ಅರಬ್‌ ನಾಡಿನಲ್ಲಿ ವಿಶ್ವಕಪ್‌ ಫುಟ್ ಬಾಲ್ ಅಬ್ಬರ; ಏಷ್ಯಾ ದೇಶಕ್ಕೆ ಲಭಿಸಿದ ಅಪರೂಪದ ಆತಿಥ್ಯ

ನ. 20-ಡಿ. 18: ಕತಾರ್‌ನಲ್ಲಿ ಕಾಲ್ಚೆಂಡಿನ ಕಾದಾಟ ; 8 ಸ್ಟೇಡಿಯಂಗಳಲ್ಲಿ ಫುಟ್ ಬಾಲ್ ದಿಗ್ಗಜರ ಮಹಾಸಮರ

Team Udayavani, Nov 20, 2022, 7:00 AM IST

ಅರಬ್‌ ನಾಡಿನಲ್ಲಿ ವಿಶ್ವಕಪ್‌ ಫುಟ್ ಬಾಲ್ ಅಬ್ಬರ; ಏಷ್ಯಾ ದೇಶಕ್ಕೆ ಲಭಿಸಿದ ಅಪರೂಪದ ಆತಿಥ್ಯ

ದೋಹಾ: ಜಾಗತಿಕ ಕ್ರೀಡೆಯ ಮಹಾಸಮರ, ಪ್ರತಿಷ್ಠಿತ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿ ಕತಾರ್‌ನಲ್ಲಿ ರವಿವಾರದಿಂದ ಕಾವೇರಿಸಿಕೊಳ್ಳಲಿದೆ. ಯೂರೋಪ್‌ ಮತ್ತು ಅಮೆರಿಕ ಫ‌ುಟ್‌ಬಾಲ್‌ನ ಬೃಹತ್‌ ಕೇಂದ್ರಗಳಾದರೂ, ಈವರೆಗಿನ ಅಷ್ಟೂ “ಕಪ್‌’ಗಳನ್ನು ಈ ಎರಡೇ ಖಂಡದವರು ಎತ್ತಿದರೂ ಈ ಬಾರಿ ಏಷ್ಯಾದಲ್ಲಿ ಕಾಲ್ಚೆಂಡಿನ ಮಹಾಮೇಳ ನಡೆಯುತ್ತಿರುವುದು ವಿಶೇಷ. ವಿಶ್ವದ 32 ರಾಷ್ಟ್ರಗಳು ಡಿ. 18ರ ತನಕ ಫ‌ುಟ್‌ಬಾಲ್‌ ಸಾಮ್ರಾಜ್ಯವನ್ನು ಆಳಲು ಪೈಪೋಟಿ ನಡೆಸಲಿವೆ. ಹೀಗಾಗಿ ವಿಶ್ವದ ಫ‌ುಟ್‌ಬಾಲ್‌ ಪ್ರೇಮಿಗಳೆಲ್ಲ ಈ ಅರಬ್‌ ನಾಡಿನ ಮೇಲೆ ನೆಟ್ಟ ನೋಟ ಬೀರಲಾರಂಭಿಸಿದ್ದಾರೆ.

ಇದು ಏಷ್ಯಾದಲ್ಲಿ ನಡೆಯುತ್ತಿರುವ ಕೇವಲ 2ನೇ ವಿಶ್ವಕಪ್‌ ಪಂದ್ಯಾವಳಿ. 2002ರಲ್ಲಿ ದಕ್ಷಿಣ ಕೊರಿಯಾ ಮತ್ತು ಜಪಾನ್‌ ಜಂಟಿಯಾಗಿ ಸಂಘಟಿಸಿದ್ದವು. ಹಾಗೆಯೇ 32 ತಂಡಗಳು ಪಾಲ್ಗೊಳ್ಳಲಿರುವ ಕೊನೆಯ ವಿಶ್ವಕಪ್‌ ಕೂಡ ಇದಾಗಬಹುದು. 2026ರಲ್ಲಿ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆಯೋಜಿಸಲಿರುವ ಕೂಟದಲ್ಲಿ 48 ತಂಡಗಳು ಸೆಣಸಲಿವೆ.

ನ. 20ರ ರವಿವಾರ ಕತಾರ್‌ ಪಾಲಿಗೆ ಐತಿಹಾಸಿಕ ದಿನವಾಗಲಿದೆ. ಅದು ತನ್ನ ಮೊದಲ ವಿಶ್ವಕಪ್‌ ಪಂದ್ಯವನ್ನು ಆಡಲಿಳಿಯಲಿದ್ದು, ಫಿಫಾ ರ್‍ಯಾಂಕಿಂಗ್‌ನಲ್ಲಿ ತನಗಿಂತ ಕೇವಲ 5 ಸ್ಥಾನ ಮೇಲಿರುವ ಈಕ್ವಡಾರ್‌ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದೆ.

ಕತಾರ್‌: ಮೊದಲ ವಿಶ್ವಕಪ್‌
ಭಾರತೀಯ ಕಾಲಮಾನದಂತೆ ಸಂಜೆ 7.30ಕ್ಕೆ ಕತಾರ್‌ ಹಾಗೂ ಅರಬ್‌ ಸಂಸ್ಕೃತಿಯನ್ನು ಬಿಂಬಿಸುವ ಉದ್ಘಾಟನ ಸಮಾರಂಭ ನಡೆಯಲಿದೆ. ಇದು ಮುಗಿದ ಬಳಿಕ ಕತಾರ್‌-ಈಕ್ವಡಾರ್‌ ತಂಡಗಳು ಕೂಟಕ್ಕೆ ಚಾಲನೆ ನೀಡಲಿವೆ. ಅಂದಹಾಗೆ, ಕತಾರ್‌ ಫಿಫಾ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಆತಿಥೇಯ ರಾಷ್ಟ್ರವಾದ ಕಾರಣ ಇದಕ್ಕೆ ನೇರ ಪ್ರವೇಶ ಲಭಿಸಿದೆ.

ಕತಾರ್‌ನ ವಿಶ್ವಕಪ್‌ ಆತಿಥ್ಯದ ಹಾದಿ ದುರ್ಗವಾಗಿಯೇ ಸಾಗಿ ಬಂದಿದೆ. ಇದರೊಂದಿಗೆ ಅದೆಷ್ಟೋ ವಿವಾದಗಳು ತಳುಕು ಹಾಕಿಕೊಂಡಿವೆ. ಆದರೂ ಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ, ಜಾಗತಿಕ ಮಟ್ಟದಲ್ಲಿ ತನ್ನ ಛಾತಿಯನ್ನು ಹೆಚ್ಚಿಸಿಕೊಳ್ಳುವುದು ಕತಾರ್‌ನ ಗುರಿಯಾಗಿದೆ.

ಫ‌ುಟ್‌ಬಾಲ್‌ ಇತಿಹಾಸದಲ್ಲೇ ಇದು ಅತ್ಯಂತ ಶ್ರೀಮಂತ ವಿಶ್ವಕಪ್‌ ಆಗಿದೆ. ಕೂಟದ ಸಂಪೂರ್ಣ ವೆಚ್ಚ 16.35 ಲಕ್ಷ ಕೋಟಿ ರೂ.ಗಳಷ್ಟಾಗಲಿದೆ. ನೈಸರ್ಗಿಕವಾಗಿಯೂ ಶ್ರೀಮಂತವಾಗಿರುವ ಕತಾರ್‌ ಈ ವೆಚ್ಚಕ್ಕಾಗಿ ತಲೆ ಕೆಡಿಸಿಕೊಂಡಿಲ್ಲ.

ಫ‌ುಟ್‌ಬಾಲ್‌ ರಾಯಭಾರ
ಕಾರ್ಮಿಕರ ಹಕ್ಕು, ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕತಾರ್‌ ಬರೀ ನಕಾರಾತ್ಮಕ ಸುದ್ದಿಗಳನ್ನೇ ಕೇಳುತ್ತ ಬಂದಿದೆ. ಟೀಕಾಕಾರರ ಬಾಯಿ ಮುಚ್ಚಿಸಬೇಕಾದರೆ ಈ ತೈಲ ರಾಷ್ಟ್ರದ ಮುಂದಿರುವ ಏಕೈಕ ಮಾರ್ಗವೆಂದರೆ, ಕೂಟವನ್ನು ಮಾದರಿಯಾಗಿ ನಡೆಸಿ ಏಷ್ಯಾ ಕೂಡ ಫ‌ುಟ್‌ಬಾಲ್‌ನಲ್ಲಿ ಹಿಂದುಳಿದಿಲ್ಲ ಎಂದು ತೋರಿಸಿ ಕೊಡುವುದು. ಏಷ್ಯಾದಲ್ಲಿ ತಮ್ಮ ರಾಷ್ಟ್ರವನ್ನು “ನ್ಪೋರ್ಟ್ಸ್ ಹಬ್‌’ ಆಗಿ ರೂಪಿಸುವುದು ಈ ಕೂಟದ ಉದ್ದೇಶವಾಗಿದೆ. ಶಾರ್ಜಾ, ಅಬುಧಾಬಿ, ದುಬಾೖಗಳೆಲ್ಲ ಕ್ರಿಕೆಟ್‌ಗೆ ಹೆಸರುವಾಸಿಯಾದರೆ, ಕತಾರ್‌ ವಿಶ್ವದ ನಂ.1 ಕ್ರೀಡೆಯಾದ ಫ‌ುಟ್‌ಬಾಲ್‌ ರಾಯಭಾರ ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಪಂದ್ಯಾವಳಿ ಕುವೈಟ್‌ ದೊರೆ ಶೇಖ್‌ ತಮಿಮ್‌ ಬಿನ್‌ ಹಮದ್‌ ಅಲ್‌ ಥಾನಿ ಅವರಿಗೆ ವಿಶ್ವ ಮಟ್ಟದಲ್ಲಿ ದೊಡ್ಡ ಹೆಸರು ತಂದುಕೊಡಲಿದೆ ಎಂಬುದೊಂದು ಲೆಕ್ಕಾಚಾರ.

32 ರಾಷ್ಟ್ರಗಳ ಸೆಣಸಾಟ
ಒಟ್ಟು 32 ರಾಷ್ಟ್ರಗಳು ಫ‌ುಟ್‌ಬಾಲ್‌ ಚಾಂಪಿಯನ್‌ ಎನಿಸಿಕೊಳ್ಳಲು ಬಿರುಸಿನ ಪೈಪೋಟಿ ನಡೆಸಲಿವೆ. ಇವುಗಳನ್ನು ತಲಾ 4 ದೇಶಗಳ 8 ಗ್ರೂಪ್‌ಗ್ಳಾಗಿ ವಿಂಗಡಿಸಲಾಗಿದೆ. ಪ್ರತೀ ಗ್ರೂಪ್‌ನ 2 ಅಗ್ರಸ್ಥಾನಿ ತಂಡಗಳು ಪ್ರಿ-ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. ಬಳಿಕ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌. ಡಿ. 18ರಂದು ಪ್ರಶಸ್ತಿ ಸಮರ ಏರ್ಪಡಲಿದೆ.

 

ಟಾಪ್ ನ್ಯೂಸ್

ಹೊಸ ರೂಪದಲ್ಲಿ ಐಪಿಎಲ್ ನ ಭಾಗವಾಗಲಿದ್ದಾರೆ ಸ್ಟೀವ್ ಸ್ಮಿತ್

ಹೊಸ ರೂಪದಲ್ಲಿ ಐಪಿಎಲ್ ನ ಭಾಗವಾಗಲಿದ್ದಾರೆ ಸ್ಟೀವ್ ಸ್ಮಿತ್

NIA (2)

ಪ್ರವೀಣ್ ನೆಟ್ಟಾರು ಕೇಸ್ : ಸುಳ್ಯ ಪಿಎಫ್‌ಐ ಕಚೇರಿಯನ್ನು ಜಪ್ತಿ ಮಾಡಿದ ಎನ್‌ಐಎ

4-shivamogga

ಒಳ ಮೀಸಲಾತಿ ಬೇಗುದಿ ; ಯಡಿಯೂರಪ್ಪ ಮನೆಗೆ ಕಲ್ಲು ತೂರಾಟ, ಪ್ರತಿಭಟನೆ

tdy-16

ಆಕಾಂಕ್ಷಾ ದುಬೆ ಬಳಿಕ ಮತ್ತೊಂದು ಘಟನೆ: ನೇಣು ಬಿಗಿದ ಸ್ಥಿತಿಯಲ್ಲಿ ಯುವ ನಟಿ ಪತ್ತೆ

3—harapanahalli

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಬಿಗ್ ಫೈಟ್‌

ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ

ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ

dhawan

’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ರೂಪದಲ್ಲಿ ಐಪಿಎಲ್ ನ ಭಾಗವಾಗಲಿದ್ದಾರೆ ಸ್ಟೀವ್ ಸ್ಮಿತ್

ಹೊಸ ರೂಪದಲ್ಲಿ ಐಪಿಎಲ್ ನ ಭಾಗವಾಗಲಿದ್ದಾರೆ ಸ್ಟೀವ್ ಸ್ಮಿತ್

dhawan

’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್

ಪಾಕ್ ಗೆ ಸರಣಿ ಸೋಲಿನ ಅವಮಾನ: ಐತಿಹಾಸಿಕ ಸಾಧನೆ ಮಾಡಿದ ಅಫ್ಘಾನಿಸ್ಥಾನ

ಪಾಕ್ ಗೆ ಸರಣಿ ಸೋಲಿನ ಅವಮಾನ: ಐತಿಹಾಸಿಕ ಸಾಧನೆ ಮಾಡಿದ ಅಫ್ಘಾನಿಸ್ಥಾನ

BCCI Central Contracts

ಕೇಂದ್ರ ಗುತ್ತಿಗೆ ಪ್ರಕಟಿಸಿದ ಬಿಸಿಸಿಐ: ಜಡೇಜಾಗೆ ಬೋನಸ್, ರಾಹುಲ್ ಗೆ ಭಾರೀ ಹಿನ್ನಡೆ

rcbಐಪಿಎಲ್‌ ಗೂ ಮೊದಲು ಆರ್‌ಸಿಬಿಗೆ ಗಾಯದ ಚಿಂತೆ

ಐಪಿಎಲ್‌ ಗೂ ಮೊದಲು ಆರ್‌ಸಿಬಿಗೆ ಗಾಯದ ಚಿಂತೆ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಹೊಸ ರೂಪದಲ್ಲಿ ಐಪಿಎಲ್ ನ ಭಾಗವಾಗಲಿದ್ದಾರೆ ಸ್ಟೀವ್ ಸ್ಮಿತ್

ಹೊಸ ರೂಪದಲ್ಲಿ ಐಪಿಎಲ್ ನ ಭಾಗವಾಗಲಿದ್ದಾರೆ ಸ್ಟೀವ್ ಸ್ಮಿತ್

NIA (2)

ಪ್ರವೀಣ್ ನೆಟ್ಟಾರು ಕೇಸ್ : ಸುಳ್ಯ ಪಿಎಫ್‌ಐ ಕಚೇರಿಯನ್ನು ಜಪ್ತಿ ಮಾಡಿದ ಎನ್‌ಐಎ

tdy-17

ತಹಶೀಲ್ದಾರ್‌ ದಾಳಿ: ಉಡುಗೊರೆಗಳು ವಶಕ್ಕೆ

ದೈವ ಸಂಘರ್ಷದ ಸುತ್ತ ‘ಆರ’; ಹೊಸಬರ ಸ್ಪಿರಿಚ್ಯುಯಲ್‌ ಡ್ರಾಮಾ

ದೈವ ಸಂಘರ್ಷದ ಸುತ್ತ ‘ಆರ’; ಹೊಸಬರ ಸ್ಪಿರಿಚ್ಯುಯಲ್‌ ಡ್ರಾಮಾ

4-shivamogga

ಒಳ ಮೀಸಲಾತಿ ಬೇಗುದಿ ; ಯಡಿಯೂರಪ್ಪ ಮನೆಗೆ ಕಲ್ಲು ತೂರಾಟ, ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.