಿಪಸ್ ಪ್ರಶಸ್ತಿ ರೇಸ್

ಇಂಡೋನೇಷ್ಯಾ ಮಾಸ್ಟರ್: ಲಕ್ಷ್ಯ ಸೇನ್ ಪರಾಭವ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ತೆಕ್ಕಟ್ಟೆ: ಕಾರಿಗೆ ಟ್ಯಾಂಕರ್ ಲಾರಿ ಢಿಕ್ಕಿ ; ನಾಲ್ವರು ವಿದ್ಯಾರ್ಥಿಗಳು ಪಾರು !

ಪತ್ರಕರ್ತನನ್ನು ಮರಕ್ಕೆ ಕಟ್ಟಿ ಥಳಿಸಿದ ಕಿಡಿಗೇಡಿಗಳು: ಆರು ಮಂದಿಯ ಬಂಧನ

ಜ. 29ರಂದು ಕಟಪಾಡಿ ಏಣಗುಡ್ಡೆಯಲ್ಲಿ ‘ಕೌಸ್ತುಭ ರೆಸಿಡೆನ್ಸಿ’ ಹೊಟೇಲ್, ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಅಂಬೇಡ್ಕರ್ ಮತ್ತು ಮಹಾ ಆಘಾಡಿಯ ನಡುವೆ ಯಾವುದೇ ಮಾತುಕತೆ ನಡೆದಿಲ್ಲ: ಪವಾರ್